ದಾವಣಗೆರೆ:- ಪಕ್ಷ ಬಿಟ್ಟು ಹೋರಾಡುವ ತಾಕತ್ತಿದ್ರೆ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆಲ್ಲಲಿ ಎಂದು ಹೇಳುವ ಮೂಲಕ ಯತ್ನಾಳ್ ಗೆ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಕೃಷ್ಣಾ, ಭೀಮಾ ನದಿಗೆ ನೀರು ಬಿಡುಗಡೆ ಮಾಡಿ: ಮಹಾರಾಷ್ಟ್ರ ಸಿಎಂ ಗೆ ಸಿದ್ದರಾಮಯ್ಯ ಪತ್ರ!
ಈ ಸಂಬಂಧ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ರನ್ನು ಉಚ್ಚಾಟನೆಗೆ ಮೊದಲು ಟೀಕಿಸುತ್ತಿದ್ದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಈಗಲೂ ಅದನ್ನು ಮುಂದುವರಿಸಿದ್ದಾರೆ. ಹಿಂದೂ ಹುಲಿ ಅಂತ ಹೇಳಿಕೊಳ್ಳುವ ಯತ್ನಾಳ್ ಬಿಜೆಪಿ ಟಿಕೆಟ್ ನಿಂದ ಗೆದ್ದಿದ್ದು, ಅವರಲ್ಲಿ ಪಕ್ಷ ಬಿಟ್ಟು ಹೋರಾಡುವ ತಾಕತ್ತಿದ್ರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲಲಿ, ಗೆದ್ದರೆ ಅವರನ್ನು ಸತ್ಕರಿಸುತ್ತೇವೆ ಸನ್ಮಾನ ಮಾಡುತ್ತೇವೆ ಎಂದು ಹೇಳಿದರು.
ಯತ್ನಾಳ್ಗೆ ಬೇರೆಯವರನ್ನು ಬಯ್ಯುವುದಷ್ಟೇ ಗೊತ್ತು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ ಗೋಪಾಲ ಜೀ ಅವರನ್ನು ಬೈದಿರುವ ವಿಡಿಯೋ ಸಹ ತನ್ನ ಬಳಿ ಇದೆ ಎಂದು ರೇಣುಕಾಚಾರ್ಯ ಹೇಳಿದರು.