Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಓದಿದ್ದು 10 ಕ್ಲಾಸ್, ಈತ ಮಾಡ್ತಿರೋದು ಡಾಕ್ಟರ್ – ಹೇಗೆ ಅಂತೀರಾ!?

    By AIN AuthorDecember 2, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು:– ಈತ ಓದಿದ್ದು ಬರೀ SSLC, ಆದ್ರೆ ಇವನು ವೃತ್ತಿಯಲ್ಲಿ ಡಾಕ್ಟರ್‌. ಅರೆ ಹೇಗೆ ಅಂತೀರಾ!? ಈ ಸ್ಟೋರಿ ಪೂರ್ತಿ ಓದಿ.

    ಹಸುಗೂಸು ಮಾರಾಟ ಹಗರಣದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬ ನಕಲಿ ವೈದ್ಯನೂ ಇದ್ದಾನೆ. ಅವನೇ ಕೆವಿನ್‌ ಅಲಿಯಾಸ್‌ ಕರಣ್‌.

    ಬಡ ಕುಟುಂಬಗಳ ಗರ್ಭಿಣಿಯರನ್ನು ಮೊದಲೇ ಗೊತ್ತು ಮಾಡಿಕೊಂಡು ಅವರಿಗೆ ಹಣದ ಆಮಿಷ ಒಡ್ಡಿ, ಹೆರಿಗೆಯಾಗುತ್ತಿದ್ದಂತೆಯೇ ಮಗುವನ್ನು ಬೇರೆಯವರಿಗೆ ಮಾರಾಟ ಮಾಡುವ ಜಾಲ ಇದಾಗಿದೆ.

    ಐವಿಎಫ್‌ ನಂಥ ಕೃತಕ ಗರ್ಭಧಾರಣಾ ವಿಧಾನದ ಮೂಲಕವೂ ಮಕ್ಕಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಸುಹಾಸಿನಿ, ಶರಣ್ಯ, ಹೇಮಲತಾ, ಮಹಾಲಕ್ಷ್ಮಿ, ಗೋಮತಿ, ರಾಧಾಮಣಿ ಮೊದಲ ಹಂತದಲ್ಲಿ ಬಂಧಿತರಾದರೆ ಬಳಿಕ ಕೆವಿನ್‌ ಅಲಿಯಾಸ್‌ ಮತ್ತು ರಮ್ಯ ಎಂಬವರನ್ನು ಬಂಧಿಸಲಾಗಿತ್ತು.

    ಎರಡನೇ ಹಂತದಲ್ಲಿ ಸಿಕ್ಕಿಬಿದ್ದಿರುವ ಕೆವಿನ್‌ ಅಲಿಯಾಸ್‌ ಕರಣ್‌ ಒಬ್ಬ ನಕಲಿ ವೈದ್ಯ. ಅವನು ಓದಿದ್ದು ಬರೀ ಎಸ್‌ಎಸ್‌ಎಲ್‌ಸಿ. ಆದರೆ, ತಾನೊಬ್ಬ ಡಾಕ್ಟರ್‌ ಎಂದು ಪೋಸ್‌ ಕೊಟ್ಟು ಶಾಪ್‌ ಇಟ್ಟುಕೊಂಡಿದ್ದ. ಅವನ ಶೈಲಿ ನೋಡಿದರೆ ಥೇಟ್‌ ಮುನ್ನಾ ಭಾಯ್‌ ಎಂಬಿಬಿಎಸ್‌ ಥರಾನೇ ಇದ್ದಾನೆ.

    ಡಾ. ಕೆವಿನ್‌ ಅಲಿಯಾಸ್‌ ಕರಣ್‌ನ ಶಾಪ್‌ ಇರುವುದು ರಾಜಾಜಿ ನಗರದಲ್ಲಿ. ಅವನು ಆ ಭಾಗದಲ್ಲಿ ದೊಡ್ಡ ಡಾಕ್ಟರ್‌ ನಂತೆ ಪೋಸು ಕೊಡುತ್ತಿದ್ದ. ಪೊಲೀಸರಿಗೆ ಆತನೂ ಹಸುಗೂಸು ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಮಾಹಿತಿ ಸಿಗುತ್ತಿದ್ದಂತೆಯೇ ಆತನನ್ನು ಬಂಧಿಸಿದ್ದಾರೆ.

