ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟದ ಮೀಣ್ಯಂ ಬಳಿ 5 ಹುಲಿಗಳ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ನಂಧಿ ಕಾರಣ ಸಿಬ್ಬಂಧಿಗಳು ಸಮಯ ಪ್ರಜ್ನೆಯಿಂದ ಬೀಟ್ ನಡೆಸಿದ್ರೆ ಐದು ಹುಲಿಗಳ ಅಮೂಲ್ಯ ಜೀವ ಬಲಿಯಾಗ್ತಾ ಇರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಜು.2ರಿಂದ ಭರ್ಜರಿ ಮಳೆ- ಹವಾಮಾನ ಇಲಾಖೆ!
ಅವರು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಡಂಚಿನ ರೈತರು ಜೀವನಕ್ಕಾಗಿ ಹೈನುಗಾರಿಕೆಯಲ್ಲಿ ತೊಡಗಿರುತ್ತಾರೆ. ಕಾಡಂಚಿನಲ್ಲಿ ಆಹಾರ ಅರಸಿದ್ದ ಹಸು ಮೇಲೆ ಹುಲಿ ದಾಳಿ ನಡೆಸಿರುವುದು ವಿಪರ್ಯಾಸ ಆದರೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಗಸ್ತು ನಡೆಸಬೇಕಿತ್ತು ಎಂದರು.
ಮಲೆಮಹದೇಶ್ವರಬೆಟ್ಟ ವನ್ಯದಾಮದ ಡಿ.ಎಫ್ ಓ ಹಾಗೂ ಆರ.ಎಫ.ಓಗಳು ಆ ದಿನ ಘಟನೆಬಗ್ಗೆ ವಿವರ ಪಡೆಯಲು ನಾನೆ ಖುದ್ದು ಕಾಲ್ ಮಾಡಿದ್ರೂ ಕಾಲ್ ರಿಸಿ್ ಮಾಡ್ಲಿಲ್ಲ ಇನ್ನು ಜನ ಸಾಮಾನ್ಯದ ಜೊತೆ ಸರಿಯಾಗಿ ನಡೆದುಕೊಳ್ಳುವುದಿಲ ಅನ್ಮೋದು ಖಚಿತವಾಗಿದೆ.
ಹಾಗಾಗಿ ರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.