ಬೆಂಗಳೂರು:- ಇಡಿ ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ನಿಮಗಿದು ಗೊತ್ತಾ!? ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವುದರಿಂದ, ಸಿಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!?
ಇಡಿ ತನಿಖೆ ಬಳಿಕ ಮಾತನಾಡಿದ ಡಿಕೆ ಸುರೇಶ್, ಇಂದು ಬೆಳಗ್ಗೆ ೧೧ ರಿಂದ ೬ ವರೆಗೆ ಇಡಿ ವಿಚಾರಣೆ ಹಾಜರಾಗಿದ್ದೆ. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ಜು.೮ ರಂದು ಹಾಜರಾಗಲು ಹೇಳಿದ್ರು. ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ ಎಂದರು.
ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಜೊತೆ ಪರಿಚಯ ಇದೆ ಅಂತ ಹೇಳಿ ಕೆಲವರು ಹಣ ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡವರು ಕೂಡ ವಿಚಾರಣೆ ವೇಳೆ ನನ್ನ ಹೆಸರು ಹೇಳಿ ಹಣ ಪಡೆದ ಬಗ್ಗೆ ದಾಖಲೆ ಕೊಟ್ಟಿದ್ರು. ಈ ಬಗ್ಗೆ ಎಲ್ಲಾ ಪ್ರಶ್ನೆಗಳು ಕೇಳಿದ್ವು ಅದಕ್ಕೆ ತಡ ಆಗಿದೆ. ಆಕೆಗೂ ನನಗೂ ಪರಿಚಯ ಇರಲಿಲ್ಲ. ಕ.ರಾಜ್ಯೋತ್ಸವ ಸೇರಿದಂತೆ ಕಾರ್ಯಕ್ರಮಕ್ಕೆ ಕರೆದಿದ್ರು ಹೋಗಿದ್ದೆ. ಯಾವುದೇ ವ್ಯವಹಾರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.