ದೇವನಹಳ್ಳಿ: ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ಎಂದೇ ಪ್ರಸಿದ್ದಿ ಪಡೆದ ಬೂಕರ್ (Booker Prize) ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮೂಡಿಗೆರಿಸಿಕೊಂಡ ಕನ್ನಡತಿಯರಿಗೆ ತಾಯ್ನಾಡಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೂಕರ್ ವಿಜೇತೆ ಬಾನು ಮುಷ್ತಾಕ್ ಮತ್ತು ದೀಪ ಭಸ್ತಿಗೆ ಸಂಭ್ರಮದ ಸ್ವಾಗತ ಸಿಕ್ಕಿದೆ.
ಕೊಲೆ ಆರೋಪಿ ದರ್ಶನ್ ವೀಸಾ ವಿಷಯ..ಇವತ್ತು ಕೋರ್ಟ್ನಲ್ಲಿ ಏನೇನಾಯ್ತು?
ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯಿಂದ ಡೊಳ್ಳು ಕುಣಿತ ತಂಡದೊಂದಿಗೆ ಅದ್ದೂರಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬರಮಾಡಿಕೊಂಡರು. ಬಾನು ಮುಷ್ತಾಕ್ ರ ಎದೆಯ ಹಣತೆ ಎಂಬ ಕನ್ನಡ ಕೃತಿಯನ್ನು ದೀಪಭಸ್ತಿ ಇವರು ಇಂಗ್ಲಿಷ್ ಗೆ ಹಾರ್ಟ್ ಲ್ಯಾಂಪ್ ಎಂಬ ಹೆಸರಿನಲ್ಲಿ ಭಾಷಾಂತರ ಮಾಡಿದ್ದರು. ಒಂದೇ ಕೃತಿಗೆ ಇಬ್ಬರಿಗೂ, ಅದರಲ್ಲೂ ಕನ್ನಡಿಗರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಿಕ್ಕಿರುವುದು ಐತಿಹಾಸಿಕ ದಾಖಲೆ.
ಭಾರತದ ಇತಿಹಾಸದಲ್ಲಿ ಬೂಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಸಣ್ಣ ಕಥೆಗಳ ಸಂಕಲನ ಎಂಬ ಹಿರಿಮೆ ಹಾರ್ಟ್ ಲ್ಯಾಂಪ್ ಗೆ ಸಲ್ಲುತ್ತದೆ.