ವಿಜಯನಗರ:- ಮಹಿಖೆಯೊಬ್ಬರ ಸಿಸಿಎಲ್ ಖಾತೆಯಿಂದ ಅಕ್ರಮವಾಗಿ 1.41 ಕೋಟಿ ಹಣವನ್ನ ಅನುಮತಿ ಇಲ್ಲದೆ ಅಕ್ರಮವಾಗಿ ವರ್ಗಾವಣೆ ಮಾಡಿದ ಹಿನ್ನಲೆ ಕೋ ಆಪರೇಟಿವ್ ಬ್ಯಾಂಕ್ ಒಂದರ ಮ್ಯಾನೇಜರ್,ಜನರಲ್ ಮ್ಯಾನೇಜರ್ ಹಾಗೂ ಅಧ್ಯಕ್ಷನ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ನನಗೆ ಜಾತಿಗಳ ಬಗ್ಗೆ ನಂಬಿಕೆ ಇಲ್ಲ, ನನ್ನ ಜಾತಿ ಕನ್ನಡ ಮಾತ್ರ: ವಾಟಾಳ್ ನಾಗರಾಜ್!
ಹೂಟಗಳ್ಳಿಯಲ್ಲಿರುವ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಪ್ರಕರಣ ನಡೆದಿದ್ದು ವಂಚನೆಗೆ ಒಳಗಾದ ಸುನಿತ ಎಂಬುವರು ಮ್ಯಾನೇಜರ್ ಶಿವಕುಮಾರ್,ಜನರಲ್ ಮ್ಯಾನೇಜರ್ ಸುರೇಶ್ ಹಾಗೂ ಅಧ್ಯಕ್ಷ ಬಸಂತ್ ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸುನಿತಾ ಮಹಿಳಾ ಮಂಡಳಿ ಅಧ್ಯಕ್ಷರಾದ ಸುನಿತಾ ರವರು ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಸಿಸಿಎಲ್ ಖಾತೆ ಹೊಂದಿದ್ದಾರೆ.ಈ ಹಿಂದೆ ಸಾಲಕ್ಕಾಗಿ ಕೆಲವು ಚೆಕ್ ಗಳನ್ನ ನೀಡಿದ್ದರು.ಚೆಕ್ ಗಳನ್ನ ಬಳಸಿಕೊಂಡು ಸಿಸಿಎಲ್ ಖಾತೆಯಿಂದ ಸುನಿತಾ ರವರ ಉಳಿತಾಯ ಖಾತೆಗೆ 1,41,50,000/- ಹಣವನ್ನ ಯಾವುದೇ ಅನುಮತಿ ಪಡೆಯದೆ ವರ್ಗಾವಣೆ ಮಾಡಿದ್ದಾರೆ.ನಂತರ ಉಳಿತಾಯ ಖಾತೆಯಿಂದ ಎರಡು ಖಾತೆಗಳಿಗೆ ತಲಾ 1,25,00,000/ ಹಾಗೂ 16,00,000/- ಲಕ್ಷ ವರ್ಗಾವಣೆ ಮಾಡಿ ನಂಬಿಕೆ ದ್ರೋಹ ಮಾಡಿದ್ದಾರೆಂದು ಸುನಿತಾ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.ಇವೆಲ್ಲಾ ವಹಿವಾಟುಗಳು ನಡೆದಾಗ ಸಂದೇಶಗಳನ್ನ ಮೊಬೈಲ್ ಗೆ ಬಾರದಂತೆ ಮುನ್ನೆಚ್ಚರಿಕೆ ವಹಿಸಿ ವಂಚನೆ ಮಾಡಿದ್ದಾರೆಂದು ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ…