Close Menu
Ain Live News
    Facebook X (Twitter) Instagram YouTube
    Wednesday, June 4
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ದುರಂಕಾರಿ ಕಮಲ್‌ ಹಾಸನ್‌ಗೆ ಬಿಗ್‌ ಶಾಕ್‌ ಕೊಟ್ಟ ಹೈಕೋರ್ಟ್!‌

    By Author AINJune 3, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಕರುನಾಡಿನಲ್ಲಿ ಥಗ್‌ ಲೈಫ್‌ ಸಿನಿಮಾಗೆ ಕಾನೂನು ಮೊರೆ ಹೋಗಿದ್ದ ದುರಂಕಾರಿ ಕಮಲ್‌ ಹಾಸನ್‌ಗೆ ಭಾರೀ ಹಿನ್ನಡೆಯಾಗಿದೆ. ಇಂದು ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಪೀಠ ನಟ ಕಮಲ್‌ಗೆ ಸರಿಯಾಗಿ ಚಾಟಿ ಬೀಸಿದೆ.
    ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಕಮಲ್ ಹಾಸನ್ ಅರ್ಜಿ‌ ಹೈಕೋರ್ಟ್‌ಗೆ ಹಾಕಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್‌ ಜುಲೈ 10ರಂದು ವಿಚಾರಣೆ ಮುಂದೂಡಿದೆ.

    ಸಮಸ್ಯೆ ಬಗೆಹರಿಯುವವರೆಗೂ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಪ್ರದರ್ಶನ ಇಲ್ಲ. ವಿವಾದದ ವಿಚಾರವಾಗಿ ನಾವು ಫಿಲ್ಮ್ ಚೇಂಬರ್ ಜೊತೆ ಚರ್ಚೆ ಮಾಡ್ತೀವಿ.. ಕರ್ನಾಟಕದಲ್ಲಿ ಸದ್ಯಕ್ಕೆ ನಾವು ಸಿನಿಮಾ ಪ್ರದರ್ಶನಕ್ಕೆ ಹೋಗಲ್ಲ. ಹೀಗಾಗಿ ಒಂದು ವಾರ ವಿಚಾರಣೆ ಮುಂದೂಡಿ ಎಂದು ಕಮಲ್ ಪರ ವಕೀಲರು ಮನವಿ ಮಾಡಿದ್ದರು. ಅದರಂತೆ ಕೋರ್ಟ್‌ ಜುಲೈ 10ರಂದು ವಿಚಾರಣೆ ಮುಂದೂಡಿದೆ.

    ಹೇಗಿತ್ತು ವಾದ?

    ಇಂದು ಬೆಳಿಗ್ಗೆ ಅರ್ಜಿಯ ವಿಚಾರಣೆ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ, ‘ಜನರ ಭಾವನೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ನೀವು ತಪ್ಪು ಮಾಡಿ, ಅದರ ಸಮರ್ಥನೆಗೆ ನಿಂತಿದ್ದೀರ, ತಪ್ಪು ಮಾಡಿ ನಮಗೆ ರಕ್ಷಣೆ ಕೊಡಿ ಎಂದರೆ ಹೇಗೆ ಸಾಧ್ಯ’ ಎಂದಿದ್ದರು. ಬಳಿಕ ಮಧ್ಯಾಹ್ನದ ವೇಳೆಗೆ ಅಭಿಪ್ರಾಯ ತಿಳಿಸುವಂತೆ ಕಾಲಾವಕಾಶ ನೀಡಿದ್ದರು.

    ಮಧ್ಯಾಹ್ನ ವಿಚಾರಣೆ ನಡೆದಾಗ ಕಮಲ್ ಪರ ವಕೀಲರು ವಾದ ಮಂಡಿಸಿ, ಕಮಲ್ ಹಾಸನ್ ಅವರು ಫಿಲಂ ಚೇಂಬರ್​ಗೆ ಇಂದು ಬರೆದಿರುವ ಪತ್ರವನ್ನು ಓದಿ ಹೇಳಿ, ನಾವೆಲ್ಲರೂ ಒಂದೇ, ಒಂದೇ ಕುಟುಂಬವೆಂದು ಹೇಳಿದ್ದಾರೆ. ತಮಿಳಿನಂತೆ ಕನ್ನಡ ಕೂಡಾ ಶ್ರೀಮಂತ ಭಾಷೆ…. ಕನ್ನಡಿಗರ ಭಾಷಾ ಪ್ರೇಮಕ್ಕೆ ನಾನು ಹೆಮ್ಮೆಪಡುತ್ತೇನೆ. ಎಲ್ಲಾ ಭಾಷೆಗಳಿಗೂ ಸಮಾನತೆ ಇರಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಕಮಲ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದರು.

