ವಿಜಯಪುರ : ಯಾರು ಏನೇ ಹೇಳಿದ್ರು, 2028ಕ್ಕೆ ಸಿಎಂ ನಾನೇ ಎಂದು ಯತ್ನಾಳ್ ಪುನರುಚ್ಚರಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ನೋಡ್ತಾ ಇರ್ರಿ ನಾನೇ ಸಿಎಂ ಆಗ್ತೀನಿ, ಇವತ್ತೆ ಹೆಡಲೈನ್ ಬರೆದು ಇಟ್ಟುಕೊಳ್ಳಿ ಎಂದಿದ್ದಾರೆ.
ಹಿಂದುತ್ವ ಗೋಮಾತೇ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡ್ತೇನೆ. ಇಂದು ವಿಜಯೆಂದ್ರ ಪರ ಕೆಲ ಮಾಧ್ಯಮಗಳು ಕೆಲಸ ಮಾಡುತ್ತೇವೆ. ಅಂತಹ ಮಾಧ್ಯಮಗಳು ಸಹ ಮುಂದೆ ನನ್ನ ಬಗ್ಗೆ ಬರೆಯುತ್ತೇವೆ. ಯಡಿಯೂರಪ್ಪ ಅವಧಿಯಲ್ಲಿ ನಾನು ಸಚಿವ ಆಗಲಿಲ್ಲ. ಭ್ರಷ್ಟನ ಕೈಕೆಳಗೆ ಕೆಲಸ ಮಾಡಬಾರದು ಅನ್ನೋ ಕಾರಣಕ್ಕೆ ಮಂತ್ರಿ ಆಗಲಿಲ್ಲ. ಹಿಂದೆ ಬೊಮ್ಮಾಯಿ ಮಂತ್ರಿ ಆಗಿ ಅಂದ್ರು ನಾನು ಅಭಿವೃದ್ಧಿಗೆ ಹಣ ಕೊಡಿ ಮಂತ್ರಿಗಿರಿ ಬೇಡ ಅಂದೆ. ನನಗೆ ಕಾರ್ ಮೇಲೆ ಕೆಂಪು ಗೂಟ ಹಾಕಿಕೊಂಡು ಅಡ್ಡಾಡೋ ಶೋಕಿ ಇಲ್ಲ ಎಂದು ಬಿಎಸ್ವೈಗೆ ತಿರುಗೇಟು ನೀಡಿದರು.
ಯತ್ನಾಳ್ ಹೊಸ ಪಕ್ಷ ಕಟ್ಟುವುದರ ಬಗ್ಗೆ ರಮೇಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ
ಬಿಜೆಪಿ ಪಕ್ಷಕ್ಕೆ ವಾಪಸ್ ವಿಚಾರವಾಗಿ ಮಾತನಾಡಿ, ನಾನು ಪಕ್ಷಕ್ಕೆ ತೆಗೆದುಕೊಳ್ಳಿ ಎಂದು ಕೈ ಮುಗಿಯಲ್ಲ. ಯಾವುದೇ ಹೈಕಮಾಂಡ್ ನಾಯಕರನ್ನ ನಾನು ಭೇಟಿ ಮಾಡೋದಿಲ್ಲ. ನಾನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಯಾರ ಕೈಕಾಲು ಹಿಡಿಯೋದಿಲ್ಲ. ನನ್ನನ್ನ ಪರವಾಗಿ ಸಾಕಷ್ಟು ಜನರು ನಿಂತಿದ್ದಾರೆ. ಜನರೇ ನನಗೆ ಹೈಕಮಾಂಡ್, ವಿಜಯಪುರ ನಗರದ ಕ್ಷೇತ್ರದ ಜನರೇ ನನಗೆ ಎಲ್ಲವೂ ಎಂದಿದ್ದಾರೆ.
ಕಾಂಗ್ರೆಸ್ ಹೋಗ್ತಿರಾ ಪ್ರಶ್ನೆಗೆ ಉತ್ತರ ನೀಡಿದ ಶಾಸಕ ಯತ್ನಾಳ್, ನಾನು ಸತ್ತರು ನನ್ನ ಹೆಣ ಕಾಂಗ್ರೆಸ್ ಕಚೇರಿ ರಸ್ತೆಯ ಮುಂದು ಮೆರವಣಿಗೆ ಮಾಡಬೇಡಿ ಎಂದು ಉಯಿಲು ಬರೆದಿಡುತ್ತೇನೆ ಎಂದರು.