ವಿಜಯಪುರ :- ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಭಾರೀ ಮಳೆ ಸುರಿದಿದೆ. ಸಾಯಂಕಾಲ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ಪಟ್ಟಣದ ಲಕ್ಷ್ಮೀ ನಗರ, ರಾಯಣ್ಣ ವೃತ್ತದ ಬಳಿಯ 20 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಕಾಳು-ಧಾನ್ಯಗಳು ನೀರು ಪಾಲಾಗಿವೆ.
ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!
ಇನ್ನೂ ಕೆರೆ ಪಕ್ಕದ ಮನೆಗೆ ನೀರು ನುಗ್ಗಿ ವೃದ್ದೇ ಪರದಾಡಿದ ಘಟನೆಯೂ ನಡೆದಿದೆ. ಯುವಕನೊಬ್ಬ ವೃದ್ಧೆಯನ್ನ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಬಿಟ್ಟ ದೃಶ್ಯಗಳು ಸೆರೆಯಾಗಿವೆ. ಮನೆಗೆ ನೀರು ನುಗ್ಗಿದ್ದಕ್ಕೆ ಮಹಿಳೆಯೊಬ್ಬಳು ಕಣ್ಣೀರು ಹಾಕಿದ ಘಟನೆಯೂ ನಡೆದಿದೆ. ಮನೆಯಲ್ಲಿನ ಸಾಮಗ್ರಿಗಳು ನೀರು ಪಾಲಾದ ಹಿನ್ನೆಲೆ ಮಹಿಳೆ ಕಣ್ಣೀರು ಹಾಕಿದ್ದಾರೆ…