ಧಾರವಾಡ: ತಾವರೆಕೆರೆಯಲ್ಲಿ ಮಹಿಳೆಯೊಬ್ಬರ ಮೇಲೆ ಅಮಾನವೀಯವಾಗಿ ತಾಲಿಬಾನಿ ರೀತಿಯಲ್ಲೇ ಹಲ್ಲೆ ನಡೆಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಸಂತೋಷ ಲಾಡ್, ಆ ಹಲ್ಲೆಯನ್ನು ತಾಲಿಬಾನಿಗೆ ಹೋಲಿಸಬೇಡಿ ಎಂದಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ತಾವರೆಕೆರೆಯಲ್ಲಿ ನಡೆದ ಈ ಹಲ್ಲೆ ತಾಲಿಬಾನಿ ರೀತಿಯಲ್ಲಿ ನಡೆದಿದೆ ಎನ್ನುವುದಾದರೆ ಮಣಿಪುರದಲ್ಲಿ ಆಗಿದ್ದು ಏನು? ಎಂದು ಸಚಿವರು ಪ್ರಶ್ನಿಸಿದರು.
ಹುಡುಗಿಯರೇ ನೀವು ಕೂಡ ಮೆಡಿಮಿಕ್ಸ್ ಸೋಪ್ ಬಳಸ್ತಿದ್ದೀರಾ? ಇದು ಖಂಡಿತ ನಿಮಗಲ್ಲ!
ರಾಜ್ಯದಲ್ಲಿ ಇಂತಹ ಘಟನೆಗಳು ಸಾಕಷ್ಟು ಆಗಿರುತ್ತವೆ. ಅಂತವುಗಳಿಗೆ ತಾಲಿಬಾನಿ ಪದ ಬಳಕೆ ಮಾಡುವುದು ಸರಿಯಲ್ಲ. ಮಣಿಪುರದಲ್ಲಿ ಎರಡು ವರ್ಷಗಳಿಂದ ಏನಾಗುತ್ತಿದೆ? ಇಲ್ಲಿ ಆಗಿರುವುದಕ್ಕೆ ತಾಲಿಬಾನಿ ಪದ ಬಳಸಬೇಡಿ ಎಂದು ಸಚಿವ ಲಾಡ್ ಮನವಿ ಮಾಡಿದರು.