ಬೆಂಗಳೂರು: ಚಿನ್ನಾಭರಣ, ಹಣ, ವಾಹನಗಳನ್ನು ಕಳ್ಳತನ ಮಾಡಿರುವ ಘಟನೆಯ ಬಗ್ಗೆ ನೀವು ಕೇಳಿರಬಹುದು. ಆದ್ರೆ ಇಲ್ಲೊಂದು ಚಾಲಾಕಿ ಕಳ್ಳರು ಬೆಳಗಿನ ಜಾವ ಸ್ಕೂಟರ್ನಲ್ಲಿ ಬಂದು ಹಾಲು ಕದ್ದು ಎಸ್ಕೇಪ್ ಆಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಾಲುಗಳ್ಳರ ಕಾಟಕ್ಕೆ ಅಂಗಡಿ ಮಾಲೀಕ ಗಿರಿಗೌಡ ಹೈರಾಣಾಗಿದ್ದು, ನಂದಿನಿ ಬೂತ್ ಒಂದರಲ್ಲಿ ಹಾಲಿನ ಪ್ಯಾಕೆಟ್ಗಳನ್ನು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಳಗಿನ ಜಾವ ಹಾಲಿನ ಕ್ರೇಟ್ ಇಳಿಸಿದ ಬಳಿಕ ಎಂಟ್ರಿ ಕೊಡುವ ಕಳ್ಳರು ಬೆಳಗಿನ ಜಾವ 4 ಗಂಟೆಯಿಂದ 5 ಗಂಟೆ ಸಮಯದಲ್ಲಿ ಹಾಲು ಕದ್ದು ಎಸ್ಕೇಪ್ ಆಗುತ್ತಾರೆ. ಇದೇ ತಿಂಗಳ 4ರಂದು ಬೆಳಗಿನ ಜಾವ 4.11ಕ್ಕೆ 2 ಸ್ಕೂಟರ್ಗಳಲ್ಲಿ ಬಂದಿದ್ದ ಕಳ್ಳರು ನಾಲ್ಕೈದು ಲೀಟರ್ ಹಾಲು ಕದ್ದು ಪರಾರಿಯಾಗಿದ್ದರು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.