ರಾಮನಗರ: ಮುಂದೆ ಚುನಾವಣೆಗೆ ನಿಲ್ಲುವ ಸಂದರ್ಭ ಬಂದರೆ ನಾನು ರಾಮನಗರದಲ್ಲೇ ನಿಲ್ತೇನೆ ಎಂದು ಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು,
ಕುಮಾರಣ್ಣನವರು ನನಗೆ ಸಾಕಷ್ಟು ಬಾರಿ ಹೇಳಿದ್ದಾರೆ. ರಾಮನಗರಕ್ಕೆ ಒಂದೇ ಒಂದು ದಿನ ಹೋಗಿಲ್ಲ ಅಂದ್ರೂ ಅಲ್ಲಿನ ಜನ ನನ್ನ ಮುಖ್ಯಮಂತ್ರಿ ಮಾಡಿದ್ರು ಅಂತ.
Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ
ಅಷ್ಟು ಪ್ರೀತಿ ರಾಮನಗರ ಜನ ತೋರಿಸ್ತಾರೆ. ನಮ್ಮ ಕುಟುಂಬಕ್ಕೆ 6 ಬಾರಿ ಇಲ್ಲಿಂದ ಅವಕಾಶ ಕೊಟ್ಟಿದ್ದೀರಿ. ನಾನು ಮುಂದೆ ಚುನಾವಣೆ ನಿಲ್ಲುವ ಸಂದರ್ಭ ಬಂದರೆ ನಾನು ರಾಮನಗರದಲ್ಲೇ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಯಾರು ಕೂಡ ಮನಸ್ಸಿನಲ್ಲಿ ಗೊಂದಲ ಇಟ್ಟುಕೊಳ್ಳಬೇಡಿ. ನಾನು ಕಳೆದ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ರಾಮನಗರ ನಿಲ್ಲಬೇಕು ಅಂತಾ ತೀರ್ಮಾನ ಮಾಡಿದ್ದೆ. ನಾನು ಬೇರೆ ತೀರ್ಮಾನ ಕೂಡ ತೆಗೆದುಕೊಳ್ಳಬಹುದಿತ್ತು.
ಆದ್ರೆ ಈ ಕ್ಷೇತ್ರದ ಜನ ನಮ್ಮ ಕುಟುಂಬದ ಮೇಲೆ ಇಟ್ಟಿರೋ ಪ್ರೀತಿಗೆ ನಾವು ಜಿಲ್ಲೆ ಬಿಡಬಾರದು ಅಂತಾ ಇಲ್ಲೆ ಸ್ಪರ್ಧೆ ಮಾಡಿದೆ. ನಾವೇನಾದ್ರೂ ಜಿಲ್ಲೆ ಬಿಟ್ಟು ಹೋದ್ರೆ ಜಿಲ್ಲೆಯ ಜನರ ಪರಿಸ್ಥಿತಿ ಏನು ಅಂತಾ ಯೋಚನೆ ಮಾಡಿದ್ವಿ. ನಾನು ಬಹಳ ಚಿಕ್ಕೋನು, ಇಲ್ಲಿ ಸಾಕಷ್ಟು ಹಿರಿಯರಿದ್ದಾರೆ. ನನ್ನಿಂದ ಏನಾದ್ರೂ ತಪ್ಪು ನಡೆದಿದ್ರೆ ಕ್ಷಮೆ ಕೇಳ್ತೇನೆ ಎಂದು ಹೇಳಿದರು.