Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Free Gas: ಮಹಿಳೆಯರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಉಚಿತ `ಗ್ಯಾಸ್ ಸಿಲಿಂಡರ್’.! ಹೀಗೆ ಅರ್ಜಿ ಸಲ್ಲಿಸಿ

    By Author AINDecember 21, 2024
    Share
    Facebook Twitter LinkedIn Pinterest Email
    Demo

    ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತೆ. ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತರ ಮನೆಗಳಲ್ಲಿ ಗ್ಯಾಸ್ ಅನಿವಾರ್ಯವಾಗಿದೆ. ಹಳೆಯ ದಿನಗಳು ಕಳೆದು ಹೊಸ ದಿನಗಳು ಬರುತ್ತಿದ್ದಂತೆ ಗ್ಯಾಸ್ ಬಳಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಬಡವರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡುತ್ತಿದೆ.

    ಈ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ಉಚಿತ ಎಲ್.ಪಿ.ಜಿ ಸಂಪರ್ಕವನ್ನು ಒದಗಿಸಲಾಗಿತ್ತು. ಇದೀಗ ಈ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದ್ದು, ಯಾರೆಲ್ಲಾ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು, ಬೇಕಾಗಿರುವ ದಾಖಲೆಗಳು, ಅರ್ಜಿ ಸಲ್ಲಿಸುವುದು ಹೇಗೆ? ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

    ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0:

    ಕೆಲವು ವರ್ಷಗಳ ಹಿಂದೆ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅಡುಗೆಗಾಗಿ ಮಹಿಳೆಯರು ಕಟ್ಟಿಗೆ ಒಲೆಯನ್ನೇ ಬಳಕೆ ಮಾಡುತ್ತಿದ್ದರು, ನಿರಂತರ ಕಟ್ಟಿಗೆ ಬಳಕೆ ಮಾಡುವುದರಿಂದ ಅದರಿಂದ ಬರುವ ಹೊಗೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್‌ ಸಂಪರ್ಕವನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದರು. ಇದೀಗ ಈ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದೆ.

    ಯೋಜನೆಯ ಪ್ರಯೋಜನವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು:

    • ಅರ್ಜಿದಾರ ಮಹಿಳೆ ಭಾರತೀಯ ಪ್ರಜೆಯಾಗಿರಬೇಕು.
    • ಅರ್ಜಿದಾರರು ಈಗಾಗಲೇ ಯಾವುದೇ ಇತರ LPG ಸಂಪರ್ಕವನ್ನು ಹೊಂದಿರಬಾರದು.
    • 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರು.
    • ಅರ್ಜಿದಾರರು BPL ಕಾರ್ಡ್‌ ಹೊಂದಿರಬೇಕು ಅಥವಾ ಅವರ ಹೆಸರು ಅಂತ್ಯೋದಯ ಅನ್ನ ಯೋಜನೆ (AAY) ಯಲ್ಲಿ ಇರಬೇಕು.
    • ಈ ಕೆಳಗಿನ ವರ್ಗಗಳ ಮಹಿಳೆಯರು ಅರ್ಹರು:

    ಪರಿಶಿಷ್ಟ ಜಾತಿ/ಪಂಗಡ

    ಆರ್ಥಿಕವಾಗಿ ಹಿಂದುಳಿದ ವರ್ಗ (EBC)

    ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಫಲಾನುಭವಿಗಳು

    ಅಗತ್ಯವಿರುವ ದಾಖಲೆಗಳು:

    • ಆಧಾರ್ ಕಾರ್ಡ್
    • ಪಡಿತರ ಚೀಟಿ
    • ಬಿಪಿಎಲ್ ಕಾರ್ಡ್
    • ಬ್ಯಾಂಕ್ ಪಾಸ್ಬುಕ್
    • ಮೊಬೈಲ್ ನಂಬರ್‌
    • ವಾಸಸ್ಥಳ ದೃಢೀಕರಣ ಪತ್ರ
    • ಪಾಸ್ಪೋರ್ಟ್ ಸೈಜ್ ಫೋಟೋ

