ಹುಬ್ಬಳ್ಳಿ:ಮುಂದಿನ ಶೈಕ್ಷಣಿಕ ವರ್ಷ (2026-27)ದಿಂದ ಹುಬ್ಬಳ್ಳಿ ಉಣಕಲ್ ನಲ್ಲಿರುವ ಗುರುಕುಲದಲ್ಲಿ ಆಧುನಿಕ ಗುರುಕುಲ ಶಿಕ್ಷಣ ಆರಂಭಿಸಲು ನಾವು ಸಿದ್ಧರಿದ್ದೇವೆ. ಅದಕ್ಕೆ ತಕ್ಕಂತೆ ಪಠ್ಯಕ್ರಮವನ್ನು ರೆಡಿ ಇಟ್ಟಿದ್ದೇವೆ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ಬೆಟಕೋಟಿ ಹೇಳಿದರು.
ವೇಗವಾಗಿ ಬರೋ ಕಾರುಗಳೇ ಇವರ ಟಾರ್ಗೆಟ್: ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ಹೈ ವೇನಲ್ಲಿ ಡೆಡ್ಲಿ ದರೋಡೆ ಗ್ಯಾಂಗ್..?
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ರಾಜ್ಯ ಸರ್ಕಾರ, ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲವನ್ನು ನಮಗೆ ವಹಿಸಿದೆ. 2024-25ರಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿದ್ದೇವೆ. ಪುನಃ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಜನರು ಆಸಕ್ತಿ ತೋರಬೇಕಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಜನಾಭಿಪ್ರಾಯ ಸಂಗ್ರಹಿಸಲಾಗುವುದು.
ಅದಕ್ಕೂ ಪೂರ್ವ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸಭೆ ಕರೆದು ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದರು. ಹುಬ್ಬಳ್ಳಿ ಗುರುಕುಲವು ವಿವಿಯ ಪ್ರಾದೇಶಿಕ ಕೇಂದ್ರವಾಗಿದೆ. ಸದ್ಯ ಹುಬ್ಬಳ್ಳಿ ಗುರುಕುಲದಲ್ಲಿ ವಿವಿ ಯಿಂದ ನಾಟಕದಲ್ಲಿ ಎಂಎ, ಡಿಪ್ಲೊಮಾ, ಹಿಂದೂಸ್ಥಾನಿ ಸಂಗೀತದಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳನ್ನು ನಡೆಸುತ್ತಿದ್ದೇವೆ. ಒಟ್ಟು 32 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗುರುಕುಲ ಇದ್ದಾಗ ರಾಜ್ಯ ಸರ್ಕಾಪ ಹಣ ನೀಡುತ್ತಿತ್ತು. ಈಗ ವಿಶ್ವವಿದ್ಯಾಲಯದ ಹಣದಲ್ಲಿಯೇ ಗುರುಕುಲವನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.
ವಿವಿಧ ಕೋರ್ಸ್ಗಳಿಗೆ ಪ್ರವೇಶ:
ವಿಶ್ವವಿದ್ಯಾಲಯವು 2025-26ನೇ ಸಾಲಿಗೆ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಿದೆ. ಮೂರು ವರ್ಷಗಳ ಬಿಪಿಎ, ಎಂಪಿಎ, ಡಿ.ಲಿಟ್, 6 ತಿಂಗಳ ಸರ್ಟಿಫಿಕೇಟ್ ಕೋರ್ಸ್, 1 ವರ್ಷದ ಡಿಪ್ಲೊಮಾ, 1 ವರ್ಷದ ಪಿ.ಜಿ. ಡಿಪ್ಲೊಮಾ ಕೋರ್ಸ್ಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2024-25ರಲ್ಲಿ 31 ಬಿಪಿಎ, 64 ಎಂಪಿಎ, 108 ಡಿ.ಲಿಟ್ ಸೇರಿ 616 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 76 ಸಂಸ್ಥೆಗಳು ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ ಎಂದರು.
ಎಲ್ಲ ವಿವಿ ಗಳಂತೆ ನಮಗೂ ಬೋಧಕ ಸಿಬ್ಬಂದಿಯ ಕೊರತೆ ಇದೆ. ರಾಜ್ಯಾದ್ಯಂತ 22 ಪರೀಕ್ಷಾ ಕೇಂದ್ರಗಳಲ್ಲಿ ಶಾಸ್ತ್ರ ಪತ್ರಿಕೆ ಪರೀಕ್ಷೆಗಳನ್ನು ಮೇ 11ರಂದು ನಡೆಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳು ಮೇ 13ರಿಂದ ಆರಂಭಗೊಂಡಿದ್ದು, ಜೂನ್ 8ಕ್ಕೆ ಕೊನೆಗೊಳ್ಳಲಿದೆ. ಮೌಲ್ಯಮಾಪನ ಕಾರ್ಯ ಆರಂಭಗೊಂಡಿದ್ದು, ಜುಲೈ ತಿಂಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ (ಮೌಲ್ಯಮಾಪನ) ಎಂ.ಜಿ. ಮಂಜುನಾಥ ಇದ್ದರು.