ಹಾಸನ:- ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಅದರಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ.
ಮಂಡ್ಯ: ಅಡಿಕೆ, ಬಾಳೆ, ತೆಂಗು ಜೊತೆ ಗಾಂಜಾ ಬೆಳೆದ ಭೂಪ: ಅಕ್ರಮ ಭೇದಿಸಿದ ಅಬಕಾರಿ ತಂಡ!
ಭಾರೀ ಮಳೆಯಿಂದ ದೊಡ್ಡತಪ್ಲು ಬಳಿ ಬೃಹತ್ ಮರ ರಸ್ತೆಗೆ ಉರುಳಿಬಿದ್ದಿದೆ. ಮರದ ಜೊತೆ ಮಣ್ಣು ಕುಸಿದು ಸಂಚಾರ ಸ್ಥಗಿತಗೊಂಡಿದೆ. ರಾತ್ರಿ ಮೂರುಗಂಟೆಗೂ ಅಧಿಕ ಸಮಯ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ವಾಹನ ಸಂಚಾರ ಬಂದ್ ಆಗಿದೆ. ಮುಂಜಾನೆ ವರೆಗೂ ರಕ್ಷಣಾ ಸಿಬ್ಬಂದಿ ಮರ ಹಾಗು ಮಣ್ಣು ತೆರವು ಮಾಡಿದೆ.
ಬೆಳಿಗ್ಗೆ 7 ಗಂಟೆಯಿಂದ ಮತ್ತೆ ವಾಹನ ಸಂಚಾರ ಆರಂಭವಾಗಿದೆ. ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ನ ದೊಡ್ಡತಪ್ಲು ಬಳಿ ಈ ಘಟನೆ ನಡೆದಿದೆ.