ಬೀದರ್: ಇಷ್ಟವಿಲ್ಲದಿದ್ದರೂ ಯುವಕನೊಂದಿಗೆ ನನ್ನ ವಿವಾಹವನ್ನು ಕುಟುಂಬದವರು ನಿಶ್ಚಯ ಮಾಡಿದ್ದಾರೆ. ಇದರಿಂದ ನನ್ನನ್ನು ಪಾರು ಮಾಡಬೇಕು ಎಂದು 17ವರ್ಷ ಬಾಲಕಿಯೊಬ್ಬಳು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮದುವೆ ನಿಲ್ಲಿಸಲು ಮನವಿ ಮಾಡಿರುವ ಘಟನೆ ಬೀದರ್ ನಲ್ಲಿ ಬೆಳಕಿಗೆ ಬಂದಿದೆ.
ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ಇಷ್ಟವಿಲ್ಲದಿದ್ದರೂ ಜೂನ್ 15ರಂದು ಹುಮನಾಬಾದಿನ ಯುವಕನೊಂದಿಗೆ ನನ್ನ ವಿವಾಹವನ್ನು ಕುಟುಂಬದವರು ನಿಶ್ಚಯ ಮಾಡಿದ್ದಾರೆ. ಇದರಿಂದ ನನ್ನನ್ನು ಪಾರು ಮಾಡಬೇಕು’ ಎಂದು ಮನವಿ ಮಾಡಿದ್ದು,
ಕಂಕುಳಿನ ಕಪ್ಪು ಕಲೆ ಬೆಳ್ಳಗಾಗಬೇಕಾ!? ಹಾಗಿದ್ರೆ ಶಾಂಪೂಗೆ ಈ ಪದಾರ್ಥ ಮಿಕ್ಸ್ ಮಾಡಿ ಹಚ್ಚಿ!
ತಕ್ಷಣ ಬಾಲಕಿ ಮನೆಗೆ ಬೇಟಿ ನೀಡಿದ ಅಧಿಕಾರಿಗಳ ತಂದ ಪೋಷಕರಿಗೆ ಮನವರಿಕೆ ಮಾಡಿ ಬಾಲಕಿ ಸಮ್ಮುಖದಲ್ಲಿ ಸಂಭಂದಿಕರು ಹಾಗೂ ಮದುವೆ ನಿಶ್ಚಯವಾದ ಯವಕನ ಪೋಷಕರನ್ನು ಕರೆಸಿಕೊಂಡು ಎಲ್ಲರ ಸಮ್ಮುಖದಲ್ಲಿ ಮುಚ್ಚಳಿಕ ಬರೆಸಿಕೋಂಡು ಎಚ್ಚರಿಕೆ ನೀಡಿದ್ದಾರೆ.
ಹುಮನಾಬಾದ್ ತಹಶೀಲ್ದಾರ್ ಅಂಜುಂ ತಬಸುಮ್, ಸಿಡಿಪಿಒ, ಮಹಿಳಾ ಪಿಎಸ್ಐ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ತಹಶೀಲ್ದಾರ್ ಬಾಲಕಿಯ ಮನೆಗೆ ಭೇಟಿ ನೀಡಿದ್ದು, ಅಧಿಕಾರಿಗಳ ಕಾರ್ಯಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಶಶಿಧರ ಕೊಸಂಭೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.