ಯಾದಗಿರಿ : ನಾರಾಯಣಪುರ ಡ್ಯಾಂ ನೀರಿಗಾಗಿ ಅನ್ನದಾತರರು ಬೀದಿಗಿಳಿದಿದ್ದಾರೆ. ರೈತರ ಪ್ರತಿಭಟನೆಯಿಂದಾಗಿ ಕೆಬಿಜೆಎನ್ಎಲ್ ಕಚೇರಿಯಿಂದ ನೂರು ಮೀಟರ್ ಅಂತರದಲ್ಲೇ ಎರಡು ಬ್ಯಾರಿಕೇಡ್ ಅಳವಡಿಸಲಾಗಿದೆ.
ಬೀದರ್ – ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿರುವ ಪ್ರತಿಭಟನಾಕಾರರು, ರಾಜ್ಯ ಹೆದ್ದಾರಿಯಲ್ಲೇ ಧರಣಿ ಕುಳಿತಿದ್ದಾರೆ. ಮಾಜಿ ಸಚಿವ ರಾಜುಗೌಡ, ಅಮಿನ್ ರೆಡ್ಡಿ ಯಾಳಗಿ ಸಹ ರೈತರೊಂದಿಗೆ ರಸ್ತೆಯಲ್ಲೇ ಕುಳಿತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಟಿಟಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ; ಇಬ್ಬರ ಸಾವು, ಐವರ ಸ್ಥಿತಿ ಗಂಭೀರ
ಅನ್ನದಾತರ ಪ್ರತಿಭಟನೆ ಹಿನ್ನೆಲೆ ಭಾರೀ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. 1 ಎಎಸ್ಪಿ, 4 ಡಿವೈಎಸ್ಪಿ, 12 ಸಿಪಿಐ, 20 ಪಿಎಸ್ಐ ಸೇರಿ 25 ಎಎಸ್ಐ, 2 ಕೆಎಸ್ಆರ್ಪಿ, 5 ಡಿಎಆರ್ ತುಕ್ಕಡಿ ಸೇರಿ 500 ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿತ್ತು.