ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಮಸ್ಯೆಗೆ ಒಂದು ಕಾರಣ ಇದೆ. ಈ ಕಾರಣವನ್ನು ತಿಳಿದು ಸರಿಪಡಿಸಿದರೆ, ಸಮಸ್ಯೆಗಳನ್ನು ಮನೆಯಲ್ಲಿಯೇ ಬಗೆಹರಿಸಬಹುದು. ಹಿಂದೂ ಧರ್ಮದಲ್ಲಿ, ಆಹಾರದಲ್ಲಿ ಕೂದಲು ಬೀಳುವುದನ್ನು ಅಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಆಹಾರದಲ್ಲಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾದರೂ, ಕೆಲವರಿಗೆ ಇದು ಪದೇಪದೇ ಆಗುತ್ತದೆ.
ನಿರುದ್ಯೋಗ ನಿವಾರಣೆಗೆ ಕೃಷಿ ಕ್ಷೇತ್ರ ಆಸರೆ: ಸಚಿವ ಎನ್.ಚಲುವರಾಯಸ್ವಾಮಿ.
ಆಹಾರದಲ್ಲಿ ಪದೇಪದೇ ಕೂದಲು ಕಾಣಿಸಿಕೊಳ್ಳುವುದು ಒಳ್ಳೆಯ ಶಕುನವಲ್ಲ. ಇದು ದುರದೃಷ್ಟ ಅಥವಾ ನಕಾರಾತ್ಮಕ ಶಕ್ತಿಯ ಸಂಕೇತವಾಗಿರಬಹುದು. ಪ್ರಾಚೀನ ಗ್ರಂಥಗಳು ಇಂತಹ ಚಿಹ್ನೆಗಳನ್ನು ಭವಿಷ್ಯದ ಬದಲಾವಣೆ ಅಥವಾ ಸಮಸ್ಯೆಯ ಸೂಚನೆಯಾಗಿ ಪರಿಗಣಿಸುತ್ತವೆ. ಆಹಾರದಲ್ಲಿ ಕೂದಲು ಕಂಡುಬಂದರೆ, ಜಾತಕದಲ್ಲಿ ದೋಷವಿರಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಪದೇ ಪದೇ ನಾವು ಊಟ ಮಾಡುವಾಗ ನಮಗೆ ಕೂದಲುಗಳು ಸಿಗುತ್ತಿದ್ದರೆ ಅದು ಪಿತೃಗಳು ನಮ್ಮ ಮೇಲೆ ಕೋಪಿಸಿಕೊಂಡಿದ್ದಾರೆ ಎಂಬುದರ ಸೂಚನೆಯಾಗಿರಬಹುದು ಅಥವಾ ಇನ್ನಿತರ ಘಟನೆಗಳ ಸೂಚನೆಯಾಗಿರಬಹುದು. ಪದೇ ಪದೇ ಆಹಾದಲ್ಲಿ ಕೂದಲು ಸಿಗುವುದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಊಟ ಮಾಡುವಾಗ ಯಾವಾಗಲೂ ನಿಮಗೆ ಕೂದಲು ಸಿಗುತ್ತಿದ್ದರೆ ಅದು ಯಾವುದರ ಸಂಕೇತ ಮತ್ತು ಈ ಸಮಸ್ಯೆಗೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳೋಣ..
ಆಹಾರದಲ್ಲಿ ನಮಗೆ ಕೂದಲು ಸಿಗುವುದು ಸಾಮಾನ್ಯವಾದ ಘಟನೆ. ಆದರೆ, ಈ ಘಟನೆ ಪದೇ ಪದೇ ಸಂಭವಿಸಿದರೆ ಅದನ್ನು ಶುಭವೆಂದು ಪರಿಗಣಿಸಲು ಸಾಧ್ಯವಿಲ್ಲ. ಅಂತಹ ಘಟನೆಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರಗಳಲ್ಲೂ ಇದರ ಬಗ್ಗೆ ಹೇಳಲಾಗಿದ್ದು, ಕೂದಲು ಬಿದ್ದಿರುವ ಆಹಾರವನ್ನು ಸೇವಿಸಬಾರದು ಎಂದು ಉಲ್ಲೇಖಿಸಲಾಗಿದೆ.