    ಆದರೆ ನ್ಯಾಯಮೂರ್ತಿಗಳು, ‘ಎಲ್ಲವೂ ಸರಿಯಿದೆ ಆದರೆ ಇದಕ್ಕೆ ಒಂದು ಪದ ಸೇರಿಸಬೇಕು’ ಎಂದು ಪರೋಕ್ಷವಾಗಿ ಕಮಲ್ ಕ್ಷಮೆ ಕೇಳಿಲ್ಲ ಎಂದರು. ಅದಕ್ಕೆ ಕಮಲ್ ಪರ ವಕೀಲರು, ಕ್ಷಮೆ ಕೇಳಿದರೆ ಎಲ್ಲವೂ ಸರಿ ಹೋಗಲಿದೆ, ದರೆ ಕಮಲಹಾಸನ್ ಗೆ ಯಾವುದೇ ದುರುದ್ದೇಶವಿರಲಿಲ್ಲ…. ಕನ್ನಡದ ಬಗ್ಗೆ ಅವರ ನಿಲುವನ್ನು ಪತ್ರದಲ್ಲಿ ತಿಳಿಸಿದ್ದಾರೆ, ಕನ್ನಡದ ಪರ ಅವರ ಒಲವನ್ನು ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದಮೇಲೆ ಒಂದು ಪದ ಸೇರಿಸುವ ಒತ್ತಡ ಇರಬಾರದು’ ಎಂದಿದ್ದಾರೆ.

    ಅಂತಿಮವಾಗಿ, ‘ನಿರ್ಮಾಪಕರು ‘ಥಗ್ ಲೈಫ್’ ಸಿನಿಮಾ ರಾಜ್ಯದಲ್ಲಿ ಜೂನ್‌ 5ರಂದು ಬಿಡುಗಡೆ ಮಾಡಲು ಬಯಸುತ್ತಿಲ್ಲ, ಈ ಘಟನೆ ವಿಷಯವಾಗಿ ಫಿಲಂ ಚೇಂಬರ್ ಜೊತೆಗೆ ಚರ್ಚೆ ನಡೆಸಲು ಅವರು ತಯಾರಿದ್ದಾರೆ’ ಎಂದರು.

    Demo
    Share. Facebook Twitter LinkedIn Email WhatsApp

    Related Posts

    IPL Winners: ಕಿಂಗ್ ಕೊಹ್ಲಿಗೆ ಕನ್ನಡ ಧ್ವಜ ನೀಡಿ ಬೆಂಗಳೂರಿಗೆ ಸ್ವಾಗತ ಮಾಡಿದ ಡಿಕೆಶಿ..!

    June 4, 2025

    RCB ಅಭಿಮಾನಿಗಳ ಪ್ರೀತಿಗೆ ಕೊಹ್ಲಿ ಭಾವುಕ..ಬಸ್‌’ನಲ್ಲಿ ಕಿಂಗ್‌ ಕ್ಯೂಟ್‌ ಮೂಮೆಂಟ್‌ video ವೈರಲ್!

    June 4, 2025

    RCB ವಿಕ್ಟರಿ ಎಫೆಕ್ಟ್.. ರಾಜ್ಯದಲ್ಲಿ ಒಂದೇ ದಿನ ಎಷ್ಟು ಕೋಟಿ ಮದ್ಯ ಮಾರಾಟವಾಯ್ತು ಗೊತ್ತಾ..?

    June 4, 2025

    ಹೈಕೋರ್ಟ್‌ ಚಾಟಿಗೆ ಬಗ್ಗದ ದುರಂಕಾರಿ ಕಮಲ್‌ ಹಾಸನ್..ಮತ್ತೆ ಧಿಮಾಕಿನ ಮಾತನಾಡಿದ ತಮಿಳು ನಟ!

    June 4, 2025

    ಗೋಲ್ಡ್ ಬೆಲೆಯಲ್ಲಿ ಏರಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ನೋಡಿ

    June 4, 2025

    RCB ಕನಸು ನನಸು..ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ KGF ಪ್ರಶಾಂತ್‌ ನೀಲ್‌ Video ವೈರಲ್!‌

    June 4, 2025

    ಬೆಂಗಳೂರಿನಲ್ಲಿ ತೆರೆದ ಬಸ್’ನಲ್ಲಿ RCB ವಿಜಯೋತ್ಸವ ಇಲ್ಲ: ಸಚಿವ ಜಿ ಪರಮೇಶ್ವರ್

    June 4, 2025

    RCB ತಂಡಕ್ಕೆ ಸರ್ಕಾರದಿಂದ ಸನ್ಮಾನ ಮಾಡಲು ಸಿದ್ಧತೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು..?

    June 4, 2025

    ʼRCBʼ ವಿಜಯಪತಾಕೆ: ಗಳಗಳ ಕಣ್ಣೀರಿಟ್ಟ ವಿಜಯ ಮಲ್ಯ ಪುತ್ರ ಸಿದ್ದಾರ್ಥ್‌ ಮಲ್ಯ! Video ವೈರಲ್!

    June 4, 2025

    IPL 2025: ಇಂದು RCB ತಂಡದಿಂದ ವಿಕ್ಟರಿ ಪರೇಡ್: ಎಲ್ಲಿಂದ, ಎಲ್ಲಿಗೆ? ಟೈಮಿಂಗ್ಸ್ ಏನೂ..? ಇಲ್ಲಿದೆ ಮಾಹಿತಿ

    June 4, 2025

    ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು: ಇಲ್ಲೆಲ್ಲಾ ಯೆಲ್ಲೋ ಅಲರ್ಟ್!

    June 4, 2025

    IPL 2025: RCB ಐಪಿಎಲ್ ಟ್ರೋಫಿ ಗೆಲ್ಲಲು ಈ ಲಕ್ಕಿ ಕ್ರಿಕೆಟರ್ ಕಾರಣ!?

    June 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.