ವಿಜಯಪುರ:- ಸಿದ್ದರಾಮಯ್ಯ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಲಿ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ಹೊರ ಹಾಕಿದ್ದಾರೆ.
ಶ್ರೀ ಮದ್ದೂರಮ್ಮ ಜಾತ್ರಾ ಮಹೋತ್ಸವ : ಪಟ್ಟಣದಾದ್ಯಂತ ವಿಶೇಷ ದೀಪಾಲಂಕಾರ ಜೋರು!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ರ್ಯಾಲಿಯಲ್ಲಿ ಹೆಚ್ಚಿನ ಜನರು ಭಾಗಿಯಾಗಬೇಕು. ದುಡಿದ ಜನರಿಗೆ ಇಂದು ಸಂಬಳವಿಲ್ಲ, ದಿನನಿತ್ಯ ಬಳಿಕೆಯ ವಸ್ತುಗಳ ಬೆಲೆ ಏರುತ್ತಿದೆ. ಕುಡಿಯುವ ನೀರು ಸೇರಿದಂತೆ ಎಲ್ಲದಕ್ಕೂ ಹೆಚ್ಚಿನ ಬೆಲೆ.
ನಾನು 18 ವರ್ಷದಿಂದ ಇಂತಹ ಸರ್ಕಾರ ನೋಡಿಲ್ಲ. ಜನರಿಗೆ ಪ್ರೀಯಾಗಿ ಕೊಡುತ್ತೇನೆ ಎಂದು ಹೇಳಿ ಸಿದ್ದರಾಮಯ್ಯ ಇನ್ನೊಂದೆಡೆ ಬೆಲೆ ಏರಿಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಗೌರವ ಉಳಿಸಿಕೊಳ್ಳಬೇಕು ಎಂದರೆ ಮಂತ್ರಿಮಂಡಲ ತೊರೆಯಬೇಕು. ಇಂದು ಕಾಂಟ್ರ್ಯಾಕ್ಟರ್ ಗಳಿಗೆ ಬಿಲ್ಲು ಇಲ್ಲ. ಜನಗಣತಿ ಇಂದು ತರಲು ಹೊರಟಿದ್ದಕ್ಕೆ ಪ್ರಮುಖ ಕಾರಣ ಇವರ ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು. ರಾಜ್ಯದಲ್ಲಿ ಅಲ್ಪಸಂಖ್ಯಾತರು ದಲಿತರು ಎಂದು ಮತಕ್ಕಾಗಿ ಹೇಳುತ್ತಾರೆ. ಸಿದ್ದರಾಮಯ್ಯ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು. ಜಾತಿ ಜನಗಣತಿ ಇದು ವೈಜ್ಞಾನಿಕ ಅಲ್ಲ ಎಂದು ಅವರದ್ದೇ ಮಂತ್ರಿಗಳು ಹೇಳುತ್ತಿದ್ದಾರೆ ಎಂದರು.
ಜಾತಿ ಗಣತಿ ವಿಚಾರವಾಗಿ ಮಾತನಾಡಿ, ಅದು ಸೈಂಟಿಫಿಕ್ ಆಗಿದ್ರೆ ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಹರಿಜನರಿಗೆ ಮುಸ್ಲಿಂಮರಿಗೆ ತಂದು ತಲೆ ಮೇಲೆ ಕೂಡಿಸಿಕೊಂಡರೆ ಒಪ್ಪಿಕೊಳ್ಳುತ್ತಾರಾ. ಜಾತಿ ಗಣತಿ ಸೈಟಿಂಫಿಕ್ ಆಗಿದೆಯಾ…? ಅದನ್ನು ಯಾರೂ ಒಪ್ಪಿಕೊಳ್ಳಲ್ಲ, ನಾವಲ್ಲ ಅವರ ಕ್ಯಾಬಿನೆಟ್ ನಲ್ಲೇ ಹೊಡೆದಾಡುತ್ತಿದ್ದಾರೆ ಎಂದಿದ್ದಾರೆ.