ಚಾಮರಾಜನಗರ: ಚಾಮರಾಜನಗರ ಜಿಲ್ಲಾದ್ಯಂತ ಶುಕ್ರವಾರ ತಡರಾತ್ರಿ ಸಿಡಿಲು ಸಮೇತ ಸುರಿದ ಭಾರೀ ಮಳೆಯಾಗಿದೆ. ಚಾಮರಾಜನಗರ ನಗರಸಭೆ ವ್ಯಾಪ್ತಿಯ 15ನೇ ವಾರ್ಡಿನ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ರಾತ್ರಿಯಿಡೀ ಜನರು ಪರದಾಡುವಂತಾಗಿತ್ತು.
ಧಾರಾಕಾರ ಮಳೆಯ ನಡುವೆ ರಾತ್ರೋ ರಾತ್ರಿ ಕ್ಚಿಪ್ರ ಕಾರ್ಯಾಚರಣೆಗೆ ಇಳಿದ ನಗರಸಭೆ ಅಧಿಕಾರಿ ಮಂಜು ನೇತೃತ್ವದಲ್ಲಿನ ಸಿಬ್ಬಂಧಿಗಳು ಮುಂದಾಗಬಹುದಾಗಿದ್ದ ಅನಾಹುತ ತಪ್ಪಿಸಿದರು. ಜೆಸಿಬಿ ಮೂಲಕ ಮನೆಯೊಳಗೆ ಶೇಖರಣೆಗೊಂಡಿದ್ದ ನೀರನ್ನು ಹೊರಹಾಕಲಾಯಿತು. ಅಲ್ಲದೆ ಚರಂಡಿಗಳನ್ನು ಸ್ವಚ್ಚಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ತ್ವರಿತಗತಿಯ ಕಾರ್ಯಾಚರಣೆ ಕೈಗೊಳ್ಳಲಾಯಿತು. ಹಾಗಾಗಿ ರಾತ್ರಿ ವೇಳೆ ಸುರಿದ ಮಳೆಯಿಂದಾಗಿ ಮುಂದಾಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಯ್ತು.
ಶಾಟ್೯ ಸರ್ಕೂಟ್ : ಮನೆ ಹಾನಿ.
ಇನ್ನೂ ತಡ ರಾತ್ರಿ ಸಿಡಿಲು ಮಳೆಗೆ ಶಾರ್ಟ್ ಸರ್ಕ್ಯೂಟ್ ಪರಿಣಾಮ ಮನೆ ಕುಸಿತಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ನಡೆದಿದೆ. ಶಾಗ್ಯ ಗ್ರಾಮದ ಶಿವಲಿಂಗೇಗೌಡ್ರು ಎಂಬುವವರ ಮನೆ ಕುಸಿದಿದೆ.