ಹುಬ್ಬಳ್ಳಿ :ರಾಜ್ಯದ ಅತ್ಯಂತ ಎರಡನೇ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಎಂಬ ಪಡೆದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮೂರು ವರ್ಷಗಳ ಅವಧಿಗೆ ಕಮೀಷನರ್ ಕೆಲಸ ಮಾಡಲು ಬಿಡುತ್ತಿಲ್ಲ ಇದರಿಂದಾಗಿ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಳ್ಳ ಹಿಡಿಯುತ್ತಿವೆ. ರುದ್ರೇಶ ಗಾಳಿ ಅಧಿಕಾರವಹಿಸಿಕೊಂಡ ಕೇವಲ ಐದೂವರೆ ತಿಂಗಳಲ್ಲಿಯೇ ವರ್ಗಾವಣೆಗೊಂಡಿದ್ದಾರೆ.
ಸ್ಮಾರ್ಟ್ಸಿಟಿ ಎಂಡಿ ಆಗಿದ್ದ ಡಾ. ರುದ್ರೇಶ ಘಾಳಿ ಅವರಿಗೆ ಕಳೆದ ಜನವರಿ 27 ರಂದು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ಹೆಚ್ಚುವರಿ ಅಧಿಕಾರವನ್ನು ಸರ್ಕಾರ ನೀಡಿತ್ತು. ಹಿರಿಯ ಕೆಎಎಸ್ ಅಧಿಕಾರಿಯಾಗಿರುವ ಡಾ. ಘಾಳಿ, ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳನ್ನು ಅರಿತು, ಕಾರ್ಯನಿರ್ವಹಿಸುತ್ತಿದ್ದರು. ಅವಳಿ ನಗರದ ಸಾರ್ವಜನಿಕ ಸಮಸ್ಯೆಗಳು ಒಂದೊಂದಾಗಿ ನಿವಾರಣೆಗೊಳ್ಳುತ್ತವೆ ಎನ್ನುತ್ತಿರುವಾಗಲೇ ಸರ್ಕಾರ, ಅವರನ್ನು ವರ್ಗಾವಣೆಗೊಳಿಸಿದೆ.
ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ!? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!
ಈ ಮೊದಲು ಪಾಲಿಕೆ ಆಯುಕ್ತರಾಗಿ ಬರುವ ಅಧಿಕಾರಿಗಳು ಕನಿಷ್ಠ ಎರಡೂರು ವರ್ಷಗಳವರೆಗಾದರೂ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಕಳೆದ ಕೆಲ ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಐಎಎಸ್, ಹಿರಿಯ ಕೆಎಎಸ್ ಅಧಿಕಾರಿಗಳು ಕನಿಷ್ಠ ಎರಡು ವರ್ಷದವರೆಗೂ ಕಾರ್ಯನಿ ರ್ವಹಿಸುತ್ತಿಲ್ಲ. ಒಂದರಿಂದ ಒಂದೂವರೆ ವರ್ಷ ಪೂರ್ಣ ಗೊಳ್ಳುವುದರೊಳಗಾಗಿಯೇ ಸರ್ಕಾರ ಅವರನ್ನು ಬೇರೆಡೆ ವರ್ಗಾಯಿಸುತ್ತಿದೆ. ಇದರಿಂದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಐಎಎಸ್ ಅಧಿಕಾರಿ ಡಾ. ಸುರೇಶ ಇಟ್ನಾಳ ಅವರು 3-5-2021ಕ್ಕೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, 13-1-2022ಕ್ಕೆ ವರ್ಗಾವಣೆಗೊಂಡರು. 13-1-2022ಕ್ಕೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದ ಮತ್ತೊಬ್ಬ ಐಎಎಸ್ ಅಧಿಕಾರಿ ಡಾ. ಗೋಪಾಲ ಕೃಷ್ಣ, ಒಂದೂವರೆ ವರ್ಷ ಅಧಿಕಾರ ನಡೆಸಿದ ನಂತರ 1-7-2023ಕ್ಕೆ ವರ್ಗಾವಣೆಗೊಂಡರು.
