ಪ್ಲಾಸ್ಟಿಕ್ ಬಳಕೆಯಂತಹ ನಮ್ಮ ದೈನಂದಿನ ಚಟುವಟಿಕೆಗಳು ವಿವಿಧ ರೀತಿಯ ಮಾಲಿನ್ಯ, ಶೋಷಣೆ ಮತ್ತು ಗ್ರಹದ ವಿನಾಶಕ್ಕೆ ಕಾರಣವಾಗುವುದನ್ನು ನಿಲ್ಲಿಸಬೇಕು. ಹೀಗಾಗಿ ಪರಿಸರ ವಿರುದ್ದವಾದುದನ್ನು ಮಾನವರಾದ ನಾವುಗಳು ಮಾಡಬಾರದು, ವಿಶ್ವ ಪರಿಸರ ದಿನದ ಗಮನವು ನಮ್ಮ ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸುವುದಾಗಿದೆ ಎಂದು ರಬಕವಿ ಅರವಳಿಕೆ ತಜ್ಞ ಡಾ. ರವಿ ಜಮಖಂಡಿ ಹೇಳಿದರು.
ಕಾಲ್ತುಳಿತದಲ್ಲಿ ಆರ್ ಸಿಬಿ ಅಭಿಮಾನಿಗಳು ಸಾವು: ಉದ್ಯಮಿ ವಿಜಯ್ ಮಲ್ಯ ಹೇಳಿದ್ದೇನು?
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಾ.ರವಿ ಜಮಖಂಡಿ ಹಾಗೂ ಗೆಳೆಯರ ಬಳಗ ಮತ್ತು ಭಾರತ್ ಗ್ಯಾಸ್ ಸಹಯೋದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉತ್ತಮ ಗುಣಮಟ್ಟದ ರೂ.೪೦ಸಾವಿರ ವೆಚ್ಚದ ಅಧೀಕ ಬೆಲೆಯ ಗಿಡಗಳನ್ನು ಖರೀದಿಸಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡನೆಟ್ಟು ಅವರು ಮಾತನಾಡಿದರು.
ಈ ಶಾಲೆಯಲ್ಲಿ ಕಲಿತ ಎಲ್ಲ ಹಳೆವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ತಮ್ಮದೇ ತಮ್ಮಕೈಲಾದ ಸಹಾಯ ಹಸ್ತನೀಡಿ ಶಾಲೆಗಳ ಉಳುವಿಗಾಗಿ ಸೇವೆ ಮಾಡಿರಿ ಎಂದರು. ಶಾಲೆಯ ಮುಖ್ಯ ಗುರು ವಿಜಯಕುಮಾರ ಹಲಹುರ್ಕಿ ಮಾತನಾಡಿ ಶಾಲೆಯ ಹಳೆವಿದ್ಯಾರ್ಥಿಗಳಾದ ಡಾ. ರವಿ ಜಮಖಂಡಿ ಹಾಗೂ ವಿನೋದ ಮಾಳಗಿಯವರು ನಮ್ಮ ಶಾಲೆಗೆ ೪.೫ ಲಕ್ಷ ವೆಚ್ಚದಲ್ಲಿ ೮ ಕೊಠಡಿಗಳಿಗೆ ಮೇಲ್ಚಾವಣಿ ಹಾಗೂ ಬಣ್ಣ ಸುಣ್ಣ ಕೊಟ್ಟಿದ್ದು ಸಂತಸ ತಂದಿದೆ ಎಂದರು.
ನಗರದ ಹಿರಿಯರಾ ಶಿವಾನಂದ ಬಾಗಲಕೋಟಮಠ ಮಾತನಾಡಿ ಪರಿಸರ ಕಾಳಜಿಹೊಂದಿದ ಡಾ. ರವಿ ಜಮಖಂಡಿಯರು ನಗರದ ಹೊರವಲಯದಲ್ಲಿ ಅನೇಕ ಗಿಡಗಳನ್ನು ಹಚ್ಚಿ ಅವುಗಳನ್ನು ಇಂದಿಗೂ ಪಾಲನೆ ಪೊಷಣೆ ಮಾಡುತ್ತಿರುವ ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ಬಕವಿ ನಗರದ ಅನೇಕ ಹಿರಿಯರು ಆಗಮಿಸಿ ಶಾಲಾ ಆವರಣದಲ್ಲಿ ೪೦ಕ್ಕೂ ಅಧೀಕ ಮರಗಳನ್ನು ನೆಟ್ಟರು.
ಇದೇ ಸಂದರ್ಭದಲ್ಲಿ ಪ್ರವೀಣ ಹಜಾರೆ, ವಿಜಯ ನಾಶಿ, ಸಂಜು ತೇಲಿ, ಆನಂದ ಜುಗಳಿ, ರಾಮಣ್ಣ ಹುಲಕುಂದ, ವಿಜಯ ದೇಸಾಯಿ, ಪ್ರಶಾಂತ ಪಾಲಬಾಂವಿ, ಡಾ. ಜಿ. ಎಚ್. ಚಿತ್ತರಗಿ, ಶೇಖರ ಕೊಟ್ರಶೆಟ್ಟಿ, ಇಂದ್ರಪ್ಪ ಲಾಳಕೆ. ಅಶೋಕ ಕೋತಿನ, ಕೀರಣ ರಜಪುತ, ಗಜಾನನ ತೆಗ್ಗಿ, ಈರಣ್ಣ ಗುಣಕಿ, ಶಿವಾನಂದ ಮೂಲಿಮನಿ ಮತ್ತು ಶಾಲೆಯ ಎಲ್ಲ ಶಿಕ್ಷಕರು, ಹಿರಿಯರು ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