ಕೆಲವೊಮ್ಮೆ ನಾವು ತಲೆ ಕೂದಲನ್ನು ಒರೆಸಿಕೊಳ್ಳುವಾಗ, ತೊಳೆದುಕೊಳ್ಳುವಾಗ ಅಥವಾ ಇನ್ನಾವುದೇ ಕೂದಲಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವಾಗ ಕೂದಲು ಉದುರುವುದು ಅಥವಾ ಆ ಕೂದಲು ನಮಗೆ ಆಹಾರದಲ್ಲಿ ಸಿಗುವುದು ಸಾಮಾನ್ಯ. ಅದೇ ಈ ಘಟನೆ ಪದೇ ಪದೇ ಸಂಭವಿಸಿದರೆ ಅದರ ಬಗ್ಗೆ ಜಾಗರೂಕರಾಗಿರಬೇಕು ಎಂದು ಶಾಸ್ತ್ರ ಹೇಳುತ್ತದೆ.
ಕೆಲವೊಂದು ಮನೆಗಳಲ್ಲಿ ಮಹಿಳೆಯರು ಕೂದಲನ್ನು ಕಟ್ಟಿಕೊಳ್ಳದೇ ಅಡುಗೆ ಮನೆಯಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಅಡುಗೆಯಲ್ಲಿ ಕೂದಲುಗಳು ಕಾಣಿಸಿಕೊಳ್ಳುವುದು ಸಹಜ. ಅಂತಹ ಸಂದರ್ಭದಲ್ಲಿ ನಾವು ನಮ್ಮನ್ನು ಸರಿ ಮಾಡಿಕೊಳ್ಳಬೇಕು. ಕೂದಲು ಆಹಾರದಲ್ಲಿ ಬೀಳದಂತೆ ನಾವು ಏನು ಮಾಡಬೇಕೋ ಅದನ್ನು ಮಾಡಿದರೆ ಉತ್ತಮ. ಒಂದು ವೇಳೆ ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರವೂ ನಿಮಗೆ ಊಟದಲ್ಲಿ ಪದೇ ಪದೇ ಕೂದಲುಗಳು ಸಿಗುತ್ತಿದ್ದರೆ ಶಾಸ್ತ್ರದಲ್ಲಿ, ನಂಬಿಕೆಯಲ್ಲಿ ಅದರದ್ದೇ ಆದ ಅರ್ಥವಿದೆ. ಊಟದಲ್ಲಿ ಯಾವಾಗಲೂ ಕೂದಲು ಸಿಗುತ್ತಿದ್ದರೆ ಅದು ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಗಳು ತಾಂಡವವಾಡುತ್ತಿದೆ ಎಂಬುದರ ಸಂಕೇತವೂ ಆಗಿರಬಹುದು. ಇದು ಲಕ್ಷ್ಮಿ ದೇವಿಯು ನಿಮ್ಮ ಮನೆಯನ್ನು ತೊರೆದು ಹೋಗುವ ಸೂಚನೆಯೂ ಆಗಿರಬಹುದು
ಊಟ ಮಾಡುವಾಗ ಪದೇ ಪದೇ ಕೂದಲು ಸಿಕ್ಕರೆ ಅದು ಪಿತೃ ದೋಷದ ಸಂಕೇತವಾಗಿರಬಹುದು. ಪಿತೃಗಳು ನಿಮ್ಮ ಮೇಲೆ ಅಸಮಾಧಾನಗೊಂಡಿದ್ದರೆ ಅಥವಾ ನಿಮ್ಮ ಕೆಲಸಗಳಿಂದಾಗಿ ಪಿತೃಗಳು ನಿಮ್ಮ ಮೇಲೆ ಕೋಪಿಸಿಕೊಂಡಿದ್ದರೆ ಅಂತಹ ಸಂದರ್ಭದಲ್ಲಿ ಅವರು ಈ ಮೂಲಕ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಪಿತೃ ಪಕ್ಷದ ಸಮಯದಲ್ಲಿ ಈ ಘಟನೆಯು ಸಂಭವಿಸಿದರೆ ಅದು ಖಂಡಿತವಾಗಿಯೂ ಪಿತೃ ದೋಷದಿಂದಾಗಿರುತ್ತದೆ. ಆ ಸಮಯದಲ್ಲಿ ನೀವು ಪಿತೃ ದೋಷದ ನಿವಾರಣೆಗೆ ಪಂಡಿತರ ಸಲಹೆಯನ್ನು ತೆಗೆದುಕೊಳ್ಳಬೇಕು. ಹಾಗೂ ಪಿತೃ ದೋಷದಿಂದ ಮುಕ್ತಗೊಳಿಸುವಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು.