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ:

    • ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು, ಮೊದಲು ನೀವು ಅದರ ಅಧಿಕೃತ ವೆಬ್‌ಸೈಟ್ https://pmuy.gov.in/ ಗೆ ಭೇಟಿ ನೀಡಬೇಕು . ವೆಬ್‌ಸೈಟ್ ತೆರೆದ ನಂತರ, ಅಪ್ಲೈ ಫಾರ್‌ ನ್ಯೂ ಉಜ್ವಲ 2.0 ಕನೆಕ್ಷನ್‌ ಆಯ್ಕೆಯನ್ನು ಕ್ಲಿಕ್‌ ಮಾಡಿ.
    • ನಂತರ ಗ್ಯಾಸ್ ಡಿಸ್ಟ್ರಿಬ್ಯೂಟರ್ ಆಯ್ಕೆಮಾಡಿ, ಇಲ್ಲಿ ನೀವು HP ಗ್ಯಾಸ್, ಭಾರತ್ ಗ್ಯಾಸ್, ಅಥವಾ ಇಂಡೇನ್ ಗ್ಯಾಸ್‌ ಈ ಮೂರಲ್ಲಿ ಒಂದನ್ನು ಆಯ್ಕೆ ಆಯ್ಕೆ ಮಾಡಬೇಕಾಗುತ್ತದೆ.
    • ಬಳಿಕ ನಿಮ್ಮ ಸ್ಥಳಕ್ಕೆ ಹತ್ತಿರಲ್ಲಿ ಲಭ್ಯವಿರುವ ಗ್ಯಾಸ್‌ ವಿತರಕರನ್ನು ಆಯ್ಕೆಮಾಡಿ.
    • ಅರ್ಜಿ ನಮೂನೆಯನ್ನು ಭರ್ತಿ ಮಾಡಿ: ಗ್ಯಾಸ್ ವಿತರಕರನ್ನು ಆಯ್ಕೆ ಮಾಡಿದ ನಂತರ, ಈ ಕೆಳಗೆ ನೀಡಿರುವ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ:
    1. ಹೆಸರು: ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಪ್ರಕಾರ.
    2. ಆಧಾರ್ ಸಂಖ್ಯೆ: ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.

    III. ವಿಳಾಸ: ಪ್ರಸ್ತುತ ಮತ್ತು ಶಾಶ್ವತ ವಿಳಾಸ ಎರಡನ್ನು ಬರೆಯಬಹುದು.

    1. ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಒದಗಿಸಿ.
    2. ಇಮೇಲ್ ಐಡಿ: ಐಚ್ಛಿಕ.

    ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ: ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ, ಅವುಗಳೆಂದರೆ; ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಖಾತೆ ವಿವರಗಳು, ಪಾಸ್‌ಪೋರ್ಟ್ ಸೈಜ್‌ ಫೋಟೋ.

    ಅರ್ಜಿ ನಮೂನೆಯನ್ನು ಸಲ್ಲಿಸಿ: ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, “ಸಲ್ಲಿಸು” ಬಟನ್ ಕ್ಲಿಕ್ ಮಾಡಿ. ಒಮ್ಮೆ ಸಲ್ಲಿಸಿ ಆಯ್ಕೆ ಕ್ಲಿಕ್‌ ಮಾಡಿದ ನಂತರ ನೀವು ಅರ್ಜಿ ಸಂಖ್ಯೆಯೊಂದಿಗೆ ಸ್ವೀಕೃತಿ ರಶೀದಿಯನ್ನು ಸ್ವೀಕರಿಸುತ್ತೀರಿ.