    ವಿಚಾರಣೆಯ ವೇಳೆ ಆತನ ನಿಜವಾದ ಮುಖ ಬಯಲಾಗಿದೆ. ಅಸಲಿಗೆ ಅವನು ಎಂಬಿಬಿಎಸ್‌ ಓದೇ ಇಲ್ಲ. ನೀನು ಡಾಕ್ಟರ್‌ ಅಲ್ವಾ? ಎಲ್ಲಿದೆ ಸರ್ಟಿಫಿಕೇಟ್‌ ಎಂದು ಕೇಳಿದರೆ ಥರ್ಡ್‌ ಇಯರ್‌ ಆಗಿದೆ. ಈಗಲೂ ಕಲೀತಾ ಇದೇನೆ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ನಿಜವೆಂದರೆ, ಅವನು ಎಂಬಿಬಿಎಸ್‌ ಕಲಿತದ್ದೂ ಇಲ್ಲ, ವಿದ್ಯಾರ್ಥಿಯೂ ಅಲ್ಲ. ಅವನು ಓದಿದ್ದು ಬರೀ ಎಸ್‌ಎಸ್‌ಎಲ್‌ಸಿ ಮಾತ್ರ. ಅದೂ ಕೂಡಾ ಹೈಸ್ಕೂಲ್‌ಗೆ ಹೋಗಿ ಕಲಿತದ್ದೂ ಅಲ್ಲ. ಅವನು ಕರೆಸ್ಪಾಂಡೆನ್ಸ್‌ ನಲ್ಲಿ ಎಸ್ಸೆಸ್ಸೆಲ್ಸಿ ಮಾಡಿದ್ದು!

    ಎಸ್ಸೆಸ್ಸೆಲ್ಸಿಯನ್ನು ಹೇಗೋ ಪಾಸ್‌ ಮಾಡಿಕೊಂಡಿದ್ದ ಆತ ಬಳಿಕ ವಿಜಯನಗರದಲ್ಲಿ ಡಾಕ್ಟರ್ ಒಬ್ಬರ ಬಳಿ ಕಂಪೌಂಡರ್‌ ಕೆಲಸ ಮಾಡುತ್ತಿದ್ದ. ಈ ವೇಳೆ ಜ್ವರ ಕೆಮ್ಮು ನೆಗಡಿ, ಮೈ ಕೈ ನೋವು ಹೀಗೆ ಸಣ್ಣಪುಟ್ಟ ರೋಗಗಳಿಗೆ ಯಾವ ಮಾತ್ರೆ ನೀಡ್ತಾರೆ ಅಂತಾ ತಿಳ್ಕೊಂಡಿದ್ದ. ಅಸಲಿಗೆ ಡಾಕ್ಟರ್‌ ಬರೆದುಕೊಡುತ್ತಿದ್ದ ಮಾತ್ರೆಗಳನ್ನು ಇವನೇ ರೋಗಿಗಳಿಗೆ ನೀಡುತ್ತಿದ್ದ. ಬುದ್ಧಿವಂತನಾಗಿದ್ದ ಆತನಿಗೆ ಸಾಮಾನ್ಯ ಸಣ್ಣ ಪುಟ್ಟ ರೋಗಗಳಿಗೆ ಯಾವ ಔಷಧ ಕೊಡಬಹುದು ಎಂಬುದನ್ನು ನೋಡಿ ನೋಡಿಯೇ ಅರ್ಥ ಮಾಡಿಕೊಂಡಿದ್ದ.

    ಅಲ್ಲಿ ಕೆಲಸ ಮಾಡಿಕೊಂಡಿದ್ದ ಆತ ಕೆಲವು ಸಮಯದಲ್ಲಿ ಕೆಲಸ ಬಿಟ್ಟಿದ್ದ. ಅಲ್ಲಿ ಕೆಲಸ ಬಿಟ್ಟವನೇ ನೇರವಾಗಿ ರಾಜಾಜಿ ನಗರದಲ್ಲಿ ಕ್ಲಿನಿಕ್ ಇಟ್ಟಿದ್ದ. ರೋಗಿಗಳು ಕೂಡಾ ನಿಜವಾದ ಡಾಕ್ಟರ್ ಇರಬಹುದು ಅಂತಾ ಚೆಕ್ ಮಾಡಿಸಿಕೊಳ್ತಿದ್ದರು.

