ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.
ಇನ್ಮುಂದೆ ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡಿದ್ರೆ ದಂಡದ ಜೊತೆ ಜೈಲೂಟ ಫಿಕ್ಸ್!
ಕನ್ನಡದಿಂದ ತೆಲುಗಿಗೆ..ವಲಸೆ ಹೋಗಿ ಆ ನಂತರ ಅಲ್ಲಿಂದ ಕೂಡ ಕಾಲ್ಕಿತ್ತ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ನಲ್ಲಿ ಬಿಡಾರ ಹೂಡಿದ್ದಾರೆ. ಕನ್ನಡ ಸಿನಿಮಾಗಳಿಂದ ಸಿನಿಪಯಣವನ್ನ ಆರಂಭಿಸಿದ ನ್ಯಾಷನಲ್ ಕ್ರಷ್ ರಶ್ಮಿಕಾ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಸದ್ಯ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಸಾಲಿನಲ್ಲಿ ನಟಿ ರಶ್ಮಿಕಾ ಕೂಡಾ ಒಬ್ಬರು.
ಟಾಲಿವುಡ್ನಲ್ಲಿ ಸ್ಟಾರ್ ನಟರ ಜೊತೆ ಸಿನಿಮಾಗಳನ್ನ ಮಾಡಿರುವ ರಶ್ಮಿಕಾಗೆ ಪುಷ್ಪ ಪಾರ್ಟ್-1 ಹಾಗೂ ಪುಷ್ಪ-2 ಸಿನಿಮಾಗಳು ಬೇರೆಯದ್ದೇ ಮೈಲೇಜ್ ನೀಡಿವೆ. ಇನ್ನು ಬಾಲಿವುಡ್ನಲ್ಲಿ ನಟಿಸಿದ ಅನಿಮಲ್ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ರಶ್ಮಿಕಾಗೆ ಡಿಫರೆಂಟ್ ಇಮೇಜ್ ಕ್ರಿಯೇಟ್ ಮಾಡಿದೆ. ಈ ಮೂಲಕ ಭಾರೀ ಬೇಡಿಕೆಯನ್ನ ಹೆಚ್ಚಿಸಿಕೊಂಡಿದ್ದ ರಶ್ಮಿಕಾ ಹಾಗೂ ಅವ್ರ ಅಭಿಮಾನಿ ಬಳಗ ಶಾಕ್ಗೆ ಒಳಗಾಗುವ ಸುದ್ದಿಯೊಂದು ಹರಿದಾಡ್ತಿದೆ.
ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಆದ್ರೆ ಸಲ್ಮಾನ್ ಖಾನ್ ಜೊತೆ ನಟಿಸಿದ `ಸಿಕಂದರ್’ ಸಿನಿಮಾ ರಶ್ಮಿಕಾ ಕೆರಿಯರ್ಗೆ ದೊಡ್ಡ ಆಘಾತ ತಂದೊಡ್ಡಿದೆ. ಅಲ್ಲದೇ ಇದೇ ತಿಂಗಳು ಜೂನ್ 20ಕ್ಕೆ ಕುಬೇರ ಸಿನಿಮಾ ತೆರೆಕಂಡಿದೆ. ಆದ್ರೆ ರಶ್ಮಿಕಾ ಸುದ್ದಿನೇ ಇಲ್ಲ ಅನ್ನೋ ಚರ್ಚೆ ಶುರುವಾಗಿದೆ. ಜೊತೆಗೆ ಈ ಬೆಳವಣಿಗೆಯಿಂದ ರಶ್ಮಿಕಾ ಮಂದಣ್ಣ ಸಂಭಾವನೆ ಕೂಡಾ ಕಮ್ಮಿ ಮಾಡಿಕೊಂಡಿದ್ದಾರೆ ಅನ್ನೋ ಚರ್ಚೆ ಕೂಡಾ ಶುರುವಾಗಿದೆ.
ಅಂದಹಾಗೆ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿರುವ ಮುಂದಿನ ಸಿನಿಮಾಗಳು ಸಹ ಹೇಳಿಕೊಳ್ಳುವ ಹಾಗಿಲ್ಲ. ಹೀಗಾಗಿ ಎಲ್ಲೋ ಒಂದು ಕಡೆ ರಶ್ಮಿಕಾಗೆ ಆಫರ್ಸ್ ಕಮ್ಮಿ ಆಗುತ್ತಿದೆಯಾ ಅನ್ನಿಸುತ್ತಿದೆ. ಹೀಗಾಗಿ ತಮ್ಮ ಮುಂದಿನ ಸಿನಿಮಾಗಳಿಗೆ ಸಂಭಾವನೆಯನ್ನ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