ಹುಬ್ಬಳ್ಳಿ: ಕುಂದಗೋಳ ಗದಗ ಬಸ್ ಪುನರ್ ಆರಂಭ ಆರಂಭವಾಗಿದ್ದು ಆ ಬಸ್ಸನ್ನು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಸ್ಥರು ಬಸ್ ಅನ್ನು ಬರಮಾಡಿಕೊಂಡು ಬಸ್ಸನ್ನು ಮದುವೆನಗಿತ್ತಿ ಹಾಗೆ ಅಲಂಕರಿಸಿ ಅದಕ್ಕೆ ಪೂಜೆ ಸಲ್ಲಿಸುವ ಮೂಲಕ ಬಸ್ ಅನ್ನು ಬಿಳ್ಕೊಡಲಾಯಿತು. ಈ ಬಸ್ಸು ಗದಗದಿಂದ ಮಧ್ಯಾಹ್ನ 1 ಗಂಟೆ ಹೊರಟು ಹುಲಕೋಟಿ ಅಣ್ಣಿಗೇರಿ ಬದ್ರಾಪುರ ನಲವಡಿ ಸಿರುಗುಪ್ಪಿ ಬಂಡವಾಡ್ ಕ್ರಾಸ್ ಬಂಡಿವಾಡ ಮಂಟೂರ ನಾಗರಹಳ್ಳಿ ಗುಡೇನಕಟ್ಟಿ ಮಾರ್ಗವಾಗಿ ಕುಂದಗೋಳ ಪಟ್ಟಣಕ್ಕೆ ತಲುಪುತ್ತದೆ ಅದೇ ಮಾರ್ಗವಾಗಿ 3 ಗಂಟೆಗೆ ಗದಗ ಕಡೆಗೆ ಹೋಗುತ್ತದೆ.
BBMP ಅಧಿಕಾರಿಗಳ ನಿರ್ಲಕ್ಷ್ಯ: ಸಾವು ಬದುಕಿನ ಹೋರಾಟದಲ್ಲಿ ಯುವಕ- ಅಂತದ್ದೇನಾಯ್ತು?
ಪೂಜೆ ಸಲ್ಲಿಸಿ ನಂತರ ರತ್ನ ಭಾರತ ರೈತ ಸಮಾಜದ ಕುಂದಗೋಳ ತಾಲೂಕ ಅಧ್ಯಕ್ಷರು ಬಸವರಾಜ ಯೋಗಪ್ಪನವರ ಮಾತನಾಡಿ, ಗದಗ ಕೆಎಸ್ಆರ್ಟಿಸಿ ಡಿಸಿ ಅವರು ಹಾಗೂ ಸಿಬ್ಬಂದಿ ಗಳಿಗೆ ತಾಳಿಕವಾಗಿ ಬಂದಾದ ಬಸ್ಸನ್ನು ಪುನರ್ ಆರಂಭಿಸುವಂತೆ ಮನವಿ ಸಲ್ಲಿಸಿದ್ದೇವೆ ಮನವಿಗೆ ಸ್ಪಂದಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳು ಈ ಎಲ್ಲ ಗ್ರಾಮದ ಗ್ರಾಮಸ್ಥರಿಗೆ ಹಾಗೂ ಶಾಲಾ ವಿದ್ಯಾರ್ಥಿ ಗಳಿಗೆ ತುಂಬಾ ಅನುಕೂಲ ಮಾಡಿಕೊಟ್ಟ ಎಲ್ಲ ಅಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಗ್ರಾಮದ ವೇದಮೂರ್ತಿ ಚೆನ್ನವೀರ ಸ್ವಾಮಿ ಹಿರೇಮಠ ಬಸ್ಸಿಗೆ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಸಂತೋಷ್ ಹಿರಳ್ಳಿ ಚನ್ನಬಸಪ್ಪ ಸಿದ್ದುನವರ ತಿರಕಪ, ಮಲ್ಲಿಗವಾಡ ಭೀಮಪ್ಪ ಪೂಜಾರ ಮತ್ತು ಸಾಬ್ ಎಲಿಗ್ಯಾರ್ ಶಿವಾನಂದ ತಂಗ್ಯಮ್ಮನವರ ಬಸವರಾಜ ಕಮಲದಿನ್ನಿ ಲಕ್ಷ್ಮವ್ವ ಕಮ್ಮಾರ ಮಂಜುನಾಥ ಮಲ್ಲಿಗವಾಡ ನೇಮಚಂದ್ರ ಯೋಗಪ್ಪನವರ ಕುಸುಮವ್ವ ಮಲ್ಲಿಗವಾಡ ಎಲ್ಲಪ್ಪ ಕಟ್ಟಿಕಾರ ನಿರ್ವಾಹಕರಾದ ಶ್ರೀಕಾಂತ್ ದೇಸಾಯಿ ಕುಮಾರ ಗುರಿಕಾರ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅನೇಕ ಗ್ರಾಮದ ಗ್ರಾಮಸ್ಥರು ಉಪಸಿತರಿದ್ದರು