ಹುಬ್ಬಳ್ಳಿ: ನಮ್ಮ ಸರಕಾರ ಬಂದ ಮೇಲೆ ಮಳೆಯಿಂದಹಾನಿಯಾದ ಮನೆಗಳ ಪರಿಹಾರ ನೀಡಲಾಗಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಸ್ವಲ್ಪ ಗೊಂದಲದಿಂದಾಗಿ ಹಿಂದಿನ ಪರಿಹಾರ ವಿತರಿಸಿಲ್ಲ. ಈ ಗೊಂದಲ ಪರಿಹರಿಸಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.
ಇತ್ತೀಚೆಗೆ ಸುರಿದ ಮಳೆಗೆ ನಾಲಾದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ ಹಳೆಹುಬ್ಬಳ್ಳಿ ನಿವಾಸಿ ಹುಸೇನಸಾಬ ಕಳಸ ಅವರ ಕುಟಂಬಕ್ಕೆ ಸಾಂತ್ವನ ಹೇಳಿ ಪರಿಹಾರಧನದ ಆದೇಶ ಪ್ರತಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಣ್ಣೆಹಳ್ಳ, ತುಪ್ಪರಿಹಳ್ಳ ಪ್ರವಾಹ, ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ 1600 ಕೋಟಿ ವೆಚ್ಚದಲ್ಲಿ ಡಿಪಿಆರ್ ಸರಕಾರಕ್ಕೆ ಸಲ್ಲಿಸಿದ್ದೇವೆ.
ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!
ಮೊದಲ ಹಂತದಲ್ಲಿ 200 ಕೋಟಿ ವೆಚ್ಚದಲ್ಲಿ 141 ಕಿ.ಮೀ ಹೂಳು ಎತ್ತುವ ಕಾರ್ಯ ನಡೆಯಲಿದೆ. ಮಳೆಗಾಲದ ನಂತರ ಕಾರ್ಯಾರಂಭವಾಗಲಿದೆ. ಬೆಣ್ಣೆಗಳ್ಳ, ತುಪ್ಪರಿಹಳ್ಳದಿಂದ ರೈತರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ನಮ್ಮ ಸರಕಾರ ಈ ಕಾರ್ಯಕ್ಕೆ ಮುಂದಾಗಿದೆ ಎಂದರು.
ಮಹಾನಗರ ವ್ಯಾಪ್ತಿಯಲ್ಲಿ ತೆರೆದ ಚರಂಡಿ ಮುಚ್ಚಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಕೂಡ ಮಳೆಗಾಲ ಸಂದರ್ಭದಲ್ಲಿ ಇಂತಹಸ್ಥಳಗಳಲ್ಲಿ ಜಾಗರೂಕತೆಯಿಂದ ಇರಬೇಕು ಎಂದರು.