    ಅರ್ಜಿ ಸಲ್ಲಿಸಿದ ನಂತರ, ನಿಮ್ಮ ವಿವರಗಳು ಮತ್ತು ದಾಖಲೆಗಳನ್ನು ಗ್ಯಾಸ್ ಏಜೆನ್ಸಿ ಪರಿಶೀಲಿಸುತ್ತೆ ಮತ್ತು ನಿಮ್ಮ ಅರ್ಹತಾ ಮಾನದಂಡಗಳನ್ನು ಸರಿಯಾಗಿದ್ದರೆ ನಿಮಗೆ LPG ಗ್ಯಾಸ್ ಸಂಪರ್ಕವನ್ನು ಒದಗಿಸಲಾಗುತ್ತದೆ.

     

     

    Demo
    Share. Facebook Twitter LinkedIn Email WhatsApp

    Related Posts

    ಹಿಂದಿಯ ಖ್ಯಾತ ಸೀರಿಯಲ್ ಶೂಟಿಂಗ್ ಸೆಟ್ ನಲ್ಲಿ ಭೀಕರ ಬೆಂಕಿ ಅವಘಡ: ಅರ್ಧಕ್ಕೆ ನಿಲ್ಲುತ್ತಾ ಧಾರವಾಹಿ?

    June 23, 2025

    ಚಿನ್ನ ವಂಚಕಿ ಐಶ್ವರ್ಯಾ ಗೌಡಗೆ ಭಾರೀ ಸಂಕಷ್ಟ: ED ಇಂದ ಆಸ್ತಿ ಮುಟ್ಟುಗೋಲು!

    June 23, 2025

    ಇ.ಡಿ ಫೇಸ್ ಮಾಡೋಕೆ ನಮ್ಮ ಕುಟುಂಬ ರೆಡಿ: DCM ಡಿಕೆ ಶಿವಕುಮಾರ್!

    June 23, 2025

    ಇಡಿ ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ: ಡಿಕೆ ಸುರೇಶ್!

    June 23, 2025

    ಜಮ್ಮುವಿನಲ್ಲಿ ಲ್ಯಾಂಡ್ ಆಗದೆ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್..! ಯಾಕೆ ಗೊತ್ತಾ..?

    June 23, 2025

    BCCI New Rules: ಬೆಂಗಳೂರು ಕಾಲ್ತುಳಿತ ಕೇಸ್: ಸಂಭ್ರಮಾಚರಣೆಗಳಿಗೆ ಕಠಿಣ ನಿಯಮ ಜಾರಿಗೊಳಿಸಿದ ಬಿಸಿಸಿಐ

    June 23, 2025

    ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು: ಛಲವಾದಿ ನಾರಾಯಣಸ್ವಾಮಿ

    June 23, 2025

    IndiGo Pilot: ಪೈಲಟ್ ಆಗಲು ನೀನು ಯೋಗ್ಯನಲ್ಲ, ಹೋಗಿ ಸ್ಯಾಂಡಲ್ ಹೊಲಿಯಿರಿ: ಹಿರಿಯ ಅಧಿಕಾರಿಗಳಿಂದ ಕಿರುಕುಳ!

    June 23, 2025

    ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ: ಬಿಎಸ್ ಯಡಿಯೂರಪ್ಪ

    June 23, 2025

    ED ನನ್ನ ಮೇಲೂ ಕೇಸ್ ಹಾಕಿತ್ತು. ಆಮೇಲೆ ಏನಾಯಿತು?. ಯಾರೂ ನನ್ನ ರಕ್ಷಣೆಗೆ ಬಂದಿರಲಿಲ್ಲ: ಡಿ. ಕೆ. ಶಿವಕುಮಾರ್

    June 23, 2025

    ಈ ಸರ್ಕಾರ ರಾಜ್ಯವನ್ನು ಏಳಿಗೆ ಕಡೆಗೆ ತೆಗೆದುಕೊಂಡು ಹೋಗುವುದಿಲ್ಲ: ಕುಮಾರ್ ಬಂಗಾರಪ್ಪ

    June 23, 2025

    PM Kisan 20th Installment: ಈ ದಿನವೇ ನಿಮ್ಮ ಖಾತೆ ಸೇರಲಿದೆ 2000 ರೂಪಾಯಿ..! ಇಲ್ಲಿದೆ ಡಿಟೈಲ್ಸ್

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.