ಬಳ್ಳಾರಿ: ಜೂನ್ 27ರಂದು ಬಳ್ಳಾರಿಯಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಘಟನೆ ಎಂಎಸ್ ಎಂ ಇ ಮತ್ತು ಸ್ಟಾರ್ಟ್ ಅಪ್ ಸಮಿತಿ ವತಿಯಿಂದ ಎಸ್ ಐ ಆರ್ ಸಿ ಬಳ್ಳಾರಿ ಘಟಕದ ವತಿಯಿಂದ ಐಸಿಎಐ ಎಂಎಸ್ಎಂಇ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಐ ಎಂಎಸ್ಎಂಇ ಮಹೋತ್ಸವ ಕಾರ್ಯಕ್ರಮದ ನಿರ್ದೇಶಕ ಸಿಎ ಪನ್ನರಾಜ್ ಅವರು ಮಾತನಾಡಿ ಐಸಿಎಐ ಎಂಎಸ್ಎಂಇ ಮಹೋತ್ಸವ ಕಾರ್ಯಕ್ರಮವನ್ನು ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಎಂ. ಹನುಮಂತಪ್ಪ ಅವರು ಉದ್ಘಾಟಿಸಲಿದ್ದಾರೆ.
ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಕಾಂತ್ ಎಂ ಬಂಡಿವಾಡ, ವಿಎಸ್ ಕೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಸ್ ಎನ್ ರುದ್ರೇಶ್ ಅವರು ಆಗಮಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಸೌಥೇರಿಯನ್ ರೀಜನ್ ಸೆಂಟ್ರಲ್ ಕೌನ್ಸಿಲ್ ಮೆಂಬರ್ ಮೆಂಬರ್ ಸಿಎ ಮಧುಕರ್. ಎನ್. ಹಿರೇಗಾಂಗೇ, ರೀಜನಲ್ ಕೌನ್ಸಿಲ್ ಮೆಂಬರ್ ಸಿಎ ಬಿ ಈ ಪಂಪಣ್ಣ, ಎಸ್ ಐ ಸಿ ಎಂ ಎಸ್ ಎ ಮತ್ತು ಎಕ್ಸ್ ಆಫೀಸರ್ ಬಳ್ಳಾರಿ ಘಟಕದ ಚೇರ್ಮನ್ ಸಿಎ ಎನ್ ಪ್ರಮೊದ್ ಹೆಗ್ಡೆ ಅವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.