Close Menu
Ain Live News
    Facebook X (Twitter) Instagram YouTube
    Saturday, May 10
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ದೇಶಕ್ಕಾಗಿ ʼಆʼ ಧೃಡನಿರ್ಧಾರ ತೆಗೆದುಕೊಂಡ ನಟ ಕಮಲ್‌ ಹಾಸನ್!‌

    By Author AINMay 9, 2025
    Share
    Facebook Twitter LinkedIn Pinterest Email
    Demo

    ಶತ್ರುರಾಷ್ಟ್ರ ಪಾಕಿಸ್ತಾನದ ಮೇಲೆ ಭಾರತೀಯ ಸೇನಾ ದಾಳಿ ಮುಂದುವರೆದಿದೆ. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತ್ರೀ ಮಾಡಿದೆ. ಭಾರತದ ದಾಳಿಗೆ ಪತರುಗುಟ್ಟಿರುವ ಪಾಕ್‌ ಸೇನೆಯ ಪುಂಡಾಟ ಮುಂದುವರೆದಿದ್ದು, ಎಲ್‌ಒಸಿ ಗಡಿದಾಟಿ ಭಾರತದ ಮೇಲೆ ದಾಳಿ ಪ್ರಯತ್ನ ಮಾಡಿ ವಿಫಲಗೊಂಡಿದೆ. ಪಾಕ್‌ ದಾಳಿ ಬೆನ್ನಲ್ಲೇ ಭಾರತ ಸೇನೆ ಪ್ರತ್ಯುತ್ತರ ಕೊಟ್ಟಿದೆ. ಸದ್ಯ ಈ ಎರಡು ದೇಶ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಒಂದ್ಕಡೆ ಬಿಸಿಸಿಐ ಐಪಿಎಲ್‌ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಇದರ ಬೆನ್ನಲ್ಲೇ ಕಮಲ್‌ ಹಾಸನ್‌ ಕೂಡ ದೇಶಕ್ಕಾಗಿ ಆ ಧೃಡ ನಿರ್ಧಾರ ತೆಗೆದುಕೊಂಡಿದ್ದಾರೆ.

    ತಮಿಳು ಚಿತ್ರರಂಗದ ಉಳಗನಾಯಗನ್‌ ಕಮಲ್‌ ಹಾಸನ್‌ ಥಗ್ಸ್‌ ಲೈಫ್‌ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಭಾರತ ಪಾಕ್‌ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಸಿನಿಮಾದ ಆಡಿಯೋ ಲಾಂಚ್‌ ಕಾರ್ಯಕ್ರಮವನ್ನು ಪೋಸ್ಟ್‌ ಪೋನ್‌ ಮಾಡಿದೆ. ದೇಶದಲ್ಲಿ ಯುದ್ದದ ವಾತಾವರಣವಿದ್ದು, ಈ ಸಂದರ್ಭದಲ್ಲಿ ನಮ್ಮ ದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಈ ನಿರ್ಧಾರ ಮಾಡಿದ್ದಾರೆ.

    ಚೆನ್ನೈನಲ್ಲಿ ಇದೇ ತಿಂಗಳ 16ರಂದು ಥಗ್‌ ಲೈಫ್‌ ಸಿನಿಮಾದ ಆಡಿಯೋ ಲಾಂಚ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಂದೂಡಿರುವ ಬಗ್ಗೆ ಪತ್ರ ಬರೆದಿರುವ ಅವರು, ಭಾರತ ಮೊದಲು, ನಂತರ ಕಲೆ. ದೇಶದ ಸೈನಿಕರು ಗಡಿಯಲ್ಲಿ ನಿಂತು ಹೋರಾಡುತ್ತಿರುವ ಸಂದರ್ಭದಲ್ಲಿ ವೈಯಕ್ತಿಕ ಸಂಭ್ರಮಾಚರಣೆ ಮಾಡುವ ಸಮಯವಲ್ಲ. ಹೀಗಾಗಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

