ಹಾವೇರಿ: ಜಾತಿಗಣತಿ ಜಾರಿಗೆ ತಂದರೆ ಖಚಿತವಾಗಿ ಸರ್ಕಾರ ಪತನವಾಗಲಿದೆ ಎಂದು ಡಾ.ವೀರಸೋಮೇಶ್ವರ ಶಿವಾಚಾರ್ಯ ರಂಭಾಪುರಿ ಜಗದ್ಗುರು ಸ್ಫೋಟಕ ಬಾಂಬ್ ಸಿಡಿಸಿದ್ದಾರೆ. ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಲ ಪಟ್ಟಣದಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ಧುರೀಣರು ಹೇಳಿದ್ದಾರೆ. ಅಖಿಲ ಭಾರತ ಲಿಂಗಾಯತ ಸಮುದಾಯದ ಇದನ್ನು ಒಪ್ಪಿಕೊಂಡಿಲ್ಲ, ಆದ್ದರಿಂದ ಜಾತಿಗಣತಿ ಜಾರಿಗೆ ತಂದರೆ ಖಚಿತವಾಗಿ ಸರ್ಕಾರ ಪತನವಾಗಲಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಅಖಿಲ ಭಾರತ ವೀರೇಶ್ವರ ಸಮಾಜದ ವತಿಯಿಂದ ಜಾತಿಗಣತಿ ಮಾಡಲು ನಿರ್ಧಾರ ಮಾಡಿದ್ದಾರೆ. ಶಂಕರ್ ಬಿದರಿ ನೇತ್ರತ್ವದಲ್ಲಿ ಈ ಕಾರ್ಯ ನಡೆಯುತ್ತದೆ. ಅಷ್ಟು ಸುಲಭದ ಮಾತಲ್ಲ. ವೀರಶೈವ ಲಿಂಗಾಯತ , ಒಕ್ಕಲಿ ಸಮಾಜ ವಿಂಗಡಣೆ ಮಾಡಿದ್ದು ಸರಿಯಲ್ಲ. ಇದನ್ನ ಪುನಃ ಪರಿಶೀಲನೆ ಮಾಡಿ, ಜಾರಿಗೆ ಮಾಡಬೇಕು. ಮನೆ ಮನೆಗೆ ಜಾತಿಗಣತಿ ಸರಿಯಾಗಿ ಆಗಿಲ್ಲ ಎಂದು ಅನೇಕ ರಾಜಕೀಯ ಮುಖಂಡರು ಹೇಳಿದ್ದಾರೆ.
Chanakya Niti: ಚಾಣಕ್ಯನ ಪ್ರಕಾರ ಮಕ್ಕಳ ವಿಷಯದಲ್ಲಿ ಪೋಷಕರು ಈ ತಪ್ಪುಗಳನ್ನು ಮಾಡಬಾರದು…!
ನಾವೇನಾದರೂ ಹೆಚ್ಚು ಕಮ್ಮಿ ಮಾತನಾಡಿದರೆ ರಾಜಕೀಯ ಅಂತಾರೆ. ಪುನಃ ಪರಿಶೀಲನೆ ಮಾಡಿ ಮೀಸಲಾತಿಯನ್ನ ನೀಡಬೇಕು. ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಇದು, ಕೆಲವು ಸಮುದಾಯದ ಒಲೈಕೆಯ ಜಾತಿಗಣತಿ ಜಾರಿಗೆ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಭಾರತದ ಸಂವಿಧಾನದ ಪ್ರಕಾರ ಯಾರಿಗೆ ಎಷ್ಟು ಮೀಸಲಾತಿ ನೀಡಬೇಕು ಎಂದು ಡಾ.ವೀರಸೋಮೇಶ್ವರ ಶಿವಾಚಾರ್ಯ ರಂಭಾಪುರಿ ಜಗದ್ಗುರು ಹೇಳಿದ್ದಾರೆ.