ನಾಗಮಂಗಲ:- ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್ ಕಿತ್ತಾಟ ಜೋರಾಗಿದೆ. ನಿಖಿಲ್ ಕುಮಾರಸ್ವಾಮಿ ಸ್ವಾಗತಕ್ಕೆ ಹಾಕಿದ್ದ ಫ್ಲೆಕ್ಸ್, ಹಾಗು ಕಟೌಟ್ ತೆರವಿಗೆ ಯತ್ನ ನಡೆದಿದೆ. ರಾತ್ರೋರಾತ್ರಿ ಪುರಸಭೆ ಸಿಬ್ಬಂದಿಗಳಿಂದ ನಿಖಿಲ್ ಸ್ವಾಗತದ ಫ್ಲೆಕ್ಸ್ ತೆರವಿಗೆ ಯತ್ನಿಸಲಾಗಿದೆ.
ಸಂಜೆ ವಾಕಿಂಗ್ ಮಾಡೋದು ಆರೋಗ್ಯಕ್ಕೆ ಬೆಸ್ಟ್: ಬೆಳಗ್ಗೆ ಟೈಂ ಇಲ್ಲದವರು ಹೀಗೆ ಮಾಡಿ!
ಪುರಸಭೆಯ ಸಿಬ್ಬಂದಿಗಳ ರಾತ್ರಿ ಕಾರ್ಯಾಚರಣೆಗೆ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಫ್ಲೆಕ್ಸ್ ಹಾಗು ಕಟೌಟ್ ತೆರವು ಮಾಡದಂತೆ ಸಿಬ್ಬಂದಿಗಳ ಜೊತೆ ಜೆಡಿಎಸ್ ಕಾರ್ಯಕರ್ತರು ಜಟಾಪಟಿ ನಡೆಸಿದ್ದಾರೆ. ಜಿಲ್ಲಾ ಸಚಿವರ ಆದೇಶದ ಮೇರೆಗೆ ಈ ರೀತಿ ಪುರಸಭೆ ಮೇಲೆ ಒತ್ತಡ ಹಾಕಿ ತೆರವು ಮಾಡ್ತಿರೋದಾಗಿ ಆರೋಪ ಕೇಳಿ ಬಂದಿದೆ.
ನಮ್ಮ ಪಕ್ಷದ ನಾಯಕರ ಆಗಮನಕ್ಕೆ ಹಾಕಿದ್ದ ಫ್ಲೆಕ್ಸ್ ಮಾತ್ರ ತೆರವಿಗೆ ಆಕ್ರೋಶ ಹೊರ ಹಾಕಿದ್ದು, ಇದೇ ರೀತಿ ಮುಂದುವರೆದರೆದರೆ ಪುರಸಭೆ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ. ಜೂ-30 ರಂದು ನಾಗಮಂಗಲಕ್ಕೆ ಪಕ್ಷದ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದು, ಹೀಗಾಗಿ ಜೆಡಿಎಸ್ ನಾಯಕರ ಕಟೌಟ್ ಗಳು ರಾರಾಜಿಸುತ್ತಿದ್ದವು.