ಬಾಗಲಕೋಟೆ : ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ನಾಲ್ಕು ದಿನದ ಹಸುಗೂಸು ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಹೆಬ್ಬಳ್ಳೆವ್ವ ಮತ್ತು ಬಸಪ್ಪ ಹರಿಜನ ಎಂಬುವರ ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. ಹೆಬ್ಬಳ್ಳವ್ವ ಹೆರಿಗೆಗಾಗಿ ಏ.7 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಏ.೮ ರಂದು ನಾರ್ಮಲ್ ಹೆರಿಗೆಯಾಗಿತ್ತು. ಮಗು ಆರೋಗ್ಯವಾಗಿತ್ತು. ತಾಯಿಗೆ ರಕ್ತ ಕಡಿಮೆಯಾದ ಕಾರಣ, ರಕ್ತ ಹಾಕುವ ಪ್ರಕ್ರಿಯೆ ಮಾಡಲಾಗಿತ್ತು. ಈ ವೇಳೆ ಮಗು ಆರೋಗ್ಯವಾಗಿಯೇ ಇತ್ತು. ಸಂಜೆ 7.15ಕ್ಕೆ ಸರಿ ಸುಮಾರಿಗೆ ಹಾಲು ಕುಡಿಸಿ ಮಲಗಿಸಲಾಗಿದೆ. ನಂತರ ೭.೪೦ ರ ವೇಳೆ ಗಮನಿಸಿದಾಗ ಉಸಿರಾಟ ನಿಂತು ಹೋಗಿದೆ. ಮಗುವಿನ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿದ್ದಾರೆ.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅವಘಡ ;ನಾಲ್ವರ ದುರ್ಮರಣ
ಮಗು ಮಲಗಿಸಿದ ವಾರ್ಡ್ ನಲ್ಲಿ ಪ್ಯಾನ್ ಜೋರಾಗಿ ಇಟ್ಟಿದ್ದಾರೆ. ಜೊತೆಗೆ ಮಗುವಿಗೆ ತೇಗು ಬರುವಂತೆ ಮಾಡಲಿಲ್ಲ. ಹಾಲು ನೆತ್ತಿಗೆ ಹತ್ತಿ ಹೈಪೊಥೆರ್ಮಿ ಸಮಸ್ಯೆಯಿಂದ ಮೃತಪಟ್ಟಿರುವ ಶಂಕೆ ಇದೆ. ವೈದ್ಯರು ಯಾರೂ ನಿರ್ಲಕ್ಷ್ಯ ಮಾಡಿಲ್ಲ. ಮಗು ಚೆನ್ನಾಗಿದ್ದ ಕಾರಣ ಯಾವುದೇ ಚಿಕಿತ್ಸೆ ನೀಡುತ್ತಿರಲಿಲ್ಲ ತಾಯಿಗೆ ರಕ್ತ ಕಡಿಮೆಯಾದ ಹಿನ್ನೆಲೆ ತಾಯಿಗೆ ಚಿಕಿತ್ಸೆ ನೀಡಲಾಗ್ತಿತ್ತುಎಂದು ಜಿಲ್ಲಾಸ್ಪತ್ರೆ ಮಕ್ಕಳ ತಜ್ಞೆ ಡಾ.ರಜನಿ ಪಾಟೀಲ್ ಹೇಳಿದರು.