ಮಂಡ್ಯ: – ದ್ವೇಷದ ಜನಗಣತಿ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಶಾಸಕ ಗಣಿಗ ರವಿಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ: ಸಂಸದ ರಮೇಶ ಜಿಗಜಿಣಗಿ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕುಮಾರಣ್ಣ ಬರಿ ದ್ವೇಷ ಮಾಡೋದು,
ಹೊಡೆದಾಟ ಇದೆ ಅವರದು.
ಮಾಜಿ ಸಿಎಂ, ಮಾಜಿ ಪ್ರಧಾನಿ ಮಗ ಸಲಹೆ ಕೊಡಲಿ ಸ್ವೀಕಾರ ಮಾಡ್ತೇವೆ. ಎಲ್ಲರ ಮೇಲೆ ದಾಳಿ ಮಾಡೋದ್ರಿಂದ ಸಮಾಜವನ್ನು ಮೇಲಕ್ಕೆತ್ತಲ್ಲಾಗಲ್ಲ. ಒಕ್ಕಲಿಗರಿಗೆ ಏನಾಗಬೇಕು ಅಂತ ಸಲಹೆ ಕೊಡಲಿ. ಅದನ್ನ ಬಿಟ್ಟು ಬರಿ ಬೈದು ಕೊಂಡು ಓಡಾಡಿದ್ರೆ ಒಕ್ಕಲಿಗರನ್ನ ಉದ್ದಾರ ಮಾಡಕ್ಕಾಗಲ್ಲ. ಎರಡೂ ಬಾರಿ ಮುಖ್ಯಮಂತ್ರಿ ಆಗಿದ್ದವರು ಸಲಹೆ ಕೊಡಲಿ. ಅದನ್ನ ಬಿಟ್ಟು ಬರಿ ಮಾತನಾಡಿದ್ರೆ ಏನು ಪ್ರಯೋಜನ ಇಲ್ಲ ಎಂದರು.
ಪೆನ್,ಪೇಪರ್ ಕೇಳಿದ ವ್ಯಕ್ತಿ ಸಮಾಜವನ್ನು ಮರಣಶಾಸನ ಬರೆಯಲು ಹೊರಟಿದ್ದಾರೆ ಎಂಬ ಎಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಡಿಕೆ ಶಿವಕುಮಾರ್ ಪೆನ್ನು ಪೇಪರ್ ಕೋಡಿ ಅಂತ ಕೇಳಿದ್ದು ನಿಜ. ಡಿಕೆಶಿ ಅವರೇನು ಜಾತಿ ಗಣತಿ ಮಾಡಿಲ್ಲ. ಒಬ್ಬರ ಕಾಲು ಒಬ್ಬರು ಎಳೆದು ಸಮಾಜ ಈ ಪರಿಸ್ಥಿತಿಗೆ ಬಂದಿದೆ. ಸಮಾಜ ಸಂಕಷ್ಟದಲ್ಲಿದ್ದಾಗ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದರು.
ಮಂಡ್ಯ ಅಭಿವೃದ್ಧಿಗೆ ಬಗ್ಗೆ ಹೆಚ್.ಡಿ.ರೇವಣ್ಣ ಬಹಿರಂಗ ಚರ್ಚೆಗೆ ಆಹ್ವಾನ ವಿಚಾರವಾಗಿ ಮಾತನಾಡಿ, ಮಂಡ್ಯಕ್ಕೆ ಕೃಷಿ ವಿವಿ ಹಾಸನಕ್ಕೆ ಬೇಕು ಅಂತ ಬೇಕು ಅನ್ನೋರು ಮಂಡ್ಯಕ್ಕೇನು ಮಾಡಿದ್ದಾರೆ. ಜೆಡಿಎಸ್ ನವರು ಮಂಡ್ಯ ಅಭಿವೃದ್ಧಿ ವಿಚಾರದಲ್ಲಿ ಸೊನ್ನೆ. ಮಂಡ್ಯ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇಲ್ಲ.
ಒಂದು ರಸ್ತೆಗೆ ಡಾಂಬರಿಕರಣ ಮಾಡಿಸಿಲ್ಲ. ನಾಲೆ ಅಭಿವೃದ್ಧಿಗೆ ಏನಾದರೂ ಅನುದಾನ ತಂದಿದ್ದೇನೆ ಅಂತ ಶ್ವೇತಪತ್ರ ತರಲಿ. ರೇವಣ್ಣ ಹಾಸನ ಅಭಿವೃದ್ಧಿ ಮಾಡಿದ್ದಾರೆ, ಮಂಡ್ಯಕ್ಕೆ ಏನು ಮಾಡಿಲ್ಲ. ಎಲ್ಲಿಗಾದರು ಬರಲಿ ಚರ್ಚೆಗೆ ನಾನು ಸಿದ್ದ. ಯೂನಿವರ್ಸಿಟಿ ಮಾಡಿದ್ದು ಬಿಜೆಪಿಯವರು. ನಾನು ಸಂಬಳ ಕೊಡ್ತಿದ್ದೇವೆ, ಮಂಡ್ಯ ವಿವಿ ಉಳಿಸಿದ್ದೇವೆ. ನಮ್ಮ ಮುಖ್ಯಮಂತ್ರಿಯಿಂದ ಹೆಚ್ಚಿನ ಅನುದಾನ ತಂದು ಹಲವಾರು ಕಾರ್ಯ. ನನ್ನ ಕ್ಷೇತ್ರದಲ್ಲಿ 250 ಕೋಟಿಗೂ ಹೆಚ್ವಿನ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.