ಮತ್ತೊಬ್ಬ ಐಎಎಸ್ ಅಧಿಕಾರಿ ಭರತ ಎಸ್. ಅವರು 6-7-2023ಕ್ಕೆ ಅಧಿಕಾರ ವಹಿಸಿಕೊಂಡು, 7-7-2023ಕ್ಕೆ ವರ್ಗಾವಣೆಗೊಂಡು. ಅಧಿಕಾರ ವಹಿಸಿಕೊಂಡ ಕೇವಲ ಒಂದು ದಿನ ಮಾತ್ರ ಆಯುಕ್ತರಾಗಿ ಕಾರ್ಯನಿರ್ವಹಿಸಿರುವುದು ಅಚ್ಚರಿಯ ಸಂಗತಿ. 7-7-2023ಕ್ಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೆಎಎಸ್ ಅಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, 27-1-2025ರವರೆಗೆ ಕಾರ್ಯನಿರ್ವಹಿಸಿದರು. ಇವರು ಸಹ ಒಂದೂವರೆ ವರ್ಷದವರೆಗೆ ಅವಳಿ ನಗರದಲ್ಲಿ ಆಯುಕ್ತರಾಗಿದ್ದರು. ಇವರ ನಂತರ 27-1-2025ರಿಂದ ಆಯುಕ್ತರಾಗಿದ್ದ ಡಾ. ರುದ್ರೇಶ ಘಾಳಿ, ಕೇವಲ ಐದೂವರೆ ತಿಂಗಳಲ್ಲಿ ವರ್ಗಾವಣೆಗೊಂಡರು.
ಈ ಮೊದಲು ಪಾಲಿಕೆ ಆಯುಕ್ತರಾಗಿ ಬರುವ ಅಧಿಕಾರಿಗಳು ಕನಿಷ್ಠ ಎರಡೂರು ವರ್ಷಗಳವರೆಗಾದರೂ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಕಳೆದ ಕೆಲ ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಐಎಎಸ್, ಹಿರಿಯ ಕೆಎಎಸ್ ಅಧಿಕಾರಿಗಳು ಕನಿಷ್ಠ ಎರಡು ವರ್ಷದವರೆಗೂ ಕಾರ್ಯ ನಿರ್ವಹಿಸುತ್ತಿಲ್ಲ. ಒಂದರಿಂದ ಒಂದೂವರೆ ವರ್ಷ ಪೂರ್ಣಗೊಳ್ಳುವುದರೊಳಗಾಗಿಯೇ ಸರ್ಕಾರ ಅವರನ್ನು ಬೇರೆಡೆ ವರ್ಗಾಯಿಸುತ್ತಿದೆ.
ಐಎಎಸ್ ಅಧಿಕಾರಿ ಡಾ. ಸುರೇಶ ಇಟ್ನಾಳ ಅವರು 3-5-2021ಕ್ಕೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, 13-1-2022ಕ್ಕೆ ವರ್ಗಾವಣೆಗೊಂಡರು. 13-1-2022ಕ್ಕೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದ ಮತ್ತೊಬ್ಬ ಐಎಎಸ್ ಅಧಿಕಾರಿ ಡಾ. ಗೋಪಾಲ ಕೃಷ್ಣ, ಒಂದೂವರೆ ವರ್ಷ ಅಧಿಕಾರ ನಡೆಸಿದ ನಂತರ 1-7-2023ಕ್ಕೆ ವರ್ಗಾವಣೆಗೊಂಡರು.
ಮತ್ತೊಬ್ಬ ಐಎಎಸ್ ಅಧಿಕಾರಿ ಭರತ ಎಸ್. ಅವರು 6-7-2023ಕ್ಕೆ ಅಧಿಕಾರ ವಹಿಸಿಕೊಂಡು, 7-7-2023ಕ್ಕೆ ವರ್ಗಾವಣೆಗೊಂಡು. ಅಧಿಕಾರ ವಹಿಸಿಕೊಂಡ ಕೇವಲ ಒಂದು ದಿನ ಮಾತ್ರ ಆಯುಕ್ತರಾಗಿ ಕಾರ್ಯನಿರ್ವಹಿಸಿರುವುದು ಅಚ್ಚರಿಯ ಸಂಗತಿ.7-7-2023ಕ್ಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೆಎಎಸ್ ಅಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, 27-1-2025ರವರೆಗೆ ಕಾರ್ಯನಿರ್ವಹಿಸಿದರು. ಇವರು ಸಹ ಒಂದೂವರೆ ವರ್ಷದವರೆಗೆ ಅವಳಿ ನಗರದಲ್ಲಿ ಆಯುಕ್ತರಾಗಿದ್ದರು. ಇವರ ನಂತರ 27-1-2025ರಿಂದ ಆಯುಕ್ತರಾಗಿದ್ದ ಡಾ. ರುದ್ರೇಶ ಘಾಳಿ, ಕೇವಲ ಐದೂವರೆ ತಿಂಗಳಲ್ಲಿ ವರ್ಗಾವಣೆಗೊಂಡರು.