ಬೆಂಗಳೂರು: ಸಹಕಾರ ಸಚಿವ ಕೆ.ಎನ್ ರಾಜಣ್ಣ ಹಾಗೂ ಅವರ ಪುತ್ರ ಎಂಎಲ್ಸಿ ರಾಜೇಂದ್ರ ಹನಿಟ್ರ್ಯಾಪ್ ಕೇಸ್ ರಾಜ್ಯ ರಾಜಕೀಯದಲ್ಲಿ ಹಂಮಾ ಸೃಷ್ಟಿ ಮಾಡ್ತಾನೆ ಇದೆ. ಆದರೆ ನಿನ್ನೆಯಷ್ಟೇ ರಾಜೇಂದ್ರ ಹತ್ಯೆಗೆ ಸುಪಾರಿ ಸಂಚು ನಡೆದ ಆಡಿಯೋ ವೈರಲ್ ಆಗಿದ್ದು ಭಾರಿ ಸದ್ದು ಮಾಡ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ತನಿಖೆ ಆಗ್ತಿದೆ. ತನಿಖೆ ಸಂಧರ್ಭದಲ್ಲಿ ಯಾವುದೇ ವಿಚಾರ ಬಹಿರಂಗವಾಗಿ ಹೇಳಲ್ಲ. ತನಿಖಾ ವರದಿ ಬಂದ ಬಳಿಕ ಮಾಹಿತಿ ನೀಡ್ತೀನಿ ಎಂದಿದ್ದಾರೆ.
ಹನಿಟ್ರಾಪ್ ಮತ್ತು ಕೊಲೆ ಬೆದರಿಕೆ ಎರಡು ಪ್ರತ್ಯೇಕ ದೂರು ದಾಖಲಾಗ್ತಿದೆಯಾ ಅನ್ನೋ ಬಗ್ಗೆ ಕೇಳದ್ರೂ ಎರಡೂ ತನಿಖೆ ನಡೆಯುತ್ತಿದೆ. ಆ ಬಗ್ಗೆ ಯಾವುದೇ ಮಾಹಿತಿ ನೀಡಲ್ಲ ಎಂದು ಪರಮೇಶ್ವರ್ ತಮ್ಮ ಎಂದಿನ ಮೊಂಡಾಟ ಮುಂದುವರೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಗೊತ್ತಿಲ್ಲ
ಸಿಎಂ ಸಿದ್ದರಾಮಯ್ಯ ನಾಳೆ ದೆಹಲಿ ಪ್ರವಾಸ ಹಿನ್ನೆಲೆ ಕ್ಯಾಬಿನೆಟ್ ಪುನರ್ರಚನೆ ಆಗಲಿದೆಯಾ ಅನ್ನೋ ಪ್ರಶ್ನೆಗೂ ಗೃಹ ಸಚಿವ ಪರಮೇಶ್ವರ್ ನನಗೆ ಮಾಹಿತಿ ಇಲ್ಲ ಅಂತ ಒಂದೇ ಲೈನ್ ಅನ್ಸರ್ ಕೊಟ್ಟಿದ್ದಾರೆ. ಸಿಎಂ ದೆಹಲಿಯಲ್ಲಿರೋ ಕರ್ನಾಟಕ ಭವನ ನೂತನ ಕಟ್ಟಡ ಉದ್ಘಾಟನೆಗೆ ಹೋಗ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಗೊತ್ತಿಲ್ಲ. ಹೈಕಮಾಂಡ್ ಆ ಬಗ್ಗೆ ನಿರ್ಧಾರ ಮಾಡಲಿದೆ ಎಂದಿದ್ದಾರೆ.