ನವದೆಹಲಿ: ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದರೆ, ಅವರ ನಾಶವು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ರೋಡ್ ಶೋ ಬಳಿಕ ದಾಹೋದ್ನಲ್ಲಿ 9000 HP ಪವರ್ ಇಂಜಿನ್ ಸ್ಥಾವರವನ್ನು ಉದ್ಘಾಟಿಸಿ ಮಾತನಾಡಿದ ಅವರು,
ನಾವು ಅವರನ್ನು 22 ನಿಮಿಷಗಳಲ್ಲಿ ಮಣ್ಣಿನಲ್ಲಿ ಹೂತುಹಾಕಿದ್ದೇವೆ. ವಿಭಜನೆಯ ನಂತರ ಹುಟ್ಟಿದ ದೇಶಕ್ಕೆ ಒಂದೇ ಒಂದು ಗುರಿ ಇತ್ತು, ಭಾರತಕ್ಕೆ ಹಾನಿ ಮಾಡುವುದು. ಆದರೆ ನಮ್ಮ ಗುರಿ ಅಭಿವೃದ್ಧಿ ಹೊಂದಿದ ಭಾರತವಾಗುವುದು, ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
ಭಯೋತ್ಪಾದಕರು ಒಬ್ಬ ವ್ಯಕ್ತಿಯನ್ನು ಅವನ ಮಕ್ಕಳ ಮುಂದೆಯೇ ಗುಂಡಿಕ್ಕಿ ಕೊಂದರು; ಆ ದೃಶ್ಯವನ್ನು ನೋಡಿದ ನಂತರ ಇಂದಿಗೂ ನನ್ನ ರಕ್ತ ಕುದಿಯುತ್ತಿದೆ” ಎಂದ ಮೋದಿ, ‘ಪಹಾಲ್ಗಾಮ್ ಉಗ್ರ ದಾಳಿಯ ನಂತರ ನಮ್ಮ ಮೂರೂ ಪಡೆಗಳಿಗೂ ಸ್ವಾತಂತ್ರ್ಯ ನೀಡಿದೆವು, ಆದ್ದರಿಂದ ನಮ್ಮ ವೀರ ಸೈನಿಕರು ಮೂರು ದಶಕಗಳಲ್ಲಿ ಜಗತ್ತು ನೋಡಿರದ ಕೆಲಸವನ್ನು ಮಾಡಿದರು” ಎಂದರು.