    ಥಗ್‌ ಲೈಫ್‌ ಸಿನಿಮಾಗೆ ಮಣಿರತ್ನಂ ಆಕ್ಷನ್‌ ಕಟ್‌ ಹೇಳಿದ್ದಾರೆ. ಕಮಲ್ ಹಾಸನ್, ತ್ರಿಷಾ ಕೃಷ್ಣನ್, ಸಿಂಭು ನಟಿಸಿದ್ದು, ಕಮಲ್‌ ಹಾಸನ್‌ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಮಲ್‌ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಕಿಚ್ಚನಿಂದ ಪ್ರಧಾನಿಗೆ ಪತ್ರ…ಜೈ ಹಿಂದ್. ಜೈ ಕರ್ನಾಟಕ. ಜೈ ಭಾರತ ಎಂದ ಸುದೀಪ್! ‌

    May 10, 2025

    ʼಆಪರೇಷನ್‌ ಸಿಂಧೂರʼ ಸಿನಿಮಾದ ಪೋಸ್ಟರ್‌ ಬಿಡುಗಡೆ..ಯಾರು ಹೀರೋ?

    May 10, 2025

    ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ..ಸೀರಿಯಲ್‌ನತ್ತ ಬಹುಭಾಷಾ ನಟ ಸುಮನ್

    May 10, 2025

    ಹೊಸ ಮನೆ ಗೃಹಪ್ರವೇಶದ ಸಂಭ್ರಮದಲ್ಲಿ ಅಣ್ಣಯ್ಯ ಸೀರಿಯಲ್‌ ನಟಿ ನಿಶಾ!

    May 10, 2025

    ರಜನಿ ಜೈಲರ್-2ಗಾಗಿ ಬಾಲಯ್ಯ ಜೇಬಿಗಿಳಿಸಿಕೊಂಡಿದ್ದು ಎಷ್ಟು ಕೋಟಿ ಗೊತ್ತಾ?

    May 10, 2025

    India Pakistan War: ಪಾಕಿಸ್ತಾನವನ್ನು ವಿಶ್ವದ ಮ್ಯಾಪ್ʼನಿಂದಲೇ ತೆಗೆದು ಹಾಕಬೇಕು: ಕಂಗನಾ ರಣಾವತ್

    May 10, 2025

    Chaithra Kundapura: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಫೈರ್‌ಬ್ರ್ಯಾಂಡ್ ಚೈತ್ರಾ ಕುಂದಾಪುರ..!

    May 9, 2025

    ಉಗ್ರರ ಮೇಲಿನ ಭಾರತದ ದಾಳಿ ಖುಷಿ ಪಡುವ ವಿಚಾರ: ಡಾಲಿ ಧನಂಜಯ್!

    May 8, 2025

    ‘ಜವಾ’ ಸವಾರಿಗಿಳಿದ ರಾಜವರ್ಧನ್..ಡಿಂಗ್ರಿ ನಾಗರಾಜ್‌ ಪುತ್ರ ಈಗ ಪ್ರೊಡ್ಯೂಸರ್

    May 8, 2025

    ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ರಾಗಿಣಿ…ಮತ್ತೆ ಬಣ್ಣ ಹಚ್ಚಿದ ಕುಮಾರ್‌ ಬಂಗಾರಪ್ಪ!

    May 8, 2025

    ಕನ್ನಡದ ಹೃತಿಕ್‌ ರೋಷನ್‌ ಸ್ಟೈಲೀಶ್‌ ಪೋಸ್..ಮದುಮಗನಂತೆ ಮಿಂಚಿದ ಇಂದ್ರಜಿತ್‌ ಲಂಕೇಶ್‌ ಪುತ್ರ!

    May 8, 2025

    ʼಆಪರೇಷನ್‌ ಸಿಂಧೂರʼ ಸಿನಿಮಾ ಮಾಡಲು ಮುಗಿಬಿದ್ದ ನಿರ್ಮಾಪಕರು..ಯಾರ ಪಾಲಾಗಲಿದೆ ಟೈಟಲ್?‌

    May 8, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.