ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಮರಣ ಮೃದಂಗ ಬಾರಿಸಿದೆ. ಹಾರ್ಟ್ ಅಟ್ಯಾಕ್ಗೆ ದಿನನಿತ್ಯ ಅನೇಕ ಜನ ಪ್ರಾಣವನ್ನ ಕಳೆದುಕೊಳ್ತಿದ್ದಾರೆ. ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಈ ಹೃದಯಾಘಾತ ಕಾರಣದಿಂದ ವಯಸ್ಕರು ಸೇರಿ ಹೆಚ್ಚಿನ ಯುವಕ ಯುವತಿಯರು ಜೀವ ಕಳೆದುಕೊಳ್ಳುತ್ತಿದ್ದು, ಕಳೆದ 2 ತಿಂಗಳಲ್ಲೇ ಬರೊಬ್ಬರಿ 17 ಜನ ಅಸುನೀಗಿದ್ದಾರೆ
ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಎಂಬ ಮಹಾಮಾಯೆ ಯುವ ಸಮುದಾಯವನ್ನ ಬಿಟ್ಟು ಬಿಡದೆ ಕಾಡ್ತಿದೆ. ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಹೃದಯಾಘಾತ ಸಾವಾಗುತ್ತಿದ್ದು ಇಂದೂ ಕೂಡ ಈ ಸಾವಿನ ಸರಣಿ ಮುಂದುವರೆದಿದೆ. ಹೃದಯಾಘಾತಕ್ಕೆ 40ವರ್ಷದ ಗೋವಿಂದ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಮನೆಯಲ್ಲಿ ಕಪ್ಪು ಹಲ್ಲಿ ಕಾಣಿಸಿಕೊಂಡ್ರೆ ಏನದರ ಸೂಚನೆ: ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ!
ಆಟೋ ಚಾಲಕನ ವೃತ್ತಿ ಮಾಡುತ್ತಿದ್ದ ಗೋವಿಂದಗೆ ಬೆಳಿಗ್ಗೆ 7ಗಂಟೆ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಹಾಸನದ ಸರ್ಕಾರಿ ಆಸ್ಪತ್ರೆ ಹಿಮ್ಸ್ಗೆ ಚಿಕಿತ್ಸೆ ಪಡೆಯಲು ತೆರಳಿದ್ದಾನೆ. ಚಿಕಿತ್ಸೆ ನೀಡುವಾಗಲೇ ಪ್ರಬಲ ಹೃದಯಾಘಾತಕ್ಕೆ ಸಂಭವಿಸಿ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿದ್ದವರ ಲೀಸ್ಟ್ ಇಲ್ಲಿದೆ ನೋಡಿ
- ಮೇ 20 ರಂದು ಹೊಳೆನರಸೀಪುರ ಸಂದ್ಯ(20)
- ಅರಕಲಗೂಡು ತಾಲ್ಲೂಕಿನ ಕೊಣನೂರು ಮೂಲದ ಅಭಿಷೇಕ್ (19)
- ಮೇ 28 ಹಾಸನ ತಾಲ್ಲೂಕಿನ ಕೆಲವತ್ತಿ ಗ್ರಾಮದ ಕವನ(20)
- ಜೂನ್ 11ನಿಶಾಂತ್(20) ಹೊಳೆನರಸೀಪುರ
- ಜೂನ್ 12 ಆಲೂರು ತಾಲ್ಲೂಕು ತಾಲ್ಲೂಕಿನ ಸಾರಿಗೆ ಇಲಾಖೆ ಸಿಬ್ಬಂದಿ ನಾಗಪ್ಪ( 55)
- ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ 58 ಸಾವು
- ಜೂನ್ 13 ದೇವರಾಜ್ (43) ಕಾರಿನಲ್ಲೇ ಸಾವು
- ಹಾಸನ ನಗರದ ತೆಲುಗರ ಬೀದಿ ಸತೀಶ್ (57) ಸಾವು
- ಜೂನ್ 14 ಕಾಂತರಾಜು (51) ಹಾಸನ ತಾಲ್ಲೂಕಿನ ದೊಡ್ಡಪುರ ನಿವಾಸಿ ಸಾವು
- ನವೀನ್(31) ವನಪಾಲಕ ಮೂಲತಃ ಅರಸೀಕೆರೆ ತಾಲ್ಲೂಕಿನ ಸಿಂಗಟಗೆರೆಯವರು
- ಜೂನ್ 18 ರಂದು ಬಿಕ್ಕೋಡಿನ ತೀರ್ಥಪ್ಪ(70) ಸಾವು
- ಜೂನ್ 21 ನಿಶಾದ್ ಅಹ್ಮದ್ (35) ಬೇಲೂರು ನಿವಾಸಿ ಸಾವು
- ಜೂನ್ 21 ಚೇತನ್ (38) ಹಾಸನ ನಗರ ಸತ್ಯಮಂಗಲ ನಿವಾಸಿ ಸಾವು
- ಜೂನ್ 25, ಯೋಗೀಶ್(32), ಚನ್ನರಾಯಪಟ್ಟಣ ,ಎಂ ಹೊನ್ನೆನಹಳ್ಳಿ
- ಜೂನ್ 26, ಸುಪ್ರಿಯಾ, (22), ಹೊಳೆನರಸೀಪುರ ತಾಲ್ಲೂಕಿನ ಕಟ್ಚಳ್ಳಿ
- ಜೂನ್ 27, ಮಂಜುನಾಥ್ (51), ಆಲೂರು ತಾಲ್ಲೂಕಿನ ಬಾವಿಕೊಪ್ಪಲ್