ಬೆಂಗಳೂರು:- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕ್ಟರಿ ಸೆಲೆಬ್ರೇಷನ್ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿದ್ದಾರೆ.
ಟಿಪ್ಪರ್ ಗೆ ತಗುಲಿದ ಕರೆಂಟ್ ವೈಯರ್.. ದಿಢೀರ್ ಹೊತ್ತಿಕೊಂಡ ಬೆಂಕಿ: ಚಾಲಕ ಸಾವು!
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿ ಹಲವರನ್ನು ಸಸ್ಪೆಂಡ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಕಾಲ್ತುಳಿತ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರ್ಸಿಬಿ ಚಾಂಪಿಯನ್ಆದ ಖುಷಿಯಲ್ಲಿದ್ದ ಬೆಂಗಳೂರು ಕೆಲವೇ ಕ್ಷಣಗಳಲ್ಲಿ ಸೂತಕದ ವಾತಾವರಣ ಸೃಷ್ಟಿ ಮಾಡಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುರಂತದಿಂದಾಗಿ 11 ಮಂದಿ ಬಲಿಯಾಗಿದ್ದು, 47 ಮಂದಿ ಗಾಯಗೊಂಡಿದ್ದರು. ಅಲ್ಲದೇ ಇಂದು ನ್ಯಾಯಾಂಗ ತನಿಖೆ ಮಾಡುವಂತೆ ಆದೇಶವನ್ನು ವಹಿಸಿತ್ತು. ಬಳಿಕ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಬಂದ ಸಿಎಂ ಸಿದ್ದರಾಮಯ್ಯನವರು, ಬೆಂಗಳೂರು ಕೇಂದ್ರ ಡಿಸಿಪಿ , ಕಬ್ಬನ್ ಪಾರ್ಕ್ ಡಿವಿಜನ್ ಎಸಿಪಿ, ಇನ್ಸ್ಪೆಕ್ಟರ್ , ಕ್ರೀಡಾಂಗಣ ಎಸಿಪಿ ಅಮಾನತ್ತು, ಬೆಂಗಳೂರು ಕಮಿಷನರ್ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಸಸ್ಪೆಂಡ್ ಆದವರ ವಿವರ:
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ – ಬಿ.ದಯಾನಂದ್
ಅಡಿಷನಲ್ ಕಮಿಷನರ್ – ವಿಕಾಸ್ ಕುಮಾರ್ ವಿಕಾಸ್, ಪಶ್ಚಿಮ ವಿಭಾಗ..
ಡಿಸಿಪಿ – ಶೇಖರ್, ಕೇಂದ್ರ ವಿಭಾಗ..
ಕಬ್ಬನ್ ಪಾರ್ಕ್ ಎಸಿಪಿ – ಬಾಲಕೃಷ್ಣ
ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ – ಗಿರೀಶ್