ಚಾಮರಾಜನಗರ:- ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕಳೆದ ಹದಿನೈದು ದಿನಗಳ ನಂತರ ಮುಂಗಾರು ಮಳೆಯ ಅಬ್ಬರ ಇದೀಗ ಜೋರಾಗಿದೆ.
ಭೀಕರ ಅಪಘಾತ: ಸೀಟ್ ಬೆಲ್ಟ್ ಧರಿಸಿದ್ದಕ್ಕೆ ತಪ್ಪಿದ ದುರಂತ.. ಇಬ್ಬರು ಗಂಭೀರ!
ಚಾಮರಾಜನಗರ ಜಿಲ್ಲೆಯ ಹಲವೆಡೆ ಮಂಗಳವಾರ ಬಾರೀ ಮಳೆ ಆಗಿದೆ. ಬಾರೀ ಮಳೆಗೆ ಹಲವೆಡೆ ರಸ್ತೆಗಳಲ್ಲಿಯೇ ಮಳೆ ನೀರು ಶೇಖರಣೆ ಆಗಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಟ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಚರಂಡಿಯಲ್ಲಿ ಮಳೆ ನೀರು ಶೇಖರಣೆಗೊಂಡಿದೆ.
ಸ್ಥಳೀಯ ಬೇಗೂರು ಗ್ರಾಮಪಂಚಾಯ್ತಿಯ ನಿರ್ಲಕ್ಷ್ಯದ ಪರಿಣಾಮ ರಸ್ತೆಯಲ್ಲಿಯೇ ನೀರು ನಿಲುಗಡೆ ಆಗಿದೆ. ಇದರಿಂದ ಸಾರ್ವಜನಿಕರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ. ಮಳೆಗಾಲಕ್ಕೂ ಮುನ್ನಾ ಚರಂಡಿ ಸ್ವಚ್ಚತೆ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.