ಬೆಂಗಳೂರು: ಇದೇ ಮಾರ್ಚ್ 27ರಂದು ದೊಡ್ಡ ಕಮ್ಮನಹಳ್ಳಿಯ ಮನೆಯಲ್ಲಿ ಭಯಾನಕ ಕೃತ್ಯ ಬೆಳಕಿಗೆ ಬಂದಿತ್ತು. ಹುಳಿಮಾವು ಪೊಲೀಸರು ಮನೆಯ ಬಾಗಿಲು ತೆರೆದು ನೋಡಿದಾಗ ಸೂಟ್ಕೇಸ್ನಲ್ಲಿ ಗೌರಿ ಅನ್ನೋ ಮಹಿಳೆಯ ತುಂಡು, ತುಂಡಾದ ದೇಹ ಪತ್ತೆಯಾಗಿತ್ತು. ಗೌರಿ ಸಾವಿನ ತನಿಖೆ ಬೆನ್ನತ್ತಿ ಹೋದ ಸಾಕಷ್ಟು ಮಾಹಿತಿ ಹೊರ ಬಂದಿದೆ. ಹೌದು ಆರೋಪಿ ರಾಕೇಶ್ನನ್ನು 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆರೋಪಿ ರಾಕೇಶ್ ಹಲವು ವಿಚಾರಾಗಳನ್ನು ಪೊಲೀಸರ ಮುಂದೆ ಬಾಯಿಟ್ಟಿದ್ದಾನೆ. “ ಗೌರಿ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ” ಹೇಳಿದ್ದಾನೆ. ಇಷ್ಟೇ ಅಲ್ಲದೇ, ಆರೋಪಿ ರಾಕೇಶ್ ಇನ್ನೂ ಹಲವು ವಿಚಾರಗಳನ್ನು ಪೊಲೀಸರ ಮುಂದೆ ಹೇಳಿದ್ದಾನೆ.
“ಗೌರಿ ನನ್ನ ಕುಟುಂಬದ ಜೊತೆಗೆ ಹೊಂದಾಣಿಕೆ ಆಗಲಿಲ್ಲ. ಆಕೆ ಕುಟುಂಬದ ಒಳಗೆ ದಬ್ಬಾಳಿಕೆ ಮಾಡುತ್ತಿದ್ದಳು. ಕುಟುಂಬದ ಯಾವ ಸದಸ್ಯರ ಜೊತೆಗೆ ಹೊಂದಿಕೊಳ್ಳಲಿಲ್ಲಾ. ಬದಲಾಗಿ ಬೆಂಗಳೂರಿಗೆ ಹೋಗುವ, ಅಲ್ಲಿಯೇ ಇಬ್ಬರು ಕೆಲಸ ಮಾಡುವ ಎಂದು ಒತ್ತಾಯ ಮಾಡಿ ಇಲ್ಲಿಗೆ ಕರೆಸಿದಳು. ಒಂದು ತಿಂಗಳಾದರೂ ಆಕೆಗೆ ಕೆಲಸ ಸಿಗಲಿಲ್ಲ. ಕೆಲಸ ಹುಡುಕಲು ಆಕೆಗೆ ಸಹಾಯ ಮಾಡಿದರೂ ನೀನು ನನಗೆ ಕೆಲಸ ಹುಡುಕಲು ಸಹಾಯ ಮಾಡಿಲ್ಲ ಎಂದು ಪದೇ ಪದೇ ಗಲಾಟೆ ಮಾಡುತ್ತಿದ್ದಳು” ಎಂದು ಪತಿ, ಆರೋಪಿ ರಾಕೇಶ್ ಹೇಳಿದ್ದಾನೆ.
ನಾನು ಮನೆಯಿಂದಲೇ ಕೆಲಸ ಮಾಡುತ್ತಿದ್ದ ಕಾರಣ ಗಲಾಟೆ ಮಾಡುತ್ತಿದ್ದಳು. ಆಕೆಯದ್ದೇ ನಡೆಯಬೇಕು ಎನ್ನುವ ರೀತಿಯಲ್ಲಿ ಇದ್ದಳು. ಆ ದಿನ ರಂದು ಸಹ ಇದೇ ವಿಚಾರಗಳುಗೆ ಜೋರು ಜಗಳಕ್ಕೆ ಕಾರಣವಾದವು.
ಈ ವೇಳೆ ಆಕೆ ನನಗೆ ಚಾಕುವಿನಿಂದ ಹೊಡೆದಳು. ಬಳಿಕ ನಾನು ಚಾಕುವಿನಿಂದ ಆಕೆಯ ಕುತ್ತಿಗೆಗೆ ಚುಚ್ಚಿದೆ. ನಾನು ಸೆಲ್ಫ್ ಡಿಫೆನ್ಸ್ಗಾಗಿ ಕೊಲೆ ಮಾಡಿದೆ. ನಂತರ ಕೃತ್ಯ ಮುಚ್ಚಿಹಾಕಲು ಬ್ಯಾಗ್ಗೆ ತುಂಬಿದೆ. ಆದರೆ, ಮೃತದೇಹ ಸಾಗಿಸುವುದು ಕಷ್ಟವಾದ ಕಾರಣ ಅಲ್ಲಿಯೇ ಬಿಟ್ಟು ಹೋದೆ” ಎಂದು ಬಾಯಿಬಿಟ್ಟಿದ್ದಾನೆ.