Close Menu
Ain Live News
    Facebook X (Twitter) Instagram YouTube
    Friday, May 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Worldcup Final: ಮಳೆಯಿಂದ ಫೈನಲ್‌ ಪಂದ್ಯ ರದ್ದಾದರೆ ಐಸಿಸಿ ನಿಯಮದ ಪ್ರಕಾರ ಯಾವ ತಂಡಕ್ಕೆ ಪ್ರಶಸ್ತಿ ನೀಡಲಾಗುತ್ತದೆ?

    By AIN AuthorNovember 19, 2023
    Share
    Facebook Twitter LinkedIn Pinterest Email
    Demo

    ಅಹಮದಾಬಾದ್‌: ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯ ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಇಡೀ ಕ್ರಿಕೆಟ್‌ ಜಗತ್ತು ಎದುರು ನೋಡುತ್ತಿದೆ.

    ವಿಶ್ವದ ಎರಡು ದಿಗ್ಗಜ ತಂಡಗಳ ನಡುವಣ ವಿಶ್ವಕಪ್‌ ಫೈನಲ್‌ ಹೈವೋಲ್ಟೇಜ್‌ ಕದನ ಯಶಸ್ವಿಯಾಗಬೇಕೆಂದರೆ ಹವಾಮಾನ ಕೂಡ ಇಲ್ಲಿ ನಿರ್ಣಾಯಕವಾಗುತ್ತದೆ. ಪಂದ್ಯದ ದಿನ ಮಳೆ ಬಂದಿಲ್ಲವಾದರೆ ಯಾವುದೇ ಅಡೆತಡೆ ಇಲ್ಲದೆ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಯಶಸ್ವಿಯಾಗಿ ಮುಗಿಯಲಿದೆ. ಆ ಮೂಲಕ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಒಂದು ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಲಿದೆ.

    ಒಂದು ವೇಳೆ ಭಾನುವಾರ ಫೈನಲ್‌ಗೆ ಮಳೆ ಅಡ್ಡಿ ಉಂಟುಮಾಡಿದರೆ, ಮೀಸಲು ದಿನವಾದ ಸೋಮವಾರ ಪಂದ್ಯ ಮುಂದುವರಿಯಲಿದೆ. ಆದಾಗ್ಯೂ ಮೀಸಲು ದಿನವೂ ಮಳೆಯಿಂದ ಪಂದ್ಯ ರದ್ದಾದರೆ, ಯಾವ ತಂಡಕ್ಕೆ ಪ್ರಶಸ್ತಿ ನೀಡಲಾಗುತ್ತದೆ? ಐಸಿಸಿ ನಿಯಮಗಳು ಏನು ಹೇಳಲಿದೆ? ಎಂಬ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

    ಮೀಸಲು ದಿನ ಹಾಗೂ ಮುಂದುವರಿಯುವ ನಿಯಮ

    ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ವಿಶ್ವಕಪ್‌ ಫೈನಲ್ ನಿಗದಿತ ದಿನವಾದ ಭಾನುವಾರ ಮುಗಿದಿಲ್ಲವಾದರೆ, ಮೀಸಲು ದಿನವಾದ ಸೋಮವಾರ (ನ.20) ರಂದು ಮಧ್ಯಾನ 2 ಗಂಟೆಯಿಂದ ಮುಂದುವರಿಯಲಿದೆ. ನಿಗದಿತ ದಿನಾಂಕದಂದು ಪಂದ್ಯವನ್ನು ಮುಗಿಸಲು ಐಸಿಸಿ ಅಧಿಕಾರಿಗಳು ಎಲ್ಲಾ ರೀತಿಯಲ್ಲಿ ಪ್ರಯತ್ನ ನಡೆಸಲಿದೆ. ಪಂದ್ಯದ ದಿನ ಕನಿಷ್ಠ 20 ಓವರ್‌ಗಳನ್ನು ಎರಡೂ ತಂಡಗಳು ಮುಗಿಸಿಲ್ಲವಾದರೆ, ಮೀಸಲು ದಿನ ಪಂದ್ಯ ಮುಂದುವರಿಯಲಿ

    ಮಳೆಯಿಂದ ಮೀಸಲು ದಿನವೂ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಪ್ರಶಸ್ತಿ?

    ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದರೆ, ಡೆಕ್ವರ್ಥ್‌ ಲೂಯಿಸ್‌ ನಿಯಮ ಇಲ್ಲಿ ಪ್ರಧಾನ ಪಾತ್ರವಹಿಸಲಿದೆ. ಒಂದು ತಂಡ ಪ್ರಥಮ ಇನಿಂಗ್ಸ್‌ ಅನ್ನು ಪೂರ್ಣಗೊಳಿಸಿದ ಬಳಿಕ ದ್ವಿತೀಯ ಇನಿಂಗ್ಸ್‌ಗೆ ಮಳೆ ಅಡ್ಡಿ ಉಂಟುಮಾಡಿದರೆ, ಆಗ ಡಿಎಲ್‌ಎಸ್‌ ನಿಯಮ ಪ್ರಕಾರ ಪರಿಷ್ಕೃತ ಗುರಿಯನ್ನು ನೀಡಲಾಗುತ್ತದೆ. ಚೇಸಿಂಗ್‌ ತಂಡ ಕನಿಷ್ಠ 20 ಓವರ್‌ಗಳನ್ನೂ ಪೂರ್ಣಗೊಳಿಸದೆ, ಮೀಸಲು ದಿನವೂ ಮಳೆಗೆ ಬಲಿಯಾದರೆ ಆಗ ಐಸಿಸಿ ನಿಯಮದ ಪ್ರಕಾರ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    IPL 2025: ಫೈನಲ್ ತಲುಪಿದ ಆರ್ ಸಿಬಿಗೆ ವಿಶ್ ಮಾಡಿದ ವಿಜಯ್ ಮಲ್ಯ!

    May 30, 2025

    ಪಂಜಾಬ್ ಮಣಿಸಿ ಫೈನಲ್ ತಲುಪಿದ RCB: ಕ್ಯಾಪ್ಟನ್ ರಜತ್ ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರೂ!

    May 30, 2025

    IPL 2025: ಫೈನಲ್​ಗೇರಿದ ಆರ್ ಸಿಬಿ: ಸ್ಟೇಡಿಯಂ ನಲ್ಲಿ ಕುಣಿದು ಕುಪ್ಪಳಿಸಿದ ಆಟಗಾರರು!

    May 30, 2025

    IPL 2025: ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್​ಗೇರಿದ ಆರ್​ಸಿಬಿ: ಪಂಜಾಬ್ ಬೆಂಗಳೂರು ಕೊಟ್ಟ ಪಂಚ್ ಹೀಗಿತ್ತು!

    May 29, 2025

    RCB ಬೌಲರ್ ಗಳ ಆರ್ಭಟ: ಫೈನಲ್‌ಗೇರಲು ಬೆಂಗಳೂರಿಗೆ ಜಸ್ಟ್ 102 ರನ್‌ ಗುರಿ!

    May 29, 2025

    IPL 2025: ಇಂದು ಪಂಜಾಬ್-ಬೆಂಗಳೂರು ಫೈನಲ್ ಫೈಟ್: RCBಗೆ ಹೆಚ್ಚಿದ ಗಾಯದ ಚಿಂತೆ!

    May 29, 2025

    Jitesh Sharma: ನನ್ನ ಸ್ಪೋಟಕ ಆಟಕ್ಕೆ ಆರ್‌ಸಿಬಿಯಲ್ಲಿರುವ ಅಣ್ಣ ಕಾರಣ: ಜಿತೇಶ್!

    May 28, 2025

    ಲಕ್ನೋ ವಿರುದ್ಧ 6 ವಿಕೆಟ್ ಗಳ ಜಯ: ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಆರ್ ಸಿಬಿ!

    May 28, 2025

    IPL 2025: ಈ ಬಾರಿಯ ಐಪಿಎಲ್ ನಲ್ಲಿ ಫೈನಲ್ ತಂಡಗಳನ್ನು ಹೆಸರಿಸಿದ ರಾಬಿನ್ ಉತ್ತಪ್ಪ!

    May 27, 2025

    ಸಂಭಾವನೆ ಪಡೆಯದೇ ಅರಣ್ಯ ಇಲಾಖೆ ರಾಯಭಾರಿಯಾದ ಅನಿಲ್‌ ಕುಂಬ್ಳೆ

    May 27, 2025

    ಇಂದು RCB Vs LSG ಹೈ ವೋಲ್ಟೇಜ್ ಮ್ಯಾಚ್: ಮಳೆಯಿಂದ ಪಂದ್ಯ ರದ್ದಾದ್ರೆ ಯಾರಿಗೆ ಲಾಭ!?

    May 27, 2025

    IPL 2025: ಮುಂಬೈ ವಿರುದ್ಧ ಭರ್ಜರಿ ಗೆಲುವು: ಟೇಬಲ್ ಟಾಪರ್ ಆದ ಪಂಜಾಬ್‌ ಕಿಂಗ್ಸ್‌!

    May 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.