ಯಾದಗಿರಿ : ಸಿಎಂ ಕುರ್ಚಿ ಕಿತ್ತಾಟದಿಂದ ಕಾಂಗ್ರೆಸ್ನಲ್ಲಿ ಹನಿಟ್ರ್ಯಾಪ್ ನಡೆಯುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ಬಾಂಬ್ ಸಿಡಿಸಿದ್ದಾರೆ. ಯಾದಗಿರಿಯ ಕೊಡೇಕಲ್ ನಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಹಿಂದೆ ಯಾವ ಮಾಸ್ಟರ್ ಮೈಂಡ್ ಇದೆ ಅನ್ನೋದು ರಾಜಣ್ಣ ಅವರಿಗೆ ಗೊತ್ತು. ಅವರ ಪಕ್ಷದ ಪ್ರಮುಖರೇ ಇದರ ಹಿಂದೆ ಇದ್ದಾರೆ ಎಂದಿದ್ದಾರೆ.
ರಾಜಣ್ಣ ಯಾವತ್ತು ಸಿಎಂ ಸಿದ್ದರಾಮಯ್ಯ ಪರ ಇರ್ತಾರೆ. ಅದಕ್ಕಾಗಿ ವ್ಯವಸ್ಥಿತವಾಗಿ ಕಾಂಗ್ರೆಸ್ ಪಕ್ಷದವರೇ ಹನಿಟ್ರ್ಯಾಪ್ ಮಾಡ್ತಿದ್ದಾರೆ. ಪಾಪ ರಾಜಣ್ಣವ್ರಿಗೆ ಗೊತ್ತು ಆದರೆ ಓಪನ್ ಹೇಳಲು ಆಗ್ತಿಲ್ಲ. ಕಾಂಗ್ರೆಸ್ ನಲ್ಲಿ ಸಿಎಂ ಕ್ಯಾಂಡಿಡೇಟ್ ಅಂತ ಯಾರ ಹೆಸರು ಬರುತ್ತೋ, ಯಾರು ಸಿಎಂ ಸಿದ್ದರಾಮಯ್ಯ ಪರ ಇರ್ತಾರೋ ಅವ್ರಿಗೆ ಟ್ರ್ಯಾಪ್ ಆಗುತ್ತರೆ. ಮುಂದೆ ಸಚಿವರಾದ ಪರಮೇಶ್ವರ, ಸತೀಶ ಜಾರಕಿಹೊಳಿಗೂ ಟ್ರ್ಯಾಪ್ ಆಗುತ್ತದೆ ಎಂದರು.
ಸಿದ್ದರಾಮಯ್ಯ ಸಿಎಂ ಇದ್ದು, ಪರಮೇಶ್ವರ ಗೃಹ ಸಚಿವರಿದ್ದು ತನಿಖೆ ಆಗಲಿಲ್ಲ, ಕ್ರಮ ಆಗದಿದ್ರೆ ಜನರಿಗೆ ಏನು ಸಂದೇಶ ಹೋಗುತ್ತದೆ. ಹೀಗಾಗಿ ಹನಿಟ್ರ್ಯಾಪ್ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಎಷ್ಟೇ ದೊಡ್ಡ ವ್ಯಕ್ತಿ ಇದ್ದರೂ ಸಹ ಅರೆಸ್ಟ್ ಮಾಡಿ ಒಳಗೆ ಹಾಕಿದ್ರೆ ಮಾತ್ರ ಒಂದು ಹಂತಕ್ಕೆ ಬರ್ತದೆ. ಇಲ್ಲದಿದ್ರೆ ಮುಂದೆ ಸಿಎಂ ಆಗಲು ಎಲ್ಲರೂ ಹನಿ, ಮನಿ ಸೇರಿದಂತೆ ಎಲ್ಲಾ ಟ್ರ್ಯಾಪ್ ಮಾಡುತ್ತಾರೆ ಎಂದರು.
ಇನ್ನೂ ಮಾಜಿ ಸಿಎಂ ಹೆಚ್ಡಿಕೆ, ಜಾರಕಿಹೊಳಿ ಭೇಟಿ ಬಗ್ಗೆ ಮಾತನಾಡಿ, ಸತೀಶ್ ಜಾರಕಿಹೊಳಿ ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ರೆ 100% ಸಿಎಂ ಆಗುತ್ತಾರೆ. ಜಾರಕಿಹೊಳಿ ಅವರು ಸುಮ್ಮಸುಮ್ಮನೆ ಯಾರನ್ನೂ ಭೇಟಿ ಆಗಲ್ಲ. ಸುಮ್ಮನೆ ಕುಮಾರಣ್ಣನ ಭೇಟಿ ಮಾಡುವ ಪ್ರಶ್ನೆಯಿಲ್ಲ. ಏನೋ ಫ್ಲಾನ್ ಇಟ್ಟಕೊಂಡೆ ಕುಮಾರಣ್ಣನ ಭೇಟಿಯಾಗಿದ್ದಾರೆ ಎಂದ್ರು.