ಕಲಬುರ್ಗಿ:– ಕಾಂಗ್ರೆಸ್ ಪಕ್ಷದಲ್ಲಿ ಗಂಡಸರೂ ಇದ್ದಾರೆ ಅಂತ ಬಿಆರ್ ಪಾಟೀಲ್ ಸಾಬೀತು ಮಾಡಿದ್ದಾರೆ ಎಂದು ಚಲವಾದಿ ನಾರಾಯಣಸ್ವಾಮಿ ಟೀಕೆ ಮಾಡಿದ್ದಾರೆ.
ಹಾರಲು ಯಾರ ಅನುಮತಿ ಬೇಡ, ರೆಕ್ಕೆ ನಿಮ್ಮವು: ಖರ್ಗೆಗೆ ಶಶಿ ತರೂರ್ ಎದುರೇಟು!
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಗಂಡಸರೇ ಇಲ್ಲ ಅಂದ್ಕೊಡಿದ್ದೆ, ಆದರೆ ಆಳಂದ್ ಶಾಸಕ ಬಿಅರ್ ಪಾಟೀಲ್ ಅದನ್ನು ಸುಳ್ಳು ಮಾಡಿದ್ದಾರೆ, ಅವರ ನಂತರ ರಾಜು ಕಾಗೆ ಮತ್ತು ಗೋಪಾಲಕೃಷ್ಣ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ನಾಯಕರು ಹೇಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪಹಾಸ್ಯ ಮಾಡಿದ್ದರು, ಈಗ ಅವರ ಪಕ್ಷದವರೇ ಆರೋಪಗಳನ್ನು ಮಾಡುತ್ತಿದ್ದಾರಲ್ಲ, ಏನು ಹೇಳುತ್ತಾರೆ? ಎಂದು ಚಲವಾದಿ ಪ್ರಶ್ನಿಸಿದರು.