ಬೆಂಗಳೂರು: ನಾಳೆಯಿಂದ ಲೈಫು ದುಬಾರಿಯಾಗಲಿದೆ. ಈಗಲೇ ಬರೋ ಸಂಬಳದಲ್ಲಿ ಜೀವನ ನಡೆಸೋದು ಹೆಂಗಪ್ಪ ಅನ್ನೋರಿಗೆ ಮುಂದಿನ ತಿಂಗಳ ಬಜೆಟ್ ಮತ್ತಷ್ಟು ದುಬಾರಿಯಾಗಲಿದೆ.. ಇದಕ್ಕೆ ಕಾರಣ ಎಲ್ಲರದ ಬೇರೆ ಏರಿಕೆ.. ಎಸ್… ಸರ್ಕಾರ ಜನರಿಗೆ ಶಾಕ್ ಮೇಲೆ ಶಾಕ್ ಕೊಡ್ತಾನೇ ಇದೆ.. ಮೊದಲಿಗೆ ಮೆಟ್ರೋ ಆಮೇಲೆ ಹಾಲು ಮೊಸರು, ವಿದ್ಯುತ್ ದರ ಏರಿಸಿ, ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದೇ. ಇದೆಲ್ಲದರ ದರ ನಾಳೆ ಅಂಧರೆ ಏ.1ರಿಂದಲೇ ಏರಿಕೆಯಾಗಲಿದೆ.. ಬರೀ ಹಾಲೂ ಮೊಸರಲ್ಲ ಸ್ವಾಮಿ ನೀವು ಬಿಸಾಡೋ ಕಟ್ಟಕ್ಕೂ ಏಪ್ರಿಲ್ 1ರಿಂದ ಕಸಕ್ಕೂ ಸೆಸ್ ಕಟ್ಬೇಕಿದೆ.
ಎಸ್.. ಇಂಧನ ಇಲಾಖೆ ನೌಕರರ ಪಿಂಚಣಿ ಗ್ರಾಚ್ಯೂಟಿಗೋಸ್ಕರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಿಸಿದ್ದ ಸರ್ಕಾರ ಅದೇ ಮಾದರಿಯಲ್ಲಿ ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹ ಧನ ಕೊಡಲು ಹೊರಟಿದೆ. ನಂದಿನಿ ಹಾಲು-ಮೊಸರಿನ ಪರಿಷ್ಕೃತ ದರ ಏ.1ರಿಂದ ಜಾರಿಯಾಗಲಿದೆ.
ಇನ್ನೂ ಹಾಲು ಮತ್ತು ಮೊಸರು ಬೆಲೆ ಹೆಚ್ಚಳವಾಗಿರೋದರಿಂದ ಸದ್ಯದಲ್ಲೇ ಇದರಿಂದ ಹೋಟೆಲ್ನಲ್ಲಿ ಕಾಫಿ, ಟೀ ಸದ್ಯದಲ್ಲೇ ಏರಿಕೆ ಸಾಧ್ಯತೆಯಿದೆ. ಇನ್ನೂ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ, ಅಲ್ಲದೇ ಮಾಸಿಕ ಶುಲ್ಕ 20 ರೂ. ಹೆಚ್ಚಳ, ಇದರಿಂದ 120 ರೂ. ಇದ್ದ ನಿಗದಿತ ಶುಲ್ಕ 140 ರೂ.ಗಳಿಗೆ ಏರಿಕೆ ಮಾಡಲಾಗಿದೆ.
Happy Ramadan Eid 2025: ರಂಜಾನ್ ಹಬ್ಬದ ಮಹತ್ವ, ಇತಿಹಾಸ ಆಚರಣೆಯ ವಿಧಾನ ಹೀಗಿದೆ ನೋಡಿ..!
ಇನ್ನೂ ಕಸ ಸಂಗ್ರಹಕ್ಕೂ ಕೂಡ ಸೆಸ್ ಹಾಕೋಕೆ ನಿರ್ಧರಿಸಲಾಗಿದೆ. ವಸತಿ ಕಟ್ಟಡ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಕೆಜಿಯ ಲೆಕ್ಕದಲ್ಲಿ ಕಸಕ್ಕೆ ಸೆಸ್ ವಿಧಿಸಲಿದ್ದು, ನಾಳೆಯಿಂದ ಈ ನಿಯಮ ಅನ್ವಯವಾಗಲಿದೆ. ಇದಲ್ಲದೇ ಉಕ್ಕು, ಬಿಡಿಭಾಗ ದುಬಾರಿ, ಇದರ ಜೊತೆಗೆ ಬಿಡಿ ಭಾಗ, ಉಕ್ಕುಗಳ ಆಮದು ದರ ಕೂಡ ಏಪ್ರಿಲ್ನಿಂದ ಏರಿಕೆಯಾಗುತ್ತಿದೆ. ಇದರ ಪರಿಣಾಮ ಏಪ್ರಿಲ್ 1 ರಿಂದ ವಾಹನ ಬೆಲೆ ದುಬಾರಿಯಾಗುತ್ತಿದೆ.
ಬಸ್, ಮೆಟ್ರೋ ಬಳಿಕ ಹಾಲು, ಮೊಸರು, ವಿದ್ಯುತ್ ದರ ಏರಿಕೆ ಮಾಡಿ ಮಿಡಲ್ ಕ್ಲಾಸ್ ಮಂದಿಯ ಜೇಬು ಸುಡ್ತಿರೋ ಸರ್ಕಾರ ಇದೀಗ ಇದೀಗ ಲಿಫ್ಟ್, ಟ್ರಾನ್ಸ್ಫಾರ್ಮರ್ (KVA Transformers), ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕ ಏರಿಕೆ ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಇಂಧನ ಇಲಾಖೆ ಲಿಫ್ಟ್, ಟ್ರಾನ್ಸ್ಫಾರ್ಮರ್, ಜನರೇಟರ್ (Generators) ಪರಿಶೀಲನೆ ಮತ್ತು ರಿನೀವಲ್ ಶುಲ್ಕ ಏಕಾಏಕಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಹಿಂದೆ ಇದ್ದ ದರಕ್ಕಿಂತ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡಿದೆ. 800 ರೂ. ನಿಂದ 1,000 ರೂ.ನಷ್ಟಿದ್ದ ಶುಲ್ಕದ ಮೊತ್ತವನ್ನ ಏಕಾಏಕಿ 5,000 ರೂ. ನಿಂದ 8,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇನ್ನೊಂದ್ಕಡೆ ಸರ್ಕಾರಕ್ಕೆ ಗ್ಯಾರಂಟಿಗಳೇ ಹೊರೆಯಾಗುತ್ತಿವೆ. ಈ ಗ್ಯಾರಂಟಿಯ ಭಾರವನ್ನು ಮತ್ತೆ ಜನರ ಮೇಲೆ ಹೊರಿಸ್ತಿದೆ ಕಾಂಗ್ರೆಸ್ ಸರ್ಕಾರ. ಗ್ಯಾರಂಟಿಗಳಿಗಾಗಿ ಸರ್ಕಾರ ಇದೀಗ ಒಂದೊಂದಾಗಿ ಬೆಲೆ ಏರಿಕೆ ಮಾಡುವ ಮೂಲಕ ಜನರಿಂದ ತೆರಿಗೆ ವಸೂಲಿಗೆ ಪ್ಲ್ಯಾನ್ ಮಾಡಿದಂತಿದೆ.