ನವದೆಹಲಿ:- ರೈತರಿಗೆ ಹಲವು ಯೋಜನೆ ಜಾರಿಗೆ ತರುವ ಮೂಲಕ ರೈತರ ಬೆನ್ನೆಲುಬಾಗಿ ನಿಂತಿರುವ ಕೇಂದ್ರ ಸರ್ಕಾರವು ರೈತರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಈ ಸಿಹಿ ಸಮಾಚಾರ ತಿಳಿಯಲು ಈ ಸುದ್ದಿ ಪೂರ್ತಿ ಓದಿ.
ಕಮಲ್ ಹಾಸನ್ ಅವರು ನನಗೆ ಸ್ಪೂರ್ತಿ: ವಿವಾದಕ್ಕೆ ಶಿವಣ್ಣ ಫಸ್ಟ್ ರಿಯಾಕ್ಷನ್!
ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ 3 ಲಕ್ಷ ಸಾಲದ ಮೇಲಿನ ಬಡ್ಡಿ ರಿಯಾಯಿತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಅಲ್ಪಾವಧಿ ಸಾಲದ ಮೇಲೆ ವಿಧಿಸಲಾಗುತ್ತಿದ್ದ 7%ನಷ್ಟು ಬಡ್ಡಿ ಮೇಲೆ ಕೇಂದ್ರ ಸರ್ಕಾರ 1.5%ನಷ್ಟು ಬಡ್ಡಿ ರಿಯಾಯಿತಿ ಕೊಡುತ್ತಿದೆ.
ಅಲ್ಲದೇ ಸಮಯಕ್ಕೆ ತಕ್ಕಂತೆ ಸಾಲ ಪಾವತಿಸುತ್ತಿರುವ ರೈತರಿಗೆ 3% ಬಡ್ಡಿ ವಿನಾಯಿತಿಯೂ ಸಿಗಲಿದೆ. ಇದರಿಂದ ಒಟ್ಟಾರೆ ಬಡ್ಡಿದರ 4%ಗೆ ಇಳಿದಂತಾಗಿದೆ. ಇದರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ಸುಮಾರು 7.57 ಕೋಟಿ ರೈತರಿಗೆ ಅನುಕೂಲವಾಗಲಿದೆ.
ಮುಂಗಾರು ಮಳೆ ಅಬ್ಬರಿಸುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ 14 ಖಾರಿಫ್ ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಿಸಿ ರೈತರಿಗೆ ಸಿಹಿಸುದ್ದಿ ಕೊಟ್ಟಿದ್ದು, ಖಾರಿಫ್ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. 2 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ಹುಚ್ಚೆಳ್ಳು ಅಥವಾ ಗುರೆಳ್ಳುಗೆ ಕ್ವಿಂಟಾಲ್ಗೆ ಗರಿಷ್ಠ 820 ರೂ. ಹೆಚ್ಚಿಸಿದೆ. ರಾಗಿ ಕ್ವಿಂಟಾಲ್ಗೆ 596 ರೂ., ಭತ್ತ ಕ್ವಿಂಟಾಲ್ಗೆ 65 ರೂ. ಹೆಚ್ಚಿಸಿದೆ. ತೊಗರಿ ಬೇಳೆ ಕ್ವಿಂಟಾಲ್ಗೆ 450 ರೂ., ಉದ್ದಿನ ಬೇಳೆಗೆ 400 ರೂ. ಬೆಂಬಲ ಬೆಲೆ ಹೆಚ್ಚಿಸಿದೆ