ಆಹಾರದಲ್ಲಿ ಪದೇ ಪದೇ ಅದರಲ್ಲೂ ನಿಮ್ಮಲ್ಲಿ ಅನುಮಾನವನ್ನು ಮೂಡಿಸುವಷ್ಟು ಕೂದಲು ನಿಮಗೆ ಸಿಗುತ್ತಿದ್ದರೆ ಅದನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಇದು ನಿಮ್ಮ ಮೇಲೆ ಯಾರೋ ಮಾಟ, ಮಂತ್ರ ಅಥವಾ ವಾಮಾಚಾರ ಮಾಡಿರುವ ಸೂಚನೆಯಾಗಿರಬಹುದು. ಯಾರೋ ನಿಮ್ಮ ಮೇಲೆ ವಾಮಾಚಾರ ಮಾಡಿದಾಗ ಮಾತ್ರ ಇಂತಹ ಘಟನೆಗಳು ಅತಿಯಾಗಿ ಎದುರಾಗುತ್ತದೆ. ತಾಂತ್ರಿಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವನ್ನುಂಟು ಮಾಡುವ ಸಮಯದಲ್ಲಿ ಇಂತಹ ಘಟನೆಗಳು ನಡೆಯುವುದು ಸಹಜ.
<span;>- ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ದೇವಿಯ ಫೋಟೋವನ್ನು ಅಥವಾ ಚಿತ್ರವನ್ನು ಹಾಕಿ.
<span;>- ಅಡುಗೆ ಮೆನಯಲ್ಲಿ ಆಹಾರ ತಯಾರಿಸುವ ಮೊದಲು ಗಂಗಾಜಲವನ್ನು ಸಿಂಪಡಿಸಿ ನಂತರ ಆಹಾರವನ್ನು ತಯಾರಿಸಬೇಕು.
<span;>- ಇಂತಹ ಘಟನೆಗಳು ಕೆಲವೊಮ್ಮೆ ರಾಹು – ಕೇತು ದೋಷವನ್ನು ಸೂಚಿಸುತ್ತದೆ. ಹಾಗಾಗಿ, ಶನಿವಾರದ ದಿನದಂದು ಕಪ್ಪು ಬಣ್ಣದ ನಾಯಿಗಳಿಗೆ ತಿನ್ನಲು ರೊಟ್ಟಿಯನ್ನು ನೀಡಿ.
ಅಡುಗೆ ಮನೆಯಲ್ಲಿ ಒಂದು ಇಡೀ ನಿಂಬೆ ಹಣ್ಣನ್ನು ಇರಿಸಿ. ನಿಂಬೆ ಹಣ್ಣು ಒಣಗುತ್ತಿದ್ದರೆ ಅಥವಾ ಹಾಳಾಗುತ್ತಿದ್ದರೆ ಅದನ್ನು ಬದಲಾಯಿಸಿ.
<span;>- ನೀವು ತಿನ್ನುವ ಆಹಾರದಲ್ಲಿ ಕೂದಲು ಸಿಕ್ಕರೆ ಅಂತಹ ಆಹಾರವನ್ನು ಸೇವಿಸಬಾರದು
.