ಹಾಸನ:- ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವರ್ಗಾವಣೆ ಹಿನ್ನೆಲೆ ಹಾಸನ ಜಿಲ್ಲಾಡಳಿತ ವತಿಯಿಂದ ನಿರ್ಗಮಿತ ಡಿಸಿ ಸತ್ಯಭಾಮಾರಿಗೆ ಬೀಳ್ಕೊಡಲಾಗಿದೆ. ಬೀಳ್ಕೊಡುಗೆ ಸ್ವೀಕರಿಸಿ ಸತ್ಯಭಾಮ ಅವರು ಕಾರಿನತ್ತ ಹೊರಟಿದ್ದ ವೇಳೆ ಅರಕಲಗೂಡು ತಾಲ್ಲೂಕು ಕಚೇರಿಯ ಶಿರಸ್ತೆದಾರ್ ಸ್ವಾಮಿ ಕಣ್ಣೀರು ಹಾಕಿದ್ದಾರೆ.
Mobile Charging: ನಿಮ್ಮ ಫೋನ್ ಚಾರ್ಜ್ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್ ಫಾಲೋ ಮಾಡಿ!
ಡಿಸಿ ಕಾರು ಹತ್ತಿ ಹೊರಡಲು ಮುಂದಾದಾಗ ಶಿರಸ್ತೆದಾರ್ ಸ್ವಾಮಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಅಳಬಾರದು ಸುಮ್ಮನಿರಿ ಎಂದು ನಿರ್ಗಮಿತ ಡಿಸಿ ಸತ್ಯಭಾಮ ಸಮಾಧಾನ ಮಾಡಿದ್ದಾರೆ. ಇನ್ನೂ ಸತ್ಯಭಾಮ ಅವರು, ರಾಜ್ಯ ಸಮಗ್ರ ಶಿಕ್ಷಣ ಇಲಾಖೆ ಯೋಜನಾ ನಿರ್ದೇಶಕಿ ಹುದ್ದೆಗೆ ವರ್ಗಾವಣೆಗೊಂಡಿದ್ದಾರೆ. ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಸತ್ಯಭಾಮ ಬೆಂಗಳೂರಿಗೆ ತೆರಳಿದ್ದಾರೆ.