ಭಯೋತ್ಪಾದಕರನ್ನು ಮುಸ್ಲಿಮರೆಂದು ನಾನೆಂದು ಪರಿಗಣಿಸುವುದಿಲ್ಲ ಎಂದು ಬಾಲಿವುಡ್ ನಟ ಆಮಿರ್ ಖಾನ್ ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಸಿತಾರೆ ಜಮೀನ್ ಪರ್’ ಚಿತ್ರದ ಪ್ರಚಾರದಲ್ಲಿ ನಟ ಆಮಿರ್ ಖಾನ್ ಬ್ಯೂಸಿ ಆಗಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಅವರು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ನಡೆದಾಗ ಪ್ರವಾಸಿಗರಿಗೆ ‘ನೀವು ಹಿಂದೂ ಅಥವಾ ಮುಸ್ಲಿಮರಾ’ ಎಂಬಂತಹ ಅವರ ಧರ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಉಗ್ರರನ್ನು ಆಮಿರ್ ಮುಸ್ಲಿಮರು ಎಂದು ಕರೆಯಲು ಸಿದ್ಧರಲಿಲ್ಲ. ಆಮಿರ್ ಕೂಡ ಮುಸ್ಲಿಂ. ಆದರೆ, ಅವರಿಗೆ ಆ ಬಗ್ಗೆ ಹೆಮ್ಮೆ ಇದೆ.
ಅವರು ನಮ್ಮ ಜನರನ್ನು ಕೊಂದರು. ಇದು ಯಾವ ರೀತಿಯ ವಿಧಾನ? ಇದು ಮಾನವೀಯತೆಯ ಮೇಲಿನ ದಾಳಿ. ಅವರು ಇದಕ್ಕೆ ನಾಚಿಕೆಪಡಬೇಕು. ಯಾವುದೇ ಧರ್ಮವು ಮುಗ್ಧ ಜನರನ್ನು ಕೊಲ್ಲಬೇಕೆಂದು ಹೇಳುವುದಿಲ್ಲ. ನಾನು ಭಯೋತ್ಪಾದಕರನ್ನು ಮುಸ್ಲಿಮರೆಂದು ಪರಿಗಣಿಸುವುದಿಲ್ಲ. ಇಸ್ಲಾಂನಲ್ಲಿ, ನೀವು ಮಹಿಳೆಯರ ವಿರುದ್ಧ ಕೈ ಎತ್ತುವಂತಿಲ್ಲ, ನೀವು ಚಿಕ್ಕ ಮಕ್ಕಳನ್ನು ಕೊಲ್ಲುವಂತಿಲ್ಲ, ಯಾವುದೇ ಮುಗ್ಧ ವ್ಯಕ್ತಿಯ ಜೀವವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಬರೆಯಲಾಗಿದೆ. ಹಾಗೆ ಮಾಡಿದರೆ ಅದು ಇಸ್ಲಾಂ ವಿರುದ್ಧವಾಗಿದೆ’ ಎಂದು ಹೇಳಿದರು.
ನನ್ನ ಸೈನ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ಕಾರ್ಗಿಲ್ ಯುದ್ಧ ನಡೆದು ನಾವು ಅದರಲ್ಲಿ ಗೆದ್ದಾಗ, ಕಾರ್ಗಿಲ್ನಲ್ಲಿ 8 ದಿನಗಳ ಕಾಲ ಉಳಿದು ಎಲ್ಲಾ ರೆಜಿಮೆಂಟ್ಗಳನ್ನು ಭೇಟಿಯಾದ ಏಕೈಕ ವ್ಯಕ್ತಿ ನಾನು. ಅವರನ್ನು ಪ್ರೋತ್ಸಾಹಿಸಲು ನಾನು ಅಲ್ಲಿಗೆ ಹೋಗಿದ್ದೆ’ ಎಂದು ಅವರು ಹೇಳಿದರು.