ಬಾಗಲಕೋಟೆ : ಉತ್ತರ ಕರ್ನಾಟಕ ಭಾಗದ ಜೀವನಾಡಿ ಕೃಷ್ಣಾ ನದಿ ನೀರು ಖಾಲಿಯಾಗುತ್ತಿದ್ದು, ಜಮಖಂಡಿಯ ನದಿ ಪಾತ್ರದ ಜನರಿಗೆ ನೀರಿನ ಹಾಹಾಕಾರ ಶುರುವಾಗುವ ಆತಂಕ ಶುರುವಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಳಿ ಇರುವ ಕೃಷ್ಣನದಿ ನೀರು ಸುತ್ತಮುತ್ತಲ ಮುತ್ತೂರು ಮೈಗೂರು, ಅಥಣಿ ತಾಲೂಕಿನ ಜುಂಜುರ್ವಾಡ, ಕಂಕನವಾಡಿ, ಹಾಗೂ ತುಬಚಿ ಗ್ರಾಮದ ಜನರಿಗೆ ಮೂಲಾಧಾರವಾಗಿದ್ದು, ಇದೀಗ ನೀರು ಖಾಲಿಯಾಗುತ್ತಿರುವುದರಿಂದ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ.
ಬಹುತೇಕ ಹಿಪ್ಪರಗಿ ಜಲಾಶಯಗಳು ಖಾಲಿಯಾಗುತ್ತಿವೆ. ಹೀಗಾಗಿ ಜಮಖಂಡಿ ತಾಲೂಕಿನ ಕೃಷ್ಣ ನದಿಗೆ ನೀರು ಹರಿಸುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ. ಹಿಪ್ಪರಗಿ ಜಲಾಶಯದಿಂದ ದಿನಕ್ಕೆ ಒಂದು ಟಿಎಂಸಿ ನೀರು ಬಿಡುತ್ತೇನೆ ಅಂತ ಭರವಸೆ ನೀಡಿದ್ದ ಅಧಿಕಾರಿಗಳು ಇದೀಗ ನಿರ್ಲಕ್ಷ್ಯ ತೋರುತ್ತಿದ್ದಾರೆ. ಜನ ಜಾನುಬಾರುಗಳಿಗೆ ಕುಡಿಯಲು ನೀರು ಹರಿಸುವಂತೆ ರೈತರ ಒತ್ತಾಯಿಸಿದ್ದಾರೆ.