ಹಾವೇರಿ ; ಇತ್ತೀಚಿಗಷ್ಟೇ ವಂದೇ ಭಾರತ್ ಟ್ರೈನ್ ಹಾವೇರಿಯಲ್ಲಿ ನಿಲುಗಡೆಯಾಗುವ ಬಗ್ಗೆ ಘೋಷಿಸಲಾಗಿತ್ತು. ಇಂದು ಹಾವೇರಿಯಲ್ಲಿ ವಂದೇ ಭಾರತ್ ಟ್ರೈನ್ ನಿಲುಗಡೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಲಾಗಿದೆ.
ಪ್ರತಿದಿನ ಧಾರವಾಡದಿಂದ ಬೆಂಗಳೂರು,ಮತ್ತು ಬೆಂಗಳೂರಿನಿಂದ-ಧಾರವಾಡ ಸಂಚರಿಸುವ ವಂದೇ ಭಾರತ ಟ್ರೈನ್ ಇಂದಿನಿಂದ ಹಾವೇರಿಯಲ್ಲಿ ಸಹ ನಿಲ್ಲಿಸಲಾಗುವುದು. ಮೈಲಾರ ಮಹಾದೇವಪ್ಪ ರೈಲ್ವೆ ನಿಲ್ದಾಣದಲ್ಲಿ ಟ್ರೈನ್ ಗೆ ಕೇಂದ್ರ ರಾಜ್ಯ ಜಲಶಕ್ತಿ ಮತ್ತು ರೈಲ್ವೆ ಸಚಿವ ವಿ ಸೋಮಣ್ಣರಿಂದ ಹಸಿರು ನಿಶಾನೆ ತೋರಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು, ಅಧಿಕಾರಿಗಳು ಭಾಗಿಯಾಗಿದ್ದರು.
ವಂದೇ ಭಾರತ ಟ್ರೈನ್ ಗೆ ಹಸಿರು ನಿಶಾನೆ ತೋರಿಸಿದ ಕೇಂದ್ರ ರೈಲ್ವೇ ಸಚಿವ ವಿ.ಸೋಮಣ್ಣ ಮತ್ತು ಬಸವರಾಜ್ ಬೊಮ್ಮಾಯಿ ಪ್ರಯಾಣ ಬೆಳೆಸಿದ್ದಾರೆ. ಇನ್ನೂ ಇಂದಿನಿಂದ ಹಾವೇರಿಯಲ್ಲೂ ವಂದೇ ಭಾರತ್ ಟ್ರೈನ್ ನಿಲುಗಡೆಯಾಗುವುದು.