ತುಮಕೂರು:- ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ 18ಮಂದಿ ಅಪ್ರಾಪ್ತರನ್ನು ಬಂಧಿಸಿ ಬಳಿಕ ಅರಣ್ಯಾಧಿಕಾರಿಗಳು ಬಿಟ್ಟು ಕಳಿಸಿರುವ ಘಟನೆ ಜರುಗಿದೆ. 18ಮಂದಿಯೂ ಅಪ್ರಾಪ್ತರಾಗಿದ್ರಿಂದ ಎಫ್ಐಆರ್ ದಾಖಲಿಸಿಕೊಂಡು ಬಿಟ್ಟು ಕಳಿಸಿದ್ದಾರೆ.
ಅಮರನ್ ನಟನ ಮತ್ತೊಂದು ಚಿತ್ರ ಬಿಡುಗಡೆ ರೆಡಿ.. ಶಿವಕಾರ್ತಿಕೇಯನ್ ಮದರಾಸಿ ಯಾವಾಗ ರಿಲೀಸ್?
ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಬುಕ್ಕಾಪಟ್ಟಣ ವಲಯದ ಚಿಂಕಾರ ವನ್ಯಜೀವಿಧಾಮದಲ್ಲಿ ಘಟನೆ ಜರುಗಿದೆ. ಮಧುಗಿರಿ ತಾಲ್ಲೂಕಿನ ತಿಪ್ಪನಹಳ್ಳಿ, ಬಡವನಹಳ್ಳಿ, ಶಿರಾ ತಾಲ್ಲೂಕಿನ ಕಳ್ಳಿಪಾಳ್ಯ ಹಾಗೂ ತುಮಕೂರು ತಾಲ್ಲೂಕಿನ ಕೆಂಚಯ್ಯನಪಾಳ್ಯ ಗ್ರಾಮಕ್ಕೆ ಅಪ್ರಾಪ್ತರು ಸೇರಿದ್ದಾರೆ.
ಬೇಟೆಯಾಡಲು ತಂದಿದ್ದ ವಾಹನ, ಬಲೆ, ಮರದ ದೊಣ್ಣೆ, ಭರ್ಜಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೆಲವು ದಿನಗಳಿಂದ ಬೇಟೆಗಾರರ ಚಟುವಟಿಕೆ ಹೆಚ್ಚಾಗಿತ್ತು. ಇದರ ಮಾಹಿತಿ ಪಡೆದು ವಲಯ ಅರಣ್ಯಾಧಿಕಾರಿ ಚಂದನ್ ಕುಮಾರ್, ಉಪ ವಲಯಾಧಿಕಾರಿ ಕಿರಣ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಾಗಿತ್ತು.