ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಇಂದು ಉದ್ಘಾಟನೆ ಸುಪ್ರಸಿದ್ಧ “ವಿಜಯಾ ಕರದಂಟು” ಅಮೀನಗಡದಲ್ಲಿ1907 ರಲ್ಲಿ ದಿ ಶ್ರೀ ಸಾವಳಿಗೆಪ್ಪ ರಾಚಪ್ಪ ಐಹೋಳ್ಳಿ ಯವರು ಪ್ರಪ್ರಥಮ ಬಾರಿಗೆ ತಯಾರಿಸಿ ಇದನ್ನು ಜಗತ್ತಿಗೆ ಪರಿಚಯಿಸಿದರು. ತರ ಅವರ ಮಗನಾದ ಬಸವರಾಜ ಸಾವಳಿಗೆಪ್ಪ ಐಹೋಳ್ಳಿ ಯವರು ಕರದಂಟಿನೊಂದಿಗೆ ಬೇರೆ ಬೇರೆ ಸಿಹಿ ತಿಂಡಿಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಸಂಪಾದಿಸಿದರು.
ದಯವಿಟ್ಟು ಭಾರತಕ್ಕೆ ಬನ್ನಿ: RCBಗೆ ವಿಶ್ ಮಾಡಿದ ವಿಜಯ್ ಮಲ್ಯಗೆ ನಯವಾಗಿ ಸ್ವಾಗತಿಸಿದ SBI
ಪ್ರಸ್ತುತ ಮೂರನೇ ತಲೆಮಾರಿನ ಸಂತೋಷ್ ಐಹೊಳ್ಳಿಯವರು ಅಮೀನಗಡ ವಿಜಯಾ ಕರದಂಟನ್ನು ರಾಜ್ಯಾದ್ಯಂತ ಮತ್ತು ಪಕ್ಕದ ಗೋವಾ ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರ ವಿಶ್ವಾಸವನ್ನು ಸಂಪಾದಿಸಿ ಗ್ರಾಹಕರ ಅವಶ್ಯಕತೆಯನ್ನು ಪೂರೈಸುತ್ತಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ರಾಯಚೂರು, ಗಂಗಾವತಿ, ಸಿಂಧನೂರು, ಇಳಕಲ್, ಗುಳೇದಗುಡ್ಡ, ಹುನಗುಂದ, ಐಹೋಳ್ಳಿ, ಕಾರಟಗಿ, ಮಾಸ್ತಿ, ಲಿಂಗಸೂರು, ಅಮೀನಗಡ, ಬನಹಟ್ಟಿ, ಬಾಗಲಕೋಟೆ, ವಿಜಯಪುರ, ಹೀಗೆ 26 ಶಾಖೆಗಳು ಇದ್ದು ಈಗ 27ನೇ ಶಾಖೆ ಹುಬ್ಬಳ್ಳಿಯಲ್ಲಿ ಪ್ರಾರಂಭವಾಗುತ್ತಿದೆ, ಇದೇ ದಿನಾಂಕ 06-06-2025 ಶುಕ್ರವಾರ ರಂದು ದಾಜೀಬಾನ್ ಪೇಟೆ ಮೂರುಸಾವಿರ ಮಠ ರಸ್ತೆಯಲ್ಲಿ ಪ್ರಾರಂಭವಾಗುತ್ತಿದೆ.
ನಮ್ಮಲ್ಲಿ ಕರದಂಟುಗಳಲ್ಲಿ ಒಟ್ಟು 5 ಪ್ರಕಾರಗಳಿದ್ದು ಇದ್ದು ಒಟ್ಟು 20 ಕ್ಕೂ ಹೆಚ್ಚು ಬಗೆಬಗೆಯ ಸಿಹಿ ತಿಂಡಿಗಳು ಲಭ್ಯವಿರುತ್ತದೆ ಹಾಗೂ ಬೇರೆ ಬೇರೆ ರೀತಿಯ ಖಾರಾ ಪದಾರ್ಥಗಳು ಸಹ ಲಭ್ಯವಿರುತ್ತದೆ.
ಮೂರುಸಾವಿರ ಮಠದ ರಸ್ತೆಯಲ್ಲಿ ಆರಂಭವಾಗಲಿರುವ “ವಿಜಯ ಕರದಂಟು” ಮಾರಾಟ ಮಾಡುವ ಮಳಿಗೆಯನ್ನು ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ್ ಹೊರಟ್ಟಿಯವರು ಹಾಗೂ ಗಂಗಾವತಿ ಸಿಲ್ಕ ಸಾರೀಸ ಮಾಲೀಕರಾದ
ಶ್ರಿ ಮತಿ ಸುಲೋಚನಾ ಬಸವರಾಜ್ ಕಮತಗಿ ಅವರು ಗುರುವಾರ ಮುಂಜಾನೆ 11 ಘಂಟೆಗೆ ಉದ್ಘಾಟಿಸಲಿದ್ದಾರೆ. ಮ ನೀ ಫ್ರ ಶಾಂತಲಿಂಗ ಮಹಾಸ್ವಾಮೀಜಿ ದೊರೆಸ್ವಾಮಿ ವಿರಕ್ತಮಠ ಬೈರನಟ್ಟಿ ಇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಹುಬ್ಬಳ್ಳಿ ಶಾಖೆಯ ಪ್ರಾರಂಭೋತ್ಸವದ ಆಕರ್ಷಣೆಯಾಗಿ ಅ ಗ್ರಾಹಕರಿಗೆ ದಿನಾಂಕ 6, 7 ಮತ್ತು 8ರಂದು ಮೂರು ದಿನಗಳ ಕಾಲ ಪ್ರತಿ ರೂ 500/- ಖರೀದಿಯ ಮೇಲೆ 1 ಗ್ರಾಂ ಬೆಳ್ಳಿ ನಾಣ್ಯ ಉಚಿತವಾಗಿ ನೀಡಲಾಗುತ್ತಿದ್ದು. ಗ್ರಾಹಕರು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕೆಂದು ಸಂತೋಷ ಐಹೊಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಮತಿ ಲಕ್ಷ್ಮೀ ಐಹೊಳ್ಳಿ, ಸುನಿಲ್ ನಾಗಠಾಣ ಶ್ರೀ ಮತಿ ಆಶಾ ನಾಗಠಾಣ, ಬಸವರಾಜ್ ಗಂಗಾವತಿ, ಅಭಯ ಗಂಗಾವತಿ, ಕುಮಾರ ಅಮೀನಗಡ ಉಪಸ್ತಿತರಿದ್ದರು