ಬೆಂಗಳೂರು: ಕರುನಾಡಿನಲ್ಲಿ ಥಗ್ ಲೈಫ್ ಸಿನಿಮಾಗೆ ಕಾನೂನು ಮೊರೆ ಹೋಗಿದ್ದ ದುರಂಕಾರಿ ಕಮಲ್ ಹಾಸನ್ಗೆ ಭಾರೀ ಹಿನ್ನಡೆಯಾಗಿದೆ. ಇಂದು ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಪೀಠ ನಟ ಕಮಲ್ಗೆ ಸರಿಯಾಗಿ ಚಾಟಿ ಬೀಸಿದೆ.
ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಕಮಲ್ ಹಾಸನ್ ಅರ್ಜಿ ಹೈಕೋರ್ಟ್ಗೆ ಹಾಕಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್ ಜುಲೈ 10ರಂದು ವಿಚಾರಣೆ ಮುಂದೂಡಿದೆ.
ಸಮಸ್ಯೆ ಬಗೆಹರಿಯುವವರೆಗೂ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಪ್ರದರ್ಶನ ಇಲ್ಲ. ವಿವಾದದ ವಿಚಾರವಾಗಿ ನಾವು ಫಿಲ್ಮ್ ಚೇಂಬರ್ ಜೊತೆ ಚರ್ಚೆ ಮಾಡ್ತೀವಿ.. ಕರ್ನಾಟಕದಲ್ಲಿ ಸದ್ಯಕ್ಕೆ ನಾವು ಸಿನಿಮಾ ಪ್ರದರ್ಶನಕ್ಕೆ ಹೋಗಲ್ಲ. ಹೀಗಾಗಿ ಒಂದು ವಾರ ವಿಚಾರಣೆ ಮುಂದೂಡಿ ಎಂದು ಕಮಲ್ ಪರ ವಕೀಲರು ಮನವಿ ಮಾಡಿದ್ದರು. ಅದರಂತೆ ಕೋರ್ಟ್ ಜುಲೈ 10ರಂದು ವಿಚಾರಣೆ ಮುಂದೂಡಿದೆ.
ಹೇಗಿತ್ತು ವಾದ?
ಇಂದು ಬೆಳಿಗ್ಗೆ ಅರ್ಜಿಯ ವಿಚಾರಣೆ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ, ‘ಜನರ ಭಾವನೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ನೀವು ತಪ್ಪು ಮಾಡಿ, ಅದರ ಸಮರ್ಥನೆಗೆ ನಿಂತಿದ್ದೀರ, ತಪ್ಪು ಮಾಡಿ ನಮಗೆ ರಕ್ಷಣೆ ಕೊಡಿ ಎಂದರೆ ಹೇಗೆ ಸಾಧ್ಯ’ ಎಂದಿದ್ದರು. ಬಳಿಕ ಮಧ್ಯಾಹ್ನದ ವೇಳೆಗೆ ಅಭಿಪ್ರಾಯ ತಿಳಿಸುವಂತೆ ಕಾಲಾವಕಾಶ ನೀಡಿದ್ದರು.
ಮಧ್ಯಾಹ್ನ ವಿಚಾರಣೆ ನಡೆದಾಗ ಕಮಲ್ ಪರ ವಕೀಲರು ವಾದ ಮಂಡಿಸಿ, ಕಮಲ್ ಹಾಸನ್ ಅವರು ಫಿಲಂ ಚೇಂಬರ್ಗೆ ಇಂದು ಬರೆದಿರುವ ಪತ್ರವನ್ನು ಓದಿ ಹೇಳಿ, ನಾವೆಲ್ಲರೂ ಒಂದೇ, ಒಂದೇ ಕುಟುಂಬವೆಂದು ಹೇಳಿದ್ದಾರೆ. ತಮಿಳಿನಂತೆ ಕನ್ನಡ ಕೂಡಾ ಶ್ರೀಮಂತ ಭಾಷೆ…. ಕನ್ನಡಿಗರ ಭಾಷಾ ಪ್ರೇಮಕ್ಕೆ ನಾನು ಹೆಮ್ಮೆಪಡುತ್ತೇನೆ. ಎಲ್ಲಾ ಭಾಷೆಗಳಿಗೂ ಸಮಾನತೆ ಇರಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಕಮಲ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದರು.
ಆದರೆ ನ್ಯಾಯಮೂರ್ತಿಗಳು, ‘ಎಲ್ಲವೂ ಸರಿಯಿದೆ ಆದರೆ ಇದಕ್ಕೆ ಒಂದು ಪದ ಸೇರಿಸಬೇಕು’ ಎಂದು ಪರೋಕ್ಷವಾಗಿ ಕಮಲ್ ಕ್ಷಮೆ ಕೇಳಿಲ್ಲ ಎಂದರು. ಅದಕ್ಕೆ ಕಮಲ್ ಪರ ವಕೀಲರು, ಕ್ಷಮೆ ಕೇಳಿದರೆ ಎಲ್ಲವೂ ಸರಿ ಹೋಗಲಿದೆ, ದರೆ ಕಮಲಹಾಸನ್ ಗೆ ಯಾವುದೇ ದುರುದ್ದೇಶವಿರಲಿಲ್ಲ…. ಕನ್ನಡದ ಬಗ್ಗೆ ಅವರ ನಿಲುವನ್ನು ಪತ್ರದಲ್ಲಿ ತಿಳಿಸಿದ್ದಾರೆ, ಕನ್ನಡದ ಪರ ಅವರ ಒಲವನ್ನು ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದಮೇಲೆ ಒಂದು ಪದ ಸೇರಿಸುವ ಒತ್ತಡ ಇರಬಾರದು’ ಎಂದಿದ್ದಾರೆ.
ಅಂತಿಮವಾಗಿ, ‘ನಿರ್ಮಾಪಕರು ‘ಥಗ್ ಲೈಫ್’ ಸಿನಿಮಾ ರಾಜ್ಯದಲ್ಲಿ ಜೂನ್ 5ರಂದು ಬಿಡುಗಡೆ ಮಾಡಲು ಬಯಸುತ್ತಿಲ್ಲ, ಈ ಘಟನೆ ವಿಷಯವಾಗಿ ಫಿಲಂ ಚೇಂಬರ್ ಜೊತೆಗೆ ಚರ್ಚೆ ನಡೆಸಲು ಅವರು ತಯಾರಿದ್ದಾರೆ’ ಎಂದರು.