ಹಾಸನ:- ಭಾರೀ ಗಾಳಿ- ಮಳೆಗೆ ಶಿರಾಡಿಘಾಟ್ ನಲ್ಲಿ ಗುಡ್ಡ ಕುಸಿತವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಹತ್ತು ಗಂಟೆಗಳ ನಂತರ ಸಂಚಾರ ಆರಂಭವಾಗಿದೆ.
ಗುತ್ತಿಗೆದಾರನ ಭೀಕರ ಹತ್ಯೆ ಕೇಸ್: ಕೊಲೆ ಆರೋಪಿಗಳಿಬ್ಬರ ಮೇಲೆ ಫೈರಿಂಗ್!
ರಸ್ತೆಗೆ ಬಿದ್ದಿದ್ದ ಮಣ್ಣು ತೆರವು ಪೂರ್ಣವಾಗಿದೆ. ರಸ್ತೆ ನಡುವೆ ಟ್ರಾಫಿಕ್ ನಲ್ಲಿ ಸಿಲುಕಿದ್ದವರು ನಿರಾಳರಾಗಿದ್ದಾರೆ. ಮದ್ಯೆ ಮದ್ಯೆ ಸಿಲುಕಿದ್ದ ವಾಹನಗಳ ಸಂಚಾರಕ್ಕೆ ಅವಕಾಶ ಮಡಿಕೊಡಲಾಗಿದೆ. ನಿಧಾನವಾಗಿ ಶಿರಾಡಿಘಾಟ್ ವಾಹನ ಸಂಚಾರ ಆರಂಭವಾಗಿದೆ.
ಸದ್ಯ ದಾರಿ ಮದ್ಯೆ ಸಿಲುಕಿರೊ ವಾಹನ ಕ್ಲಿಯರ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸಾಲುಗಟ್ಟಿ
ವಾಹನಗಳು ನಿಂತಿರೋ ದೃಶ್ಯ ಕಂಡು ಬಂದಿದೆ.
ಇನ್ನೂ ಧಾರಕಾರ ಮಳೆ ಹಿನ್ನೆಲೆ ಇಲ್ಲಿನ ಸಕಲೇಶಪುರ ತಾಲ್ಲೂಕಿನ, ಮಾರನಹಳ್ಳಿ ಬಳಿ ಗುಡ್ಡ ಕುಸಿತಗೊಂಡಿತ್ತು. ಪರಿಣಾಮ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ತಡರಾತ್ರಿ ಮರಗಳ ಸಮೇತ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದ ಕಾರಣ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಟ ಅನುಭವಿಸಿದ್ದರು.