    ಕೇವಲ 100 ರೂ. ಪಡೆದು ಪರೀಕ್ಷೆ ಮಾಡಿ ಔಷಧ ಚೀಟಿ ಕೊಡುತ್ತಿದ್ದ ಆತನ ಬಗ್ಗೆ ಪ್ರದೇಶದಲ್ಲಿ ಒಳ್ಳೆಯ ಮಾತೇ ಇತ್ತು. ಯಾಕೆಂದರೆ, ಆತ ಕೊಡುತ್ತಿದ್ದುದು ಬರೀ ಜ್ವರ ಮತ್ತು ಶೀತಕ್ಕೆ ಮಾತ್ರ ಔಷಧ. ಮೈಕೈ ನೋವಿಗೆ ಪೇನ್‌ ಕಿಲ್ಲರ್‌ ಕೊಡ್ತಿದ್ದ.!

    ಸಿಸಿಬಿ ವಿಚಾರಣೆಯಲ್ಲಿ ನಕಲಿ ಡಾಕ್ಟರ್ ನ ಅಸಲಿ ಮುಖ ಅನಾವರಣವಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಕ್ಕೆ ರಚಿತಾ ತಿರುಗೇಟು: ವಿಡಿಯೋ ಮೂಲಕ ಡಿಂಪಲ್ ಕ್ವೀನ್ ಕೊಟ್ಟ ಕ್ಲಾರಿಟಿ ಇಲ್ಲಿದೆ!

    June 20, 2025

    ಬಡವರು ಹಣ ಕೊಟ್ಟು ಮನೆ ತೆಗೆದುಕೊಳ್ಳುವ ದುಸ್ಥಿತಿ ನಿರ್ಮಾಣ ಆಗಿದೆ: ಬಿ.ಎಸ್. ಯಡಿಯೂರಪ್ಪ

    June 20, 2025

    ಬೆಂಗಳೂರಿನಲ್ಲಿ ಘೋರ ದುರಂತ: ಹೈಟೆನ್ಷನ್ ವೈರ್ ಸ್ಪರ್ಶಿಸಿ 10 ವರ್ಷದ ಬಾಲಕ ಸಾವು..!

    June 20, 2025

    BR ಪಾಟೀಲ್ ಆಡಿಯೋ ವೈರಲ್ ವಿಚಾರ: ಸಿಎಂ ಸಿದ್ದರಾಮಯ್ಯ ಬಣ್ಣ ಬಯಲು – ಪರಿಷತ್ ಶಾಸಕ ಟಿ.ಎ.ಶರವಣ ಆಕ್ರೋಶ

    June 20, 2025

    ಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ; ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ: ಹೆಚ್.ಡಿ. ಕುಮಾರಸ್ವಾಮಿ ಕಿಡಿ

    June 20, 2025

    ಕೃಷಿಯಿಂದ ಹೆಚ್ಚು ಉದ್ಯೋಗ ಸೃಷ್ಟಿ- ಕೃಷಿ ಪ್ರಗತಿ ಆದರೆ ಮಾತ್ರ ದೇಶದ ಆರ್ಥಿಕತೆ ಪ್ರಗತಿ: ಸಿಎಂ ಸಿದ್ದರಾಮಯ್ಯ

    June 20, 2025

    ರಾಷ್ಟ್ರಪತಿ ದ್ರೌಪದಿ ಮುರ್ಮು ಹುಟ್ಟುಹಬ್ಬ: ಶುಭಾಶಯ ಕೋರಿದ ಪರಿಷತ್ ಶಾಸಕ ಟಿ ಎ ಶರವಣ

    June 20, 2025

    ಕಿಚ್ಚ ಸುದೀಪ್‌ ಹೆಸರಲ್ಲಿ ಪಂಗನಾಮ..ಯುವನಟನಿಗೆ ನಂದಕಿಶೋರ್‌ ದೋಖಾ…?

    June 20, 2025

    ಕೊನೆಗೂ ಬಯಲಾಯ್ತು ವರ್ಷಗಳಿಂದ ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ಸ್ಥಳ..!

    June 20, 2025

    ದಿನದ ಕೆಲಸದ ಅವಧಿಯನ್ನು 10 ತಾಸಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ: ಸಚಿವ ಸಂತೋಷ್ ಲಾಡ್

    June 20, 2025

    ನಿಯಮ ಉಲ್ಲಂಘನೆ: ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಖಾಕಿ ದಾಳಿ!

    June 20, 2025

    ಗ್ಯಾಸ್ ಸಿಲಿಂಡರ್ ಕದ್ದೊಯ್ದ ಖದೀಮ: ಹೆಲ್ಮೆಟ್ ಧರಿಸಿ ಕೃತ್ಯ!

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.