Close Menu
Ain Live News
    Facebook X (Twitter) Instagram YouTube
    Monday, June 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕ್ರಿಸ್ ಮಸ್ ಟ್ರೀ ಆಚರಣೆ ಆರಂಭವಾದದ್ದು ಹೇಗೆ? ಏನಿದರ ಮಹತ್ವ? ಇಲ್ಲಿದೆ ಡೀಟೈಲ್ಸ್!

    By AIN AuthorDecember 25, 2024
    Share
    Facebook Twitter LinkedIn Pinterest Email
    Demo

    ಕ್ರೈಸ್ತ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಈ ಕ್ರಿಸ್ ಮಸ್ ಕೂಡ ಒಂದು. ಈ ಹಬ್ಬವನ್ನು ವಿಶ್ವದಾದ್ಯಂತ ಡಿಸೆಂಬರ್ 25 ರಂದು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಡಿಸೆಂಬರ್​ 25ರಂದು ಆಚರಿಸುವ ಈ ಹಬ್ಬದ ಸಂಭ್ರಮವು ಡಿಸೆಂಬರ್ 24ರ ರಾತ್ರಿಯಿಂದಲೇ ಆರಂಭಗೊಳ್ಳುವುದು ವಿಶೇಷ. ಸರಿಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬೆತ್ಲಹೆಮ್‌ ನಗರದ, ಹಸುವಿನ ಕೊಟ್ಟಿಗೆಯಲ್ಲಿ ಯೇಸುವು ಮೇರಿ ಮಗನಾಗಿ ಜನಿಸಿದರು. ಯೇಸು ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಕ್ರಿಶ್ಚಿಯನ್ ಧರ್ಮಿಯರು ಮಾತ್ರವಲ್ಲದೇ ಪ್ರಪಂಚದಾದ್ಯಂತ ಎಲ್ಲಾ ಜನರು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದು ವಿಶೇಷ.

    ಕ್ರಿಸ್ಮಸ್ ಹಬ್ಬದಲ್ಲಿ ಅಲಂಕಾರಿಕ ವಸ್ತುಗಳು, ಕೇಕ್ ಹಾಗೂ ಇನ್ನಿತರ ಸಿಹಿ ತಿಂಡಿಗಳು, ಕ್ರಿಸ್ಮಸ್ ಟ್ರೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ. ಈ ಹಬ್ಬದಲ್ಲಿ ಮುಖ್ಯವಾಗಿ ಆಕರ್ಷಣೆಗೊಳಪಡುವ ಕ್ರಿಸ್ಮಸ್ ಟ್ರೀಯ ಮಹತ್ವ ಹಾಗೂ ಇತಿಹಾಸ ಇಲ್ಲಿದೆ.

    ಇಂಜಿನ್‌ನಲ್ಲಿ ಶಾರ್ಟ್‌ ಸರ್ಕ್ಯೂರ್ಟ್: ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಲಾರಿ!

    ಒಂದು ದಂತ ಕಥೆಯ ಪ್ರಕಾರ, ಒಮ್ಮೆ ಥರ್‌ದೇವರಿಗೆ ಮುಗ್ಧ ಮಗುವನ್ನು ಬಲಿಕೊಡಬೇಕೆಂದು ಗ್ರಾಮದ ಜನರೆಲ್ಲರೂ ನಿರ್ಧಾರ ಮಾಡಿ ಒಂದೇ ಸ್ಥಳದಲ್ಲಿ ಎಲ್ಲರನ್ನೂ ಒಗ್ಗೂಡಿಸಿದ್ದರು. ಇದನ್ನು ನೋಡಿದ ಇಂಗ್ಲಿಷ್ ಸಂನ್ಯಾಸಿ ಸಂತ ಬೋನಿಫೇಸ್ ಮಗುವನ್ನು ರಕ್ಷಿಸಲು ಮರವೊಂದು ಕೆಳಗೆ ಬೀಳುವಂತೆ ಮಾಡುತ್ತಾನೆ. ಆಗ ಆ ಸ್ಥಳದಲ್ಲಿ ಒಂದು ಸಣ್ಣ ಮರವೊಂದು ಬೆಳೆಯುತ್ತದೆ.

    ಆ ಸಂತನ ಪ್ರಕಾರ ಅದೇ ಮರ ಕ್ರಿಸ್ತನ ಶಾಶ್ವತತೆಯನ್ನು ಸಂಕೇತಿಸುತ್ತದೆ ಮತ್ತು ಅದನ್ನು ‘ ಟ್ರೀ ಆಫ್ ಲೈಫ್’ ಎಂದು ಕರೆಯಲಾಗುತ್ತದೆ. ಬದುಕಿನ ಸಂಕೇತವಾಗಿ ಮರವನ್ನು ಹಿಂದಿನಿಂದಲೂ ಆಭರಣ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಇದನ್ನು ಬದುಕಿನ ಸಕಾರಾತ್ಮಕ ಮನೋಭಾವದ ಸಂಕೇತವಾಗಿ ಪೂಜಿಸಲಾಗುತ್ತದೆ. ಹೊಸ ವರ್ಷದ ಮುನ್ನುಡಿ ಬರೆಯುವ ಈ ಹಬ್ಬ ಸಂಭ್ರಮ, ಸಂತೋಷದ ಜೊತೆಗೆ ಎಲ್ಲೆಡೆ ಶಾಂತಿಯನ್ನು ಪಸರಿಸಲಿ ಎಂಬ ಸದಾಶಯದೊಂದಿಗೆ ಎಲ್ಲರೂ ಸೇರಿ ಈ ಭಗವಂತನಲ್ಲಿ ಪ್ರಾರ್ಥನೆ ಮಾಡಿ ನವವರ್ಷವನ್ನು ಬರಮಾಡಿಕೊಳ್ಳೋಣ.

    ಕ್ರಿಸ್ಮಸ್ ಟ್ರೀಯನ್ನು ಶಾಶ್ವತ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯವು ಮೊದಲು ಜರ್ಮನಿಯಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ನಂತರ ಅದು 1830ರ ದಶಕದಲ್ಲಿ ಇಂಗ್ಲೆಂಡ್‌ಗೆ ಪಸರಿಸಿತು. ದಂತಕಥೆಯ ಪ್ರಕಾರ ಚಳಿಗಾಲದಲ್ಲಿ ಯೇಸು ಕ್ರಿಸ್ತನ ಜನನದ ನಂತರ, ಹಿಮದಿಂದ ಕೂಡಿದ್ದ ಮರಗಳು ಹಸಿರು ಬಣ್ಣಕ್ಕೆ ತಿರುಗಿದವು. ಹೀಗಾಗಿ ಕ್ರಿಸ್ಮಸ್ ಟ್ರೀಯನ್ನು ಶಾಶ್ವತತೆ ಹಾಗೂ ಧನಾತ್ಮಕತೆಗೆ ಹೋಲಿಸಲಾಗುತ್ತದೆ.

    ಕ್ರಿಸ್ಮಸ್ ಟ್ರೀ ವಾತಾವರಣದಲ್ಲಿ ಉಲ್ಲಾಸ, ಸಕಾರಾತ್ಮಕತೆ ಮತ್ತು ಚೈತನ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹಸಿರು ಬಿಟ್ಟುಕೊಡದೇ ಉಳಿಸುವ ಮನೋಭಾವನೆ ಕ್ರಿಸ್ಮಸ್ ಟ್ರೀ ಹೊಂದಿದೆ. ಈ ನಿತ್ಯಹರಿದ್ವರ್ಣ ಮರದಿಂದ ಹೊರಹೊಮ್ಮುವ ಸಿಹಿ ಸುವಾಸನೆಯು ದೈನಂದಿನ ಒತ್ತಡದಿಂದ ನಿಮ್ಮನ್ನು ವಿಶ್ರಾಂತಿಯಾಗಿರಿಸಲು ಸಹಾಯ ಮಾಡುತ್ತದೆ.

    ಆರಂಭದ ದಿನಗಳಲ್ಲಿ ಕ್ರಿಸ್ಮಸ್ ಟ್ರೀ ಟ್ರೀಗೆ ಜಿಂಜರ್ ಬ್ರೆಡ್, ಸೇಬು ಮುಂತಾದ ಆಹಾರ ಪದಾರ್ಥಗಳಿಂದ ಅಲಂಕಾರ ಮಾಡುತ್ತಿದ್ದರು. ಆದರೆ ಕಾಲಾನಂತರದಲ್ಲಿ ಸಂಪ್ರದಾಯಗಳು ವಿಕಸನಗೊಂಡು ಈಗ ವಿದ್ಯುತ್ ದೀಪಗಳು, ಮಿಠಾಯಿಗಳು, ಮಿನುಗುವ ನಕ್ಷತ್ರಗಳು, ಹಲವು ಬಣ್ಣದ ಕಾಗದಗಳಿಂದ ಕತ್ತರಿಸಿದ ಹಾಗೂ ಚಿನ್ನದ ಹಾಳೆಗಳು, ಬೆಳ್ಳಿಯ ತಂತಿಗಳು, ಸಾಂತಾ ಕ್ಲಾಸ್ ಬೊಂಬೆಗಳು, ಮತ್ತು ಸಣ್ಣ ಗೊಂಬೆಗಳನ್ನು ಅಲಂಕಾರಿಕ ವಸ್ತುಗಳಾಗಿ ಬಳಸುತ್ತಾರೆ.

    Demo
    Share. Facebook Twitter LinkedIn Email WhatsApp

    Related Posts

    ಇ.ಡಿ ಫೇಸ್ ಮಾಡೋಕೆ ನಮ್ಮ ಕುಟುಂಬ ರೆಡಿ: DCM ಡಿಕೆ ಶಿವಕುಮಾರ್!

    June 23, 2025

    ಇಡಿ ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ: ಡಿಕೆ ಸುರೇಶ್!

    June 23, 2025

    ಜಮ್ಮುವಿನಲ್ಲಿ ಲ್ಯಾಂಡ್ ಆಗದೆ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್..! ಯಾಕೆ ಗೊತ್ತಾ..?

    June 23, 2025

    BCCI New Rules: ಬೆಂಗಳೂರು ಕಾಲ್ತುಳಿತ ಕೇಸ್: ಸಂಭ್ರಮಾಚರಣೆಗಳಿಗೆ ಕಠಿಣ ನಿಯಮ ಜಾರಿಗೊಳಿಸಿದ ಬಿಸಿಸಿಐ

    June 23, 2025

    ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು: ಛಲವಾದಿ ನಾರಾಯಣಸ್ವಾಮಿ

    June 23, 2025

    IndiGo Pilot: ಪೈಲಟ್ ಆಗಲು ನೀನು ಯೋಗ್ಯನಲ್ಲ, ಹೋಗಿ ಸ್ಯಾಂಡಲ್ ಹೊಲಿಯಿರಿ: ಹಿರಿಯ ಅಧಿಕಾರಿಗಳಿಂದ ಕಿರುಕುಳ!

    June 23, 2025

    ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ: ಬಿಎಸ್ ಯಡಿಯೂರಪ್ಪ

    June 23, 2025

    ED ನನ್ನ ಮೇಲೂ ಕೇಸ್ ಹಾಕಿತ್ತು. ಆಮೇಲೆ ಏನಾಯಿತು?. ಯಾರೂ ನನ್ನ ರಕ್ಷಣೆಗೆ ಬಂದಿರಲಿಲ್ಲ: ಡಿ. ಕೆ. ಶಿವಕುಮಾರ್

    June 23, 2025

    ಈ ಸರ್ಕಾರ ರಾಜ್ಯವನ್ನು ಏಳಿಗೆ ಕಡೆಗೆ ತೆಗೆದುಕೊಂಡು ಹೋಗುವುದಿಲ್ಲ: ಕುಮಾರ್ ಬಂಗಾರಪ್ಪ

    June 23, 2025

    PM Kisan 20th Installment: ಈ ದಿನವೇ ನಿಮ್ಮ ಖಾತೆ ಸೇರಲಿದೆ 2000 ರೂಪಾಯಿ..! ಇಲ್ಲಿದೆ ಡಿಟೈಲ್ಸ್

    June 23, 2025

    ಸಾರ್ವಜನಿಕರೇ ಗಮನಿಸಿ.. ಹೊಸ ರೀತಿಯ ವಂಚನೆ: ಕೆಲವೇ ಸೆಕೆಂಡುಗಳಲ್ಲಿ 45 ಲಕ್ಷ ರೂ. ಮಾಯ!

    June 23, 2025

    ಐಶ್ವರ್ಯ ಗೌಡ ವಂಚನೆ ಪ್ರಕರಣ; ಇಡಿ ತನಿಖೆಗೆ ನನ್ನ ಸಂಪೂರ್ಣ ಸಹಕಾರ